ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭ.
ಕೊಟ್ಟೂರು ಜುಲೈ.2

ನಾಡನ್ನು ಸದೃಢವಾಗಿ ಹಾಗೂ ಸಮಾಜದ ಸ್ವಾಸ್ಥ್ಯವನ್ನು ನಿರಂತರವಾಗಿ ಕಾಪಾಡುವಲ್ಲಿ ಅಧ್ಯಾಪಕರ ಪಾತ್ರ ಅತ್ಯಂತ ಮಹತ್ತರವಾದುದು ಹಾಗೂ ಶ್ಲಾಘನೀಯವಾದುದು ಎಂದು ಆಡಳಿತ ಮಂಡಳಿ ಅಧ್ಯಕ್ಷ ಸಿಧ್ಧರಾಮ ಕಲ್ಮಠ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಡಾ.ಎಚ್.ಜಿ. ರಾಜ್ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ವಯೋನಿವೃತ್ತಿಗೊಂಡ ಪ್ರೊ. ಎಸ್. ವಾಮದೇವ ಹಾಗೂ ಡಾ. ಕೆ. ಕುಸುಮಾದೇವಿ ಸಹಪ್ರಾಧ್ಯಾಪಕರುಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ ವಿದ್ಯೆಯು ಯಾರೂ ಕದಿಯಲಾರದ ಆಸ್ತಿ, ವಿದ್ಯೆಗಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ ಹಾಗಾಗಿ ವಿದ್ಯಾರ್ಥಿಗಳು ಶ್ರದ್ದೆಯಿಂದ ಅಬ್ಯಾಸಮಾಡಿ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಹೊಂದಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಉಜ್ವಲ ಭವಿಷ್ಯ ಕಂಡುಕೊಂಡು ಸಮಾಜದ ಉನ್ನತ ಹುದ್ದೆಗಳಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪುನ್ನು ಮೂಡಲು ಪ್ರಾಧ್ಯಾಪಕರ ಸೇವೆ ಅಮೂಲ್ಯವಾದದು.

ಸಮಾಜದಲ್ಲಿ ಶಿಕ್ಷಕರಿಗೆ ಇವತ್ತಿಗೂ ಗೌರವವಿರುವುದು ವಿದ್ಯಾರ್ಥಿಗಳಿಗೆ ಅವರು ಮಾಡಿದ ಬೋಧನೆಯಿಂದ ಮಾತ್ರ ಎಂದು ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿದ್ಯಾರ್ಥಿಗಳಿಗೆ ಪಠ್ಯಗಳಲ್ಲಿ ಏಕಾಗ್ರತೆ, ನೆನಪಿನ ಶಕ್ತಿ, ಮಾನಸಿಕ ಸ್ಪಷ್ಟತೆ ಮತ್ತು ಇಚ್ಚಾಶಕ್ತಿಯನ್ನು ಹೆಚ್ಚಿಸುವಲ್ಲಿ ಹಾಗೂ ವಿದ್ಯಾರ್ಥಿಗಳು ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದಂತ ಜೀವನ, ಸುಂದರ ಸಮಾಜ ಕಟ್ಟುಕೊಡುವಲ್ಲಿ, ಉಪನ್ಯಾಕರ ಸೇವೆ ಅತ್ಯಂತ ಜವಾಬ್ಧಾರಿಯುತವಾದು ಶಿಕ್ಷಣವು ಜೀವನದ ಮೌಲ್ಯಗಳನ್ನು ಹೆಚ್ಚಿಸುವುದು ಎಂದು ಪ್ರಾಂಶುಪಾಲರಾದ ಡಾ. ಎಂ. ರವಿಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತಗೊಂಡ ಅಧ್ಯಾಪಕರ ಕುರಿತು ಅನೇಕರು ಮಾತಾಡಿ ಅವರ ಸೇವೆಯನ್ನು ಕೊಂಡಾಡಿದರು ನಿವೃತ್ತಗೊಂಡ ಪ್ರೊ. ಎಸ್. ವಾಮದೇವ ಹಾಗೂ ಡಾ. ಕೆ. ಕುಸುಮಾದೇವಿ ಮಾತನಾಡಿ ತಮ್ಮಗಳ ಸುದೀರ್ಘ ಸೇವೆಯನ್ನು ಹಾಗೂ ವಿದ್ಯಾರ್ಥಿಗಳೊಂದಿಗೆ ಇರುವ ಸಂಬಂಧವನ್ನು ಹಂಚಿ ಕೊಂಡರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಬಿ.ಎಸ್. ಕೊಟ್ರೇಶ್, ಕೆ.ಬಿ. ಮಲ್ಲಿಕಾರ್ಜುನ, ಅಡಿಕೆ ಮಂಜುನಾಥಯ್ಯ, ಜೆ.ಸಿ. ಧನಂಜಯ, ಅವಂತಿ ಬಸವರಾಜ ಕೋರಿ ಬಸವರಾಜ್ ಡಿ.ಎಸ್. ಶಿವಮೂರ್ತಿ, ಹೆಚ್. ಮೃತ್ಯುಂಜಯ ಹಾಗೂ ಉಪನ್ಯಾಸಕರಾದ ಡಿ. ರವೀಂದ್ರಗೌಡ,, ಎಸ್. ಕೃಷ್ಣಪ್ಪ, ಜೆ.ಬಿ.ಸಿದ್ದನಗೌಡ, ಬಸವರಾಜ್.ಸಿ ಬೋಧಕ/ ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು:ಪ್ರದೀಪ್. ಕುಮಾರ್. ಸಿ ಕೊಟ್ಟೂರು