ಭವ್ಯ ಪ್ರದರ್ಶನಕ್ಕೆ ಸಾಕ್ಷಿಯಾದ ಎತ್ತಿನ ಗಾಡಿ ಶರ್ಯತ್ತು – ಎರಡು ಬುಲೆಟ್ ಗೆದ್ದ ಕನ್ನಡದ ಜೋಡೆತ್ತು.

ಚಂದ್ರಪ್ಪವಾಡಿ ಫೆ.10

ಅಥಣಿ ತಾಲೂಕಿನ ಚಂದ್ರಪ್ಪವಾಡಿ ಗ್ರಾಮದಲ್ಲಿ ನಡೆದ ಜೋಡೆತ್ತು ಹಾಗೂ ಕುದುರೆ ಗಾಡಿ ಶರ್ಯತ್ತು  ಯಶಸ್ವಿ ಪ್ರದರ್ಶನಕ್ಕೆ ಸಾಕ್ಷಿಯಾಯ್ತು. ಜೋಡೆತ್ತು ಗಾಡಿ ಶರ್ಯತ್ತಿನಲ್ಲಿ ಮತ್ತೆ ಕನ್ನಡದ ಎತ್ತು ಮೇಲುಗೈ ಸಾಧಿಸಿ ಬುಲೆಟ್ ಬೈಕ್ ಮೂಡಿಗೆರಿಸಿ ಕೊಂಡಿದೆ.

ಅಥಣಿ ತಾಲೂಕಿನ ಚಂದ್ರಪ್ಪವಾಡಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಜೋಡೆತ್ತು ಗಾಡಿ  ಓಟದ ಸ್ಪರ್ಧೆಗಾಗಿ ಸುಮಾರು 111 ಜೋಡೆತ್ತು, ಹಾಗೂ 12 ಜೋಡಿ ಕುದುರೆ ಭಾಗವಹಿಸಿದ್ದವು, ಮಧ್ಯಾಹ್ನ ದಿಂದ ಪ್ರಾರಂಭವಾದ ಓಟದ ಸ್ಪರ್ಧೆಯಲ್ಲಿ ಜೋಡೆತ್ತುಗಳು ತಮ್ಮ ಓಟದ ಮೂಲಕ  ನೆರೆದ ಸಾವಿರಾರು ಜನರ ಗಮನ ಸೆಳೆದವು.

ಭವ್ಯ ಎತ್ತುಗಳ ಪ್ರದರ್ಶನದಲ್ಲಿ ಕರ್ನಾಟಕದ ಬಾಳು ಹಜಾರೆ ಅವರ ಹೇಲಿಕ್ಯಾಪ್ಟರ್ ಬೈಜ ಸಂಗೊಲಾ ರಾಜ ಹೆಸರಿನ ಜೋಡೆತ್ತು ಮೊದಲ  ಬಹುಮಾನವಾಗಿ ಎರಡು ಬುಲೆಟ್ ಗಳಿಸಿ ಕನ್ನಡಿಗರಿಗೆ ಹೆಮ್ಮೆ ತಂದು ಕೊಟ್ಟವು.

ಮಹಾರಾಷ್ಟ್ರದ ಬೀಲವಡಿ ಪಾಟೀಲ ಅವರ ಎತ್ತು ಎರಡನೆ ಕ್ರಮಾಂಕ ಗಳಿಸಿ ಎರಡು ಹೋಂಡಾ ಶೈನ್ ಬೈಕ್ ಬಹುಮಾನವಾಗಿ ಪಡೆದರೆ ಜಂಗಮ ಅವರ ಜೋಡೆತ್ತು ಎರಡು ಎಚ್.ಎಫ್ ಡಿಲಕ್ಸ್  ಬೈಕ್ ಮೂರನೇ ಬಹುಮಾನ ಪಡೆದಿವೆ.

ಇನ್ನುಳಿದ ಎತ್ತು ಹಾಗೂ ಕುದುರೆಗಳು ಸುಮಾರು 15 ಲಕ್ಷ ಬಹುಮಾನ ನೀಡಿ ಗೌರವಿಸಲಾಯಿತು. ಒಟ್ಟಾರೆ ಅಳಿವಿನಂಚಿ ನಲ್ಲಿರುವ ದೇಶಿ ತಳಿಗಳ ಅಭಿವೃದ್ಧಿಗೆ ಈ ಒಂದು ವೇದಿಕೆ ಉತ್ತಮ ಸಂದೇಶ ರವಾನಿಸಿದ್ದು ಸುಳ್ಳಲ್ಲ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪೀರು.ನಂದೇಶ್ವರ.ಅಥಣಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button