ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬಿಡುಗಡೆ ಮಾಡಿದ – ಸಿ.ಕೆ ಕುದರಿ.
ದೇವರ ಹಿಪ್ಪರಗಿ ಡಿ.14

ಡಿಸೆಂಬರ್ 27, ರಂದು ನಡೆಯಲಿರುವ ದೇವರ ಹಿಪ್ಪರಗಿ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಮಾದರಿ ಸಮ್ಮೇಳನವನ್ನಾಗಿ ವಿಜೃಂಭಣೆಯಿಂದ ಆಚರಿಸೋಣ ಹಾಗೂ ನಾವೆಲ್ಲರೂ ಸಮ್ಮೇಳನದ ಯಶಸ್ಸಿಗೆ ಅವಿರತವಾಗಿ ಶ್ರಮಿಸೋಣ ಎಂದು ವಿಜಯಪುರದ ಅನುಗ್ರಹ ಆಸ್ಪತ್ರೆಯ ಮುಖ್ಯಸ್ಥರಾಗಿರುವ ಡಾ, ಪ್ರಭುಗೌಡರ.ಬ ಪಾಟೀಲ ಲಿಂಗದಳ್ಳಿ ಅವರು ಹೇಳಿದರು. ದೇವರ ಹಿಪ್ಪರಗಿ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬಿಡುಗಡೆ ಮಾಡಿ ಮಾತನಾಡಿದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ ಕುದರಿಯವರು ಸಮ್ಮೇಳನದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸೋಣ ಹಾಗೂ ಅರ್ಥ ಪೂರ್ಣವಾಗಿ ಗೋಷ್ಟಿಗಳನ್ನು ಹಮ್ಮಿಕೊಳ್ಳೋಣ ಎಂದರು.

ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಯಲಗಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸೀರಸೇಠ ಬೇಪಾರಿ, ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್ ವಾಲೀಕಾರ, ಕಸಾಪ ತಾಲೂಕು ಅಧ್ಯಕ್ಷ ಜಿ.ಪಿ ಬಿರಾದಾರ, ಗೌರವ ಕಾರ್ಯದರ್ಶಿ ಅರುಣ ಕೋರವಾರ ಮಾತನಾಡಿದರು. ಗುತ್ತಿಗೆದಾರರಾದ ಸಿ.ಬಿ ಅಸ್ಕಿ, ಮುಳಸಾವಳಗಿ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಯಶವಂತರಾವ ಸೇಠ್, ಕಾಶೀನಾಥ ತಳಕೇರಿ, ಪಿ.ಎಸ್ ಮಿಂಚನಾಳ, ಪ್ರಕಾಶ ಮಲ್ಹಾರಿ, ಕಾಶೀನಾಥ್ ಸಾಲಕ್ಕಿ, ಕಾಶೀನಾಥ ಕೋರಿ, ಮುನ್ನಾ ಮಳಖೇಡ, ಎಸ್.ಎಸ್ ಸಾತಿಹಾಳ, ಶ್ರೀಕಾಂತ ರಾಠೋಡ, ಪಿ.ಸಿ ತಳಕೇರಿ, ರಾವುತ್ ತಳಕೇರಿ, ಮುರ್ತುಜಾ ತಾಂಬೋಳಿ, ರಾಘವೇಂದ್ರ ಗುಡಿಮನಿ, ಸಿದ್ದು ಮೇಲಿನಮನಿ, ಬಸವರಾಜ ತಾಳಿಕೋಟಿ, ಸಂಗಣ್ಣ ತಡವಲ, ಮಲಕು ಸುರಗಿಹಳ್ಳಿ, ಎಸ್.ಜಿ ತಾವರಖೇಡ, ಕೆ.ಎಮ್ ನಂದಿ, ಗೊಲ್ಲಾಳ ಬಿರಾದಾರ, ಸದಾಶಿವ ಗುಡಿಮನಿ, ರವಿ ಕೊಟೀನ, ಎಸ್.ಎಮ್ ನಂದ್ಯಾಳ, ಅಣ್ಣು.ಭಜಂತ್ರಿ, ಶಿವಶರಣ ಪೂಜಾರಿ, ಶಿವರಾಜ ತಳವಾರ, ದಸ್ತಗೀರ ಬಗಲಿ, ಸುರೇಶ ಬಡಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ