ಎಸ್.ಎಸ್.ಬಿ ಪದವಿ ಪೂರ್ವ ಹಾಗೂ ಕೆ.ಎಸ್.ಎಸ್ ಪದವಿ ಮಹಾ ವಿದ್ಯಾಲಯದಲ್ಲಿ – ವಿವಿಧ ಕೋರ್ಸ್‌ಗೆ ಅರ್ಜಿ ಆಹ್ವಾನ.

ರೋಣ ಮೇ.10

ಶ್ರೀ ಶರಣ ಬಸವೇಶ್ವರ ಪದವಿ ಪೂರ್ವ ಹಾಗೂ ಪದವಿ ಮಹಾ ವಿದ್ಯಾಲಯದಲ್ಲಿ 2025-26 ನೇ. ಸಾಲಿನ ಶೈಕ್ಷಣಿಕ ಸಾಲಿಗೆ ಸೇರಿದಂತೆ ವಿವಿಧ ಕೋರ್ಸ್‌ಗಳ ಕಲಿಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿಯಲ್ಲಿ ತೇರ್ಗಡೇ ಹೊಂದಿದವರಿಗೆ ನಮ್ಮ ಮಹಾ ವಿದ್ಯಾಲಯದಲ್ಲಿ ಕಲಾ ಹಾಗೂ ವಾಣಿಜ್ಯ, ಶಿಕ್ಷಣಶಾಸ್ತ್ರ ವಿಭಾಗಗಳು ಇದ್ದು ವಿದ್ಯಾರ್ಥಿಗಳಿಗೆ ಆಸಕ್ತಿಗೆ ಅನುಗುಣವಾಗಿ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ ನಮ್ಮ ಪಿ.ಯು.ಸಿ ಯಲ್ಲಿ ಎನ್.ಎಸ್.ಎಸ್ ಘಟಕ ವಿರುತ್ತದೆ ಸುದೀರ್ಘವಾಗಿ 15 ವರ್ಷಗಳ ಕಾಲ ನುರಿತ ಉಪನ್ಯಾಸಕ ವೃಂದದವರು ಬೋಧನೆಯನ್ನು ಮಾಡುತ್ತಿದ್ಧಾರೆ. ಅದೇ ರೀತಿಯಾಗಿ ಕೆ.ಎಸ್.ಎಸ್ ಪದವಿ ಮಹಾ ವಿದ್ಯಾಲಯಕ್ಕೆ ದ್ವಿತೀಯ ಪಿ.ಯು.ಸಿ ಕಾಮರ್ಸ್ ಪಾಸಾದ ವಿದ್ಯಾರ್ಥಿಗಳು ಪಿ.ಯು.ಸಿ ಕಲಾ ಪಾಸಾದ ವಿದ್ಯಾರ್ಥಿಗಳು ಬಿ.ಎ ಹಾಗೂ ಬಿ.ಕಾಂ ವಿಭಾಗದಲ್ಲಿ ಪ್ರವೇಶ ಪಡೆಯ ಬಹುದಾಗಿದೆ. ಎಂದು ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಿ.ಬಿ ಪೊಲೀಸ್ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದರು. ಈ ವಿಶ್ವ ವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ಗದಗ ಜಿಲ್ಲೆಯ ರೋಣ ತಾಲೂಕಿನ ಪ್ರಸಿದ್ಧ ಕಾಲೇಜ್ ಇದಾಗಿದೆ.ಬೋಧನೆಗೆ ತಕ್ಕ ವಿದ್ಯಾರ್ಹತೆ, ಅನುಭದ ಹೊಂದಿರುವ ಹಾಗೂ ಉತ್ತಮ ಕೌಶಲ್ಯ ಹೊಂದಿರುವ ಪ್ರಾಧ್ಯಾಪಕರ ತಂಡವನ್ನು ಹೊಂದಿದೆ. ಸುಸಜ್ಜಿತ ಕಟ್ಟಡ, ಗ್ರಂಥಾಲಯ ವ್ಯವಸ್ಥೆ, 29 ಸಾವಿರಕ್ಕೂ ಹೆಚ್ಚು ಪುಸ್ತಕಗಳು, ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್, ಹಲವಾರು ಸೌಲಭ್ಯವನ್ನು ಹೊಂದಿದೆ.ಅಷ್ಟೇ ಅಲ್ಲದೆ ಕಾಲಕಾಲಕ್ಕೆ ಸರ್ಕಾರದಿಂದ ನೀಡಲಾಗುವ ವಿವಿಧ ಶೈಕ್ಷಣಿಕ ಯೋಜನೆಗಳು ನೀಡುವ ಸೌಲಭ್ಯ ಹಣದಲ್ಲಿ ಮಾತ್ರ ಪದವಿ ಕೋರ್ಸುಗಳಿಗೆ ಪ್ರವೇಶ ಪಡೆಯ ಬಹುದಾಗಿದೆ.ವಿದ್ಯಾರ್ಥಿ ವೇತನ ಸೌಲಭ್ಯಗಳು ಲಭ್ಯವಿರುತ್ತವೆ. ಬೋಧನೆಯ ಜೊತೆಗೆ ವಿಶೇಷ ಉಪನ್ಯಾಸ, ಸ್ಪರ್ಧಾತ್ಮ ಪರೀಕ್ಷೆಗಳ ತಯಾರಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪದವಿ ಕೋರ್ಸ್‌ಗೆ ಪ್ರವೇಶ ಪಡೆದು ಕೊಳ್ಳಬೇಕು ಎಂದು ಪ್ರಾಂಶುಪಾಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. ಹೆಚ್ಚಿನ ಮಾಹಿತಿಗೆ-ಸರ್ಕಾರಿ ಕಾಲೇಜಿನಲ್ಲಿ ಲಭ್ಯವಿರುವ ಶೈಕ್ಷಣಿಕ ಅವಕಾಶಗಳನ್ನು ಸದುಪಯೋಗ ಪಡೆದು ಕೊಳ್ಳಲು 9844358870/9591968242 ಸಂಪರ್ಕಿಸಬಹುದು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button