ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ- ಕೊರಮ ಸಮಾಜದಿಂದ ಅಭಿನಂದನೆಗಳು.
ಗೂಡುರು ಅ.30

ಇಲಕಲ್ಲ ತಾಲೂಕಿನ ಸಮಿಪದ ಗುಡೂರು ಏಸ್.ಸಿ ಗ್ರಾಮದ ಶ್ರೀ ರಾಮಪ್ಪ ಭೀಮಪ್ಪ ಭಜಂತ್ರಿ ಇವರಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ, ಸುಮಾರು 40 ವರ್ಷಗಳಿಂದ ಶಹನಾಯಿ ವಾದಕರಾಗಿ, ರಾಜ್ಯದ ಅನೇಕ ಭಾಗಗಳಲ್ಲಿ ಕಾರ್ಯಕ್ರಮ ನೀಡಿ ಅನೇಕ ಉತ್ಸವದಲ್ಲಿ ಶಹನಾಯಿ ವಾದಕರಾಗಿ ಗುರುತಿಸಿ ಕೊಂಡಿದ್ದರು, ಇಂದು ಈ ಹಿರಿಯ ಕಲಾವಿದರಿಗೆ ಇಲಕಲ್ಲ ತಾಲ್ಲೂಕ ಆಡಳಿತ ಕಛೇರಿ ಇವರನ್ನು ಗುರುತಿಸಿ ಈ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದಕ್ಕೆ ಮಾನ್ಯ ಶಾಸಕರಿಗೆ ಹಾಗೂ ತಾಲೂಕಿನ ತಹಶಿಲ್ದಾರರಿಗೆ ಮತ್ತು ಪ್ರಶಸ್ತಿ ಆಯ್ಕೆ ಸಮಿತಿ ಮಂಡಳಿಗೆ ಕೊರಮ ಸಮಾಜದ ಯುವ ಮುಖಂಡ ಶ್ರೀ ಡಿ,ಬಿ,ವಿಜಯಶಂಕರ್, ತಾಲೂಕ ಅಧ್ಯಕ್ಷ ಲಕ್ಷ್ಮಣ್ಣ ಸಂಗಮದ ಹಾಗೂ ಗ್ರಾಮದ ಸಮಾಜದ ಅಧ್ಯಕ್ಷ ಶ್ರೀಶೈಲಪ್ಪ ಭಜಂತ್ರಿ, ಹಮನಂತ ಭಜಂತ್ರಿ ಯಮನಪ್ಪ ಭಜಂತ್ರಿ, ರೋಮಣ್ಣ ಭಜಂತ್ರಿ, ಶರಣಪ್ಪ ಭಜಂತ್ರಿ, ಬಂಡೆಪ್ಪ ಭಜಂತ್ರಿ, ಮಾರುತಿ, ಭಜಂತ್ರಿ, ಸಮಾಜದ ಮುಖಂಡರು ಅಭಿನಂದನೆಗಳು ಸಲ್ಲಿಸಿದ್ದಾರೆ.