ಡಾ, ಶ್ರೀ ಶ್ರೀ ಶ್ರೀ ಶಿವಕುಮಾರ್ ಸ್ವಾಮಿಜಿಯವರ 118 ನೇ. ಜಯಂತ್ಯೋ ತ್ಸವ ಹಾಗೂ ಸಿದ್ದ ಗಂಗಾ – ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ.

ತುರಕನಗೇರಿ ಮಾ.23

ತಾಳಿಕೋಟೆ ತಾಲೂಕಿನ ತುರಕನಗೇರಿ ಗ್ರಾಮದಲ್ಲಿ ಸಿದ್ದ ಗಂಗಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿವಕುಮಾರ್ ಸ್ವಾಮೀಜಿಯ ಜನುಮ ದಿನದ ಆಚರಣೆ ಕೇಕ್ ಕಟ್ ಮಾಡುವ ಮುಖಾಂತರ ದೀಪ ಹಚ್ಚುವ ಮೂಲಕ ವೇದಿಕೆ ಮೇಲೆ ಇರುವ ಎಲ್ಲಾ ಪೂಜ್ಯರು ರಾಜಕೀಯ ಧುರೀಣರು ಊರಿನ ಹಿರಿಯರು ವಾರ್ಷಿಕೋತ್ಸವದ ಸಮಾರಂಭಕ್ಕೆ ಚಾಲನೆ ನೀಡಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಸಯ್ಯದ್ ಮುಸ್ತಪಾ ಖಾದ್ರಿ ಹಾಗೂ ಪ.ಪೂ ಷ ಬ್ರ ಶ್ರೀ ಸಿದ್ದ ರಾಮ ಶಿವಾಚಾರ್ಯರು ಜನಾಬ್ ಸಯ್ಯದ್ ಶಖಿಲ್ ಅಹ್ಮದ ಕಾಜಿ ಪಾವನ ಸಾನಿಧ್ಯ ವಹಿಸಿದ್ದ ಪ.ಪೂ ಷ ಬ್ರ ಶ್ರೀ ಗುರುಲಿಂಗ ಸ್ವಾಮಿಗಳು ಪ.ಪೂ ಬಸವರಾಜ ದೇವರು ವಹಿಸಿದ್ದರು. ಅದೇ ರೀತಿ ಸಾನಿಧ್ಯ ವಹಿಸಿದ್ದ ಉದ್ಘಾಟಕರಾಗಿ ಶ್ರೀ ರಾಜು ಗೌಡ ಪಾಟೀಲ್ ಕುದರಿ ಸಾಲವಡಗಿ ಪ್ರಭುಗೌಡ ಲಿಂಗದಳ್ಳಿ ಲಲಿತಾ ದೊಡ್ಡಮನಿ ಭಾಗ್ಯ ಶ್ರೀ ಸುಧಾಕಾರ ಇನಿತರರು ಇದ್ದರು.

ಈ ಸಭೆಯಲ್ಲಿ ಕಾಯಕ ರತ್ನ ಹಾಗೂ ಶ್ರೀ ರತ್ನ ಪ್ರಶಸ್ತಿ ಬಾಲ ಪ್ರತಿಭೆ ಪ್ರಶಸ್ತಿ ನೀಡಿದರು ಬಾಲ ಪ್ರತಿಭೆಯಲ್ಲಿ ಬಂದ ಒಬ್ಬ ಚಿಕ್ಕ ಕಲಾವಿದೆಯಾದ ದಿತಿ ಶಿರಾಶಾಡಒಳ್ಳೆಯ ಕಲಾವಿದೆ ಇವಳ ವಯಸ್ಸು 3 .ಆದ್ರೆ ಈ ಹುಡುಗಿ 500 ಕ್ಕೂ ಅಧಿಕ ವಚನಗಳನ್ನು ಹೇಳುತ್ತಾಳೆ ಹಾಗೂ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಳು.

ಉದ್ಘಾಟಕರಾಗಿ ಬಂದ ರಾಜುಗೌಡ ಕುದರಿ ಸಾಲವಾಡಗಿ ಅವರು ಸಂಸ್ಥೆಯ ಅಧ್ಯಕ್ಷರು ಆದ ಷಮಶುದಿನ ಇನಾಮದಾರ ಅವರ ಬಗ್ಗೆ ಮಾತನಾಡಿದರು ಕೊನೆಯಲ್ಲಿ ಆಶೀರ್ವಚನ ನೀಡಿದ ಶ್ರೀ ಷ.ಬ್ರ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಅವರು ಶ್ರೀ ಸಿದ್ದಗಂಗಾ ಮಠದ ವಿಷೇಶವಾಗಿ ಹೇಳಿದರು.

ಹಾಗೂ ತುರಕನಗೇರಿ ಗ್ರಾಮದ್ಲಲಿ ಕೂಡಾ ಶ್ರೀ ಸಿದ್ದಗಂಗಾ ಕಿರಿಯ ಪ್ರಾಥಮಿಕ ಶಾಲೆ ಅನಾಥ ಹಾಗೂ ನಿರ್ಗತಿಕ ಮಕ್ಕಳ ಶಾಲೆ ಇದೆ ಅಲ್ಲಿಯೂ ಅನುಕೂಲಕರ ಸಾಲಭ್ಯಳ ಬಗ್ಗೆ ಹೇಳಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಗುರುಗಳು ರಾಜಕೀಯ ಧುರೀಣರು ಹಾಗೂ ಪ್ರಶಸ್ತಿ ಪುರಸ್ಕರತರು ಇದ್ದರು ಊರಿನ ಹಿರಿಯರು ಶಾಲೆಯ ಸಿಬಂದ್ದಿ ವರ್ಗ ಹಾಗು ಸುತ್ತ ಮುತ್ತಲಿನ ಗ್ರಾಮದ ಎಲ್ಲಾ ಜನರು ಸೇರಿ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಯಶಸ್ವಿ ಗೊಳಿಸಿದರು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶರಣಯ್ಯ.ಈ.ಬೇಕಿನಾಳಮಠ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button