ಸುಪ್ರೀಂ ಕೋರ್ಟ್ ಮರು ಸಮೀಕ್ಷೆ ಮಾಡಲು ಆದೇಶ ನೀಡಿದೆ ಆದರೆ ಈಗಿನ ಸ್ಥಳೀಯ ಸಂಸ್ಥೆಗಳು ಮ್ಯಾನ್ ಹೋಲ್ ಸ್ಕ್ಯಾವೆಂಜರ್ಸ್ಗಳೇ ಇಲ್ಲ ಎಂದು ಹೇಳಿರುವುದು – ಹಾಸ್ಯಾಸ್ಪದ ಕೆ.ನಂಜಪ್ಪ. ಬಸವನಗುಡಿ.
ಮೈಸೂರು ಮಾ.29

ಈ ಸಭೆಯಲ್ಲಿ ಜಿಲ್ಲಾ ಜಾಗೃತಿ ಶಾಶ್ವತ ಸಮಿತಿ ಸದಸ್ಯರಾದ ಕೆ ನಂಜಪ್ಪ ಬಸವನಗುಡಿ ರವರು ಮಾತನಾಡಿ ಮೈಸೂರು ಜಿಲ್ಲೆಯಲ್ಲಿರುವ ಎರಡುವರೆ ಸಾವಿರ ಮ್ಯಾನ್ವಲ್. ಸ್ಕ್ಯಾವೆಂಜರಸ್ ಗಳು ಇರುತ್ತಾರೆ ಇವರಿಗೆ ಯಾವುದೇ ವಿಧವಾದ ಪುನರ್ವಸತಿ ಕಾರ್ಯಗಳು ವಿಳಂಬವಾಗುತ್ತಿದೆ ಇದಕ್ಕೆ ನೇರ ಕಾರಣ ಅಧಿಕಾರಿ ವರ್ಗ ಆಗಿರುತ್ತದೆ ಏಕೆಂದರೆ ಅಧಿಕಾರಿ ವರ್ಗ ಸರಿಯಾಗಿ ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಗೊಳಿಸುತ್ತಿಲ್ಲ ಮ್ಯಾನ್ವಲ್ ಸ್ಕ್ಯಾವೆಂಜರಸ್ ಗಳ ಬಗ್ಗೆ ಅಭಿಮಾನವಿಟ್ಟು ಕೆಲಸ ಮಾಡಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು. ಈ ಸಂಬಂಧ ಜಿಲ್ಲಾಧಿಕಾರಿಗಳು ಎಲ್ಲಾ ಅಧಿಕಾರಿಗಳಿಗೆ ತಾಲೂಕು ಮಟ್ಟದಲ್ಲಿ ಪೂರ್ವಭಾವಿ ಸಭೆ ಮಾಡಿ ಪೌರ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸ ಬೇಕೆಂದು ತಾಲೂಕ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು. ಸುಪ್ರೀಂ ಮರು ಸಮೀಕ್ಷೆ ಮಾಡಲು ಕೋರ್ಟ್ ಆದೇಶದಂತೆ ಮ್ಯಾನ್ವೆಲ್ ಸ್ಕ್ಯಾವೆಂಜರಸ್ ಗಳೇ ಇಲ್ಲ ಎಂಬುದಾಗಿ ಸರ್ಕಾರವು ವರದಿ ನೀಡಿರುತ್ತದೆ. ಇದು ಅನುಮಾನ ಆಸ್ಪದವಾಗಿದೆ ಎಂದು ಕೆಲವು ಸದಸ್ಯರು ಒತ್ತಾಯಿಸಿದರು. ಮುಂದುವರೆದು ಗ್ರಾಮೀಣ ಭಾಗಗಳಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತಗಾರರೇ ಇಲ್ಲದೆ ಪಂಚಾಯಿತಿಯ ಸಂಪನ್ಮೂಲಗಳು ಸ್ವಚ್ಛತಾ ಹೆಸರಿನಲ್ಲಿ ದುರ್ಬಳಕೆ ಯಾಗುತ್ತಿದೆ ಎಂದು ಕೆ. ನಂಜಪ್ಪ ಬಸವನಗುಡಿ ರವರು ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡುತ್ತಾ ರಾಜ್ಯದಲ್ಲಿ RDPR ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸ್ವಚ್ಛತಾಗಾರರನ್ನು ನೇಮಕ ಮಾಡುವುದಕ್ಕೆ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಸಲ್ಲಿಸಬೇಕೆಂದು ಸಭೆಯಲ್ಲಿ ಸಲಹೆ ನೀಡಲಾಯಿತು. ಅದಕ್ಕೆ ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸಿರುತ್ತಾರೆ. ಮುಂದುವರೆದು ಮೈಸೂರು ಮಹಾ ನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರಿಗಾಗಿ ಜಿ.ಪ್ಲಸ್ ತ್ರೀ ಮನೆಗಳ ನಿರ್ಮಾಣವಾಗುತ್ತಿದ್ದು ಇದಕ್ಕೆ ವಂತಿಗೆ ಶುಲ್ಕ 3 ಲಕ್ಷ ಹಣದಲ್ಲಿ ಐವತ್ತು ಸಾವಿರ ರೂಪಾಯಿಗಳಿಗೆ ಇಳಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ವರದಿ:ಕೆ.ನಂಜಪ್ಪ.ಬಸವನಗುಡಿ.ಮೈಸೂರು