ಹೊರ ಗುತ್ತಿಗೆ ಸಿಬ್ಬಂದಿಗಳಿಗೆ ಪ್ರತಿ ತಿಂಗಳು 5 ರಂದು ವೇತನ ನೀಡಿ – ಏಪ್ರಿಲ್ 1 ರಿಂದ ಹೊಸ ವೇತನ ಜಾರಿ : ಹುಲುಗಪ್ಪ ಚಲವಾದಿ.
ಹುನಗುಂದ ಆಗಷ್ಟ.18

ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಳೆದ 8 ರಿಂದ 10 ವರ್ಷಗಳಿಂದ ಹೊರ ಸಂಪನ್ಮೂಲ ಸಿಬ್ಬಂದಿಗಳಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಇಲ್ಲಿವರಿಗೂ ನೇಮಕಾತಿ ಪತ್ರ ನೀಡಿಲ್ಲ ಮತ್ತು ಪಿಎಫ್ ಮತ್ತು ಇಎಸ್ಆಯ್ ಮಾಹಿತಿ ನೀಡದೇ ಇರುವ ಪ್ರೋಸ್ಕ್ವೆರ್ ಎಜೆನ್ಸಿ ಮ್ಯಾನೇಜರ್ನ್ನು ಹೊರ ಸಂಪನ್ಮೂಲ ಸಿಬ್ಬಂದಿಗಳ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಹುಲಗಪ್ಪ ಚಲವಾದಿ ತರಾಟೆಗೆ ತಗೆದುಕೊಂಡ ಘಟನೆ ನಡೆಯಿತು.ಶುಕ್ರವಾರ ಪಟ್ಟಣದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹೊರ ಸಂಪನ್ಮೂಲ ಸಿಬ್ಬಂದಿಗಳಾದ ಅಡುಗೆಯವರು,ಅಡುಗೆ ಸಹಾಯಕರು,ಹಾಗೂ ರಾತ್ರಿ ಕಾವಲುಗಾರರ ಕುಂದು ಕೊರತೆ ಸಭೆಯ ಮುಖ್ಯ ಅಥಿತಿಗಳಾಗಿ ಮಾತನಾಡಿ ಅವರು ಎಜೆನ್ಸಿ ತಗೆದುಕೊಂಡ ತಕ್ಷಣವೇ ಸಿಬ್ಬಂದಿಗಳಿಗೆ ನೇಮಕಾತಿ ಪತ್ರ ನೀಡಬೇಕು.ಪಿಎಫ್ ಮತ್ತು ಇಎಸ್ಆಯ್ ಕುರಿತು ಮಾಹಿತಿ ನೀಡಬೇಕು.ಅದು ಪ್ರತಿಯೊಬ್ಬ ಸಿಬ್ಬಂದಿಗಳ ಮೋಬೈಲ್ಗೆ ಮೆಸೇಜ್ ಬರುವಂತೆ ನೋಡಿಕೊಳ್ಳಬೇಕು.ಸರ್ಕಾರ ನೀಡುವ ಸಂಬಳದಲ್ಲಿ ಯಾವದೇ ಕಡಿತ ಮಾಡದೇ ಸಿಬ್ಬಂದಿಗಳ ಖಾತೆಗೆ ನೇರವಾಗಿ ಜಮೆ ಮಾಡಬೇಕು.ಅದು ಪ್ರತಿ ತಿಂಗಳ 5 ನೇಯ ತಾರೀಖಿನೊಳಗಾಗಿ ಸಂಬಳ ಮಾಡಬೇಕೆಂದು ಎಜೆನ್ಸಿಯವರಿಗೆ ತಾಕಿತ್ತು ಮಾಡಿದರು.ಇನ್ನು ಸಮಾಜ ಕಲ್ಯಾಣ ಇಲಾಖೆಯ ಹೊರ ಸಂಪನ್ಮೂಲ ಸಿಬ್ಬಂದಿಗಳನ್ನು ಖಾಯಂಗೊಳಿಸುವಂತೆ ಸರ್ಕಾರಕ್ಕೆ ಸಾಕಷ್ಟು ಮನವಿಯನ್ನು ಸಲ್ಲಿಸಲಾಗಿದೆ ಮತ್ತು ಹೊರ ಗುತ್ತಿಗೆಯ ಸಿಬ್ಬಂದಿಗಳ ಕುಂದುಕೊರತೆ ಸಭೆಯನ್ನು ನಡೆಸುವಂತೆ ಬಾಗಲಕೋಟಿ ಸಿ.ಇ.ಓ ಅವರಿಗೆ ಮನವಿ ಸಲ್ಲಿಸಿದಾಗ ಅದಕ್ಕೆ ಸ್ಪಂದಿಸಿದ್ದರಿಂದ ಈ ಸಭೆ ನಡೆದಿದೆ.ಕಳೆದ ಎಪ್ರೀಲ್ 1ರಿಂದ ಹೊಸ ವೇತನ ಜಾರಿಯಾಗಿದ್ದು ಅದರ ಪ್ರಕಾರ ಅಡುಗೆಯವರಿಗೆ ಪ್ರತಿ ತಿಂಗಳು 13,473 ರೂ ಅಡುಗೆ ಸಹಾಯಕರಿಗೆ 12.740 ರೂ ರಾತ್ರಿ ಕಾವಲುಗಾರರಿಗೆ 11.704 ರೂ ವೇತನ ಮಂಜೂರಾತಿಯಾಗಿದೆ ಎಂದರು.ಹೊರ ಸಂಪನ್ಮೂಲ ಸಿಬ್ಬಂದಿಗಳ ಸಂಘದ ಜಿಲ್ಲಾಧ್ಯಕ್ಷ ದೇಶಪಾಂಡೆ ಮಾತನಾಡಿ ಹೊರ ಸಂಪನ್ಮೂಲ ಸಿಬ್ಬಂದಿಗಳು ತಮ್ಮ ಸಮಸ್ಯಗಳನ್ನು ನೇರವಾಗಿ ಇಂತಹ ಸಭೆಯಲ್ಲಿ ಮುಕ್ತವಾಗಿ ಹಂಚಿಕೊಂಡರೆ ಅದಕ್ಕೆ ಪರಿಹಾರ ಒದಗಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.ಪತ್ರಕರ್ತ ಮಲ್ಲಿಕಾರ್ಜುನ ಹೊಸಮನಿ ಮಾತನಾಡಿ ಸಮಾಜ ಕಲ್ಯಾಣ ಇಲಾಖೆಯಡಿ ವಿವಿಧ ವಸತಿ ನಿಲಯದಲ್ಲಿ ಕಾರ್ಯ ನಿರ್ವಹಿಸುವ ಹೊರ ಸಂಪನ್ಮೂಲ ಸಿಬ್ಬಂದಿಗಳು ಕಾಯಕ ಜೀವಿಗಳು.ಎಜೆನ್ಸಿಯವರಿಂದ ಕೊಡುವ ಸಂಬಳದಲ್ಲಿ ಕುಟುಂಬ ನಿರ್ವಹಣೆ ಕಷ್ಟ.ಎಜೆನ್ಸಿ ತಗೆದುಕೊಂಡವರು ಸಿಬ್ಬಂದಿಗಳಿಗೆ ಬೇಕಾದ ಮೂಲಭೂತ ಸೌಲಭ್ಯ ಮತ್ತು ಸಂಬಳವನ್ನು ನಿಗಧಿತ ಸಮಯಕ್ಕೆ ನೀಡಬೇಕು ಎಂದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಕಟ್ಟಿಮನಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ಹೊರ ಗುತ್ತಿಗೆ ಆಧಾರದಲ್ಲಿ ವಸತಿ ನಿಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಸಂಬಳವನ್ನು ನಿಲ್ಲಿಸದೇ ಪ್ರತಿ ತಿಂಗಳ ಸಂಬಳ ಮಾಡಿಸುವ ಜವಾಬ್ದಾರಿ ಇಲ್ಲಿವರಗೂ ಪ್ರಾಮಾಣಿಕವಾಗಿ ಮಾಡಿದ್ದೇನೆ.ನಿಮ್ಮ ಸಮಸ್ಯೆಗಳು ಏನೇ ಇದ್ದರೂ ಸಂಬಂಧಿಸಿದ ವಸತಿ ನಿಲಯದ ವಾರ್ಡನ್ ಮೂಲಕ ನನಗೆ ತಿಳಿಸುವ ವ್ಯವಸ್ಥೆ ಮಾಡಬೇಕು ಎಂದರು.ಈ ಸಂದರ್ಭಲ್ಲಿ ಪ್ರೋಸ್ಕ್ವೆರ್ ಎಜೆನ್ಸಿ ಮ್ಯಾನೇಜರ್ ಮಹಾಂತೇಶ ಕೊಕಟನೂರ,ಹೊರ ಸಂಪನ್ಮೂಲ ಸಿಬ್ಬಂದಿಗಳ ಸಿಗುವ ಸಂಬಳ ಮತ್ತು ಪಿಎಫ್ ಹಾಗೂ ಇಎಸ್ಆಯ್ ಕುರಿತು ಮಾಹಿತಿ ನೀಡಿದರು.ನಂತರ ಹೊರ ಗುತ್ತಿಗೆ ಸಿಬ್ಬಂದಿಗಳಿಗೆ ನೇಮಕಾತಿ ಪತ್ರ ಮತ್ತು ಇಎಸ್ಆಯ್ ಕಾರ್ಡನ್ನು ವಿತರಿಸಲಾಯಿತು.ವೇದಿಕೆಯಲ್ಲಿ ಪತ್ರಕರ್ತ ಮಲ್ಲಿಕಾರ್ಜುನ ಬಂಡರಗಲ್ಲ,ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧೀಕ್ಷಕಿ ರೇಣುಕಾ ದಿಡ್ಡಿಬಾಗಿಲು,ವಾರ್ಡನ್ ಕಲ್ಮೇಶ ಭಜಂತ್ರಿ,ಗಂಗಪ್ಪ ನಾರಗಲ್ಲ,ನಾಗರತ್ನಾ ಮಾದರ,ಅಕ್ಕಮಹಾದೇವಿ ಗಡ್ಡಿ,ಹುಚ್ಚೇಶ ಅಚನೂರ,ಮಲ್ಲು ಚಲವಾದಿ, ಲಕ್ಷ್ಮಣ ಮಾದರ ಸೇರಿದಂತೆ ಅನೇಕರು ಇದ್ದರು.ವಾರ್ಡನ್ ವಿದ್ಯಾಧರ ಹುನಗುಂದ ನಿರೂಪಿಸಿ ವಂದಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ