21 ರಿಂದ 23 ರವರೆಗೆ ಅಮಲು ಮುಕ್ತ ಮತ್ತು ಯುವ ಜನತೆಯ, ಮೂರು ದಿನಗಳ ಕಾಲ – ಸಾರ್ವಜನಿಕ ಕುರ್ ಆನ್ ಪ್ರವಚನದ ಸಮಾರೋಪ ಜರುಗಿತು.

ತಾಳಿಕೋಟೆ ಫೆ.24

ಇಲ್ಲಿನ ಜಮಾಅತೆ ಇಸ್ಲಾಮೀ ಹಿಂದ ಸಂಘಟನೆ ವತಿಯಿಂದ ದಿನಾಂಕ ಫೆಬ್ರುವರಿ 21 ರಿಂದ 23 ರವರೆಗೆ ಅಮಲು ಮುಕ್ತ ಸಮಾಜ ಮತ್ತು ಯುವ ಜನತೆ, ಸುಭದ್ರ ಕುಟುಂಬ ಸದೃಡ ಸಮಾಜ ಹಾಗೂ ಯಶಸ್ವೀ ಜೀವನ, ಕ್ರಮವಾಗಿ ಮೂರು ದಿನಗಳ ಕಾಲ ನಡೆದ ಸಾರ್ವಜನಿಕ ಕುರ್ ಆನ್ ಪ್ರವಚನದ ಸಮಾರೋಪ ಕಾರ್ಯಕ್ರಮ ನಡೆಯಿತು,ಮೂರು ದಿನಗಳ ಕಾಲ ಕುರ್ ಆನ್ ಪ್ರವಚನ ನೀಡಿದ ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕರು, ಖ್ಯಾತ ವಾಗ್ಮಿಗಳಾದ ಮುಹಮ್ಮದ ಕುಂಞಯವರು ಯಶಸ್ವಿ ಜೀವನದ ಬಗ್ಗೆ ಮಾತನಾಡಿ, ಮನುಷ್ಯನಿಗೆ ಜೀವನದಲ್ಲಿ ಮೌಲ್ಯಗಳಿರ ಬೇಕು, ಮೌಲ್ಯಗಳಿರದ ಜೀವನ ದೇವನಿಗೆ ಮೆಚ್ಚುಗೆ ಯಾಗುವುದಿಲ್ಲ, ಮತ್ತು ಮೌಲ್ಯಗಳು ಸ್ವಾರ್ಥದಿಂದ ಮುಕ್ತವಾಗಿರಬೇಕು, ಇವತ್ತಿನ ಕಾಲದ ಸಮಸ್ಯೆ ಯೆಂದರೆ ಸಂಬಂಧಗಳಲ್ಲಿ ಹೊಡಕಿರುವುದು, ಸಂಬಂಧಗಳನ್ನು ಬಲಪಡಿಸಿದಾಗ ಮಾತ್ರ ಯಶಸ್ವೀ ಜೀವನ ನಡೆಸಲು ಸಾಧ್ಯ ಎಂದರು, ನಾಳೆ ಮನುಷ್ಯ ಸತ್ತು ಹೋದ ಮೇಲೆ ನಾನೊಬ್ಬ ಒಳ್ಳೆಯ ಡಾಕ್ಟರ, ನಾನೊಬ್ಬ ಒಳ್ಳೆಯ ರಾಜಕಾರಣಿ, ಅಥವಾ ನಾನೊಬ್ಬ ಒಳ್ಳೆಯ ಭಾಷಣಕಾರ ಅನಿಸಿ ಕೊಳ್ಳುವುದಕ್ಕಿಂತ ನಾನೊಬ್ಬ ಒಳ್ಳೆಯ ಮನುಷ್ಯ ಎಂದು ನನಗೆ ಗುರುತಿಸಿ ಕೊಳ್ಳಲು ಸಾದ್ಯವಾದರೆ ಅದುವೇ ಯಶಸ್ವೀ ಜೀವನ ಎಂದರು, ಸಾನಿಧ್ಯ ವಹಿಸಿದ ಶ್ರೀ ಚನ್ನವೀರ ಮಹಾ ಸ್ವಾಮಿಗಳು ಭಾವ್ಯಕ್ಯತಾ ವಿರಕ್ತಮಠ ಕುಂಟೋಜಿ, ಹಾಗೂ ಗುಂಡಕನಾಳ ಬೃಹನ್ಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ದೇವರ ಹಿಪ್ಪರಗಿ ಕ್ಷೇತ್ರದ ಶಾಸಕರಾದ ಶ್ರೀ ರಾಜುಗೌಡ ಪಾಟೀಲ ಮಾತನಾಡಿ ಜಾತಿ ಜಾತಿಗಳ ಮಧ್ಯೆ ಕಂದಕ ವೇರ್ಪಟ್ಟಿರುವ ಈ ಕಾಲದಲ್ಲಿ ಜಮಾಅತೆ ಇಸ್ಲಾಮೀ ಹಿಂದ ಸಂಘಟನೆಯವರು ಸೌಹಾರ್ದತೆಯನ್ನು ಬೆಸೆಯುತ್ತಿದ್ದಾರೆ ಎಂದರು, ಅಧ್ಯಕ್ಷ ಸ್ಥಾನ ವಹಿಸಿದ ಜಮಾಅತೆ ಇಸ್ಲಾಮಿಯ ರಾಜ್ಯಾಧ್ಯಕ್ಷರಾದ ಡಾ, ಮುಹಮ್ಮದ ಸಾದ ಬೆಳಗಾಮಿ ಮಾತನಾಡಿ ಮನುಷ್ಯ ತನ್ನ ಸಂಪೂರ್ಣ ಜೀವನದಲ್ಲಿ ನೈತಿಕ ಗುಣಗಳನ್ನು ಬೆಳೆಸಿ ಕೊಂಡು ಇನ್ನೊಬ್ಬರಿಗೆ ತೊಂದರೆ ಉಂಟು ಮಾಡದೇ ಬದುಕಬೇಕು ಪರರಿಗೆ ಹಿತವನ್ನು ಬಯಸಿ ತೃಪ್ತಿಕರವಾಗಿ ಜೀವನ ನಡೆಸುವುದೇ ಯಶಸ್ವೀ ಜೀವನ ಎಂದರು.ವೇದಿಕೆ ಮೇಲೆ ವಿಜಯಪೂರ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಶ್ರೀ ಪ್ರಭುಗೌಡ ದೇಸಾಯಿ, ಮುದ್ದೇಬಿಹಾಳ ಬಿ ಇ ಓ ಶ್ರೀ ಬಿ ಎಸ್ ಸಾವಳಗಿ ಮತ್ತು ಶ್ರೀ ವಾಸುದೇವ ಹೆಬಸೂರ, ಸರ್ವಜ್ಞ ವಿಧ್ಯಾಪೀಠ ತಾಳಿಕೋಟಿ ಇದರ ಅಧ್ಯಕ್ಷರಾದ ಶ್ರೀ ಸಿದ್ಧನಗೌಡ ಮಂಗಳೂರ ಶ್ರೀ ರಾಜಶೇಖರ ನಡುವಿನಮನಿ, ಎ ಎಸ್ ಪಾಟೀಲ, ಮಹಮ್ಮದ ರಫೀಕ್ ಬೇಪಾರಿ, ಎ ಕೆ ಬಾಗವಾನ, ಮುಹ್ಮದ ಯೂಸುಫ್ ಡೋಣಿ, ಮೆಹಬೂಬ ಆಲಂ ಬಡಗನ್ ಮೋದಿನಸಾಬ ನಗಾರ್ಚಿ, ಶ್ರೀಮತಿ ಕೌಸರ ಫಾತಿಮಾ ಮ್ಹೇತ್ರಿ, ಶ್ರೀಮತಿ ಗಿರಿಜಾಬಾಯಿ ಕೊಡಗಾನೂರ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಮೌಲಾನಾ ಮುಹ್ಮದ ಯೂಸುಫ ಡೋಣಿ ಕುರಾನ ಪಠಣಗೈದರು, ಇಳಕಲ್ಲಿನ ಖ್ಯಾತ ಭಾಷಣಕಾರ ಜನಾಬ ಲಾಲ್ ಹುಸೇನ ಕಂದಗಲ್ಲ ಪ್ರಾಸ್ತಾವಿಕ ನುಡಿದರು, ಜಮಾಅತೆ ಇಸ್ಲಾಮೀಯ ಸ್ಥಾನೀಯ ಅಧ್ಯಕ್ಷ ಜನಾಬ ಮುಜಾಹೀದ ನಮಾಜಕಟ್ಟಿ ನಿರೂಪಿಸಿ ವಂದಿಸಿದರು.

ಜಿಲ್ಲಾ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಅಬ್ದುಲ್.ಗಫಾರ್.ತಹಶೀಲ್ದಾರ.ಇಲಕಲ್ಲ.ಬಾಗಲಕೋಟ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button