ಬೆಳವಣಿಕಿ ಗ್ರಾಮ ಪಂಚಾಯತಿಯಲ್ಲಿ ಡಾಕ್ಟರ್, ಬಾಬಾ ಸಾಹೇಬ ಅಂಬೇಡ್ಕರ್ – ಅವರ 134 ನೇ. ಜಯಂತೋತ್ಸವ ಆಚರಣೆ.

ಬೆಳವಣಿಕಿ ಏ.15

ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ವಿಶ್ವ ಜ್ಞಾನಿ ದೇಶ ಕಂಡ ಮಹಾನ್ ನಾಯಕ ಡಾ, ಬಿ.ಆರ್ ಅಂಬೇಡ್ಕರ್ ಅವರ 134 ನೇ. ಜಯಂತೋತ್ಸವ ಕಾರ್ಯಕ್ರಮ ಬಹಳ ಶಾಂತಿಯುತವಾಗಿ ಅರ್ಥಗರ್ಭಿತವಾಗಿ ನೆರವೇರಿತು.ಇದೆ ಸಮಯದಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಶಿಲ್ಪಾ ಕವಲೂರು ಅವರು ಡಾ, ಬಿ.ಆರ್ ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಉತ್ತಮ ವಾಗಿರುವಂತ ಸಂವಿಧಾನವನ್ನ ನಮ್ಮ ದೇಶಕ್ಕೆ ಕೊಟ್ಟಿದ್ದಾರೆ ಇವತ್ತಿನ ದಿನ ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕು ಆಸ್ತಿ ಹಕ್ಕು ಇನ್ನಿತರ ಅನೇಕ ಸೌಲಭ್ಯಗಳನ್ನ ಒದಗಿಸಿ ಕೊಟ್ಟಿದ್ದಾರೆ ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಸ್ಪರ್ಧಾತ್ಮಕ ಪ್ರಪಂಚದಲ್ಲಿ ನಮ್ಮ ಮಕ್ಕಳನ್ನ ಬಿಡಬೇಕು ನಾವು ಇವತ್ತು ಈ ಒಂದು ಸ್ಥಾನಕ್ಕೆ ಬರಬೇಕಾದ್ರೆ ಡಾಕ್ಟರ್, ಬಿ.ಆರ್ ಅಂಬೇಡ್ಕರ್ ಅವರೇ ಕಾರಣ ಅಂಬೇಡ್ಕರ್ ಅವರ ಇನ್ನೂ ಅನೇಕ ಕೊಡುಗೆಗಳನ್ನು ನಮ್ಮ ದೇಶಕ್ಕೆ ಕೊಟ್ಟಿದ್ದಾರೆ ಅಂತ ಮಾತನಾಡಿದರು. ಇದೆ ಸಮಯದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೀರಭದ್ರಶ್ವರ ಶಾಲೆಯ ದೈಹಿಕ ಶಿಕ್ಷಕರು ಡಿ.ಎನ್ ಮರಡ್ಡಿ ಮಾತನಾಡಿ ಇಂದು ಏಪ್ರಿಲ್ 14 ಡಾ, ಅಂಬೇಡ್ಕರ್ ಅವರ ಜನ್ಮ ದಿನ ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಒಂದು ಒಳ್ಳೆಯ ಕೊಡುಗೆಯನ್ನ ಕೊಟ್ಟಿದ್ದಾರೆ ಸುಮಾರು 200 ವರ್ಷಗಳ ಕಾಲ ನಮ್ಮ ದೇಶ ಪರಕೀಯರ ಕೈಯಲ್ಲಿ ಸಿಲುಕಿತ್ತು. ಸ್ವಾತಂತ್ರ ಸಿಕ್ಕ ನಂತರದಲ್ಲಿ ನಮ್ಮ ದೇಶಕ್ಕೆ ಆಡಳಿತ ನಡೆಸಲು ಒಂದು ಪುಸ್ತಕ ಬೇಕಿತ್ತು ಆ ಪುಸ್ತಕವನ್ನ ಅತ್ಯಂತ ಬುದ್ಧಿವಂತಿಕೆ ಯಿಂದ ತಮಗೆ ಬಂದಂತ ಎಲ್ಲಾ ಕಷ್ಟಗಳನ್ನು ಬದಿಗಿಟ್ಟು ನಮ್ಮ ದೇಶಕ್ಕೆ ಸಂವಿಧಾನ ರಚನೆ ಮಾಡಿಕೊಟ್ಟಿದ್ದಾರೆ ಎಂದು ಸಂದರ್ಭದಲ್ಲಿ ಮಾತನಾಡಿದರು.ಮತೊರ್ವ ಬೆಳವಣಿಕಿ ಗ್ರಾಮ ಪಂಚಾಯತಿ ಸದಸ್ಯರು ಮಾಂತೇಶ ಶಿರೋಳ ಮಾತನಾಡಿ ಡಾ, ಅಂಬೇಡ್ಕರ್ ಅವರು ಎಂದರೆ ಕೇವಲ ಒಂದು ಜಾತಿಗೆ ಅಥವಾ ಒಂದು ಸಮುದಾಯಕ್ಕೆ ಸೀಮಿತವಲ್ಲ ಇವತ್ತು ನಮ್ಮ ದೇಶ ಪ್ರಜಾಪ್ರಭುತ್ವ ರಾಷ್ಟ್ರ ಅಂತಾ ಕರೆಸಿ ಕೊಂಡಿದೆ ಅಂದ್ರ ಅದಕ್ಕೆ ಡಾ, ಬಿ.ಆರ್ ಅಂಬೇಡ್ಕರ್ ಅವರೇ ಕಾರಣ ಕೇವಲ ಇವತ್ತು ಒಂದು ದಿನ ಮಾತ್ರ ಅಂಬೇಡ್ಕರ್ ಅವರನ್ನ ನೆನೆಯೋದಲ್ಲ ಅವರು ನಮ್ಮ ದೇಶಕ್ಕೆ ಉತ್ತಮವಾದ ಎಲ್ಲಾರಿಗೂ ಸ್ವಾಭಿಮಾನ ಸ್ವತಂತ್ರದ ಬದುಕನ್ನ ನೀಡುವಂತ ಸಂವಿಧಾನವನ್ನ ನಮ್ಮ ದೇಶಕ್ಕೆ ನೀಡಿದ್ದಾರೆ ಅಂತಾ ಮಾತನಾಡಿದರು.ಇದೆ ಸಮಯದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಬಸವರಾಜ ಜಕನೂರು. ಕಳಕವ್ವ ಮಾದರ ಮಾಂತೇಶ ಶೀರೊಳ. ನಸಿರಹಮ್ಮದ ಜಾಣಕಾನ್ನವರ ಇಂದ್ರವ್ವ ತಳವಾರ ರಾಜು ಪಾಟೀಲ್ ಮತ್ತು ಅಧ್ಯಕ್ಷರು ಪ್ರವೀಣ್ ಮಾಡೊಳ್ಳಿ. ವಿಕಲಚೇತನ ಕ್ಷೇಮಾಭಿವೃದ್ಧಿ ಪದಾಧಿಕಾರಿಗಳು ನೀಲಮ್ಮ ಪಟ್ಟಣಶಟ್ಟಿ ಸೇರಿದಂತೆ ಹಣಮಂತ ಬಿಂಗಿ. ಶಿವಸಿಂಪಿ ಮತ್ತು ಗ್ರಾಮ ಪಂಚಾಯತ್ ಕಾರ್ಯದರ್ಶಿ ಸುರಕೋಡ ಕಂಪ್ಯೂಟರ್ ಆಪರೇಟರ್ ಅಸಿಮಸಾಹೇಬ್ ನದಾಫ್ ಸೇರಿದಂತ ಎಲ್ಲಾ ಸ್ವಚ್ಛತಾ ಸಿಬ್ಬಂದಿವರ್ಗ ಹಾಗೂ ದಲಿತ ಯುವ ಮುಖಂಡರು ಮೈಲಾರಪ್ಪ ಮಾದರ ಪಾಲ್ಗೊಂಡಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button