ಡೆಂಗ್ಯೂ ನಿಯಂತ್ರಣಕ್ಕಾಗಿ ಸೊಳ್ಳೆ ಉತ್ಪತ್ತಿ ತಾಣಗಳ ಮನೆ ಮನೆ – ಸಮೀಕ್ಷೆಯ ಜನ ಜಾಗೃತಿ.
ಬೆನಕಟ್ಟಿ ಮೇ.10

ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಡೆಂಗ್ಯೂ ತಡೆಗಾಗಿ ಲಾರ್ವಾ ಉತ್ಪತ್ತಿ ತಾಣಗಳ ಮನೆ ಮನೆ ಸಮೀಕ್ಷೆ ಹಾಗೂ ಜನ ಜಾಗೃತಿ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ. ಎಸ್.ಎಸ್ ಅಂಗಡಿಯವರು, ಸೊಳ್ಳೆಗಳು ಕಚ್ಚುವಿಕೆಯಿಂದ ಮಲೇರಿಯಾ, ಆನೇಕಾಲು ರೋಗ, ಡೆಂಗ್ಯೂ, ಚಿಕೂನ್ ಗುನ್ಯಾ, ಮೆದಳು ಜ್ವರ ಸಾಂಕ್ರಾಮಿಕವಾಗಿ ಹರಡುತ್ತವೆ. ಬೇಸಿಗೆ ಕಾಲವಾದ್ದರಿಂದ ತೆರದ ನೀರಿನ ಸಂಗ್ರಹಣೆ ಪರಿಕರಗಳಲ್ಲಿ ಡೆಂಗ್ಯೂ ರೋಗದ “ಈಡೀಜ್ ಇಜಿಪ್ತೆ ” ಸೊಳ್ಳೆಗಳು ಸ್ವಚ್ಛವಾದ ನೀರಿನಲ್ಲಿ ಸಂತಾನೊತ್ಪತ್ತಿಗಾಗಿ ತತ್ತಿಹಾಕಿ ಲಾರ್ವಾ ಉತ್ಪತ್ತಿಯಾಗಿ ಸೊಳ್ಳೆಗಳು ಬೆಳೆದು ಡೆಂಗ್ಯೂ, ಚಿಕೂನ್ ಗುನ್ಯಾ ರೋಗಕ್ಕೆ ಕಾರಣ ವಾಗುತ್ತದೆ. ಜ್ವರ ಮೈಕೈ ನೋವು, ನಿಶಕ್ತಿ ದೇಹದ ಮೇಲೆ ಗಂದೆಗಳ ಕಾಣಿಸಿದರೆ ವಿಳಂಬ ಮಾಡದೇ ಸರಕಾರಿ ಆಸ್ಪತ್ರೆಯಲ್ಲಿ ಡೆಂಗ್ಯೂ, ಚಿಕೂನ್ ಗುನ್ಯಾ ರಕ್ತ ಪರೀಕ್ಷೆ ಮಾಡಿಸಬೇಕು. ಡೆಂಗ್ಯೂ ರೋಗಕ್ಕೆ ನಿರ್ಧಾರಿತ ಚಿಕಿತ್ಸೆ ಇರುವುದಿಲ್ಲ ರೋಗ ಲಕ್ಷಣಗಳಿಗನುಸಾರ ತಜ್ಞ ವೈದ್ಯರು ಉಪಚರಿಸುವರು. ಮುಂಜಾಗ್ರತೆಯ ಕ್ರಮಗಳಾದ ನೀರಿನ ಸಂಗ್ರಹಗಳ ಪರಿಕರಗಳ ಮೇಲೆ ಮುಚ್ಚಳಿಕೆ ಹಾಕುವುದು. ಅನುಪಯುಕ್ತ ವಸ್ತು ಟಾಯರ್ ಟ್ಯೂಬ್, ಟೆಂಗಿನ ಚಿಪ್ಪು ಕಸ ವಿಲೇವಾರಿ ಮಾಡುವುದು, ಸೊಳ್ಳೆ ಕಡಿತದಿಂದ ತಪ್ಪಿಸಿ ಕೊಳ್ಳುವದು ಸೊಳ್ಳೆ ಪರದೆ, ಸೊಳ್ಳೆ ನಿರೋಧಕ ಬಳಸುವುದು ಯಾವುದೇ ತರಹ ಜ್ವರ ಕಾಣಿಸಿದರೆ ಹತ್ತಿರ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಆರೋಗ್ಯ ಸಲಹೆ ಚಿಕಿತ್ಸೆ ಪಡೆಯಿರಿ ಗ್ರಾಮದಲ್ಲಿ ಸೊಳ್ಳೆ ಉತ್ಪತ್ತಿ ಲಾರ್ವಾ ಸಮೀಕ್ಷೆಗೆ ನಿಮ್ಮ ಮನೆಗಳಿಗೆ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತರು ಬಂದಾಗ ಸಹಕರಿಸಿ ಎಂದರು. ಬೆನಕಟ್ಟಿಯಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆ ಸಮೀಕ್ಷೆ ನಡೆಸಿ ಡೆಂಗ್ಯೂ ಬಗ್ಗೆ ಜನ ಜಾಗೃತಿ ಮೂಡಸುತ್ತಿದ್ದಾರೆ ವಿವಿಧ ಹಂತದ ಆರೋಗ್ಯ ಅಧಿಕಾರಿಗಳು, ಸಮೀಕ್ಷೆ ಕಾರ್ಯ ಮೇಲ್ವಿಚಾರಣೆ ಮುಖಾಂತರ ಕುಟುಂಗಳ ಸದಸ್ಯರುಗಳಿಗೆ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಸೊಳ್ಳೆ ಉತ್ಪತ್ತಿ ಮನೆ ಮನೆ ಲಾರ್ವಾ ಸಮೀಕ್ಷೆ ಕಾರ್ಯದಲ್ಲಿ ವಿವಿಧ ಹಂತದ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮಲೇರಿಯಾ ಸಂಶಯುತರ ರಕ್ತ ಪರೀಕ್ಷೆ ಮಾಡಿ ಡೆಂಗ್ಯೂ, ಚಿಕೂನ್ ಗುನ್ಯಾ ನಿಯಂತ್ರಣ ಮುಂಜಾಗ್ರತೆ ಕ್ರಮಗಳ ಮಾಹಿತಿ ಆರೋಗ್ಯ ಶಿಕ್ಷಣ ಮುಖಾಂತರ ಜನ ಜಾಗೃತಿ ಮೂಡಿಸಿದರು.