ಒಂದನೇ ತರಗತಿ ಮಕ್ಕಳಿಗೆ ಅಕ್ಷತೆಯ ಮೇಲೆ ಪ್ರಥಮ ಅಕ್ಷರ ಅಭ್ಯಾಸ – ಮಾಡಿಸಿದ ಗುರು ವೃಂದದವರು.
ಗುಂಡನಪಲ್ಲೆ ಜೂ.02

ಬಾಗಲಕೋಟ ಜಿಲ್ಲೆಯ ಬಾಗಲಕೋಟ ತಾಲೂಕಿನ ಗುಂಡನಪಲ್ಲೆ ಗ್ರಾಮದ ಸಾರ್ವಜನಿಕ ಶಿಕ್ಷಣ ಇಲಾಖೆ ಬಾಗಲಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ, ಶಾಲಾ ಶ್ರೀಸರಸ್ವತಿ ದೇವಿ ಮಂದಿರದಲ್ಲಿ ಶ್ರೀ ಗಣೇಶ ಹಾಗೂ ಶ್ರೀ ಸರಸ್ವತಿದೇವಿ ಮೂರ್ತಿಗೆ ಪೂಜೆ ಸಲ್ಲಿಸುವ ಮುಖಾಂತರ ಒಂದನೇ ತರಗತಿ ಪ್ರವೇಶ ಪಡೆದ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಲಾಯಿತು. ಒಂದನೇಯ ತರಗತಿಗೆ ಪ್ರವೇಶ ಪಡೆದ ಮಕ್ಕಳಿಗೆ ಶ್ರೀ ಓಂ ಗಣೇಶ ಶ್ರೀ ಸರಸ್ವತಿ ದೇವಿ ಸ್ತೋತ್ರಗಳೊಂದಿಗೆ ಅ ಆ ಇ ಈ ಉ ಅಕ್ಷರ ಅಭ್ಯಾಸವನ್ನು ಶಾಲಾ ಮುಖ್ಯ ಶಿಕ್ಷಕ ಸಹ ಶಿಕ್ಷಕರಾದ ಆರ್.ಬಿ ಅಂತರತಾನಿ, ನಾರಾಯಗೌಡ ಪಾಟೀಲ ರಾಜೇಶ ಹುಲಗನ್ನವರ ಗುರುಮಾತೆಯರಾದ ಭಾರತಿ ಗಣಿಯಾರ ಸುನಿತಾ ಮಾಸ್ತಿ ಅನಿತಾ ಗದಿಗೆನ್ನವರ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ ಒಂದನೇ ತರಗತಿ ಮಕ್ಕಳಿಗೆ ಅಕ್ಷತೆಯ ಮೇಲೆ ಓಂ ಶ್ರೀ ಗಣೇಶಾಯನಮಃ ಓಂ ಶ್ರೀ ಸರಸ್ವತಿ ನಮಃ ಗ್ರಾಮ ದೇವಿ ದುರ್ಗಾದೇವಿ ಶ್ರೀ ದಾಳಮ್ಮದೇವಿ ಬರಹ ಹಾಗೂ ವಿದ್ಯಾದೇವತೆ ನಾಮಸ್ಮರಣೆಯ ಮೂಲಕ “ಓಂ” ಅ ಆ ಇ ಈ” ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಲಾಯಿತು. ಒಂದನೇ ತರಗತಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಉತ್ಸಾಹ ದಿಂದ ಗುರುಗಳು ಹೇಳಿ ಬರಿಸಿದ ಅಕ್ಷರಗಳನ್ನು ಓದಿ ಬರೆದರು. ಪ್ರಥಮ ಅಕ್ಷರ ಅಭ್ಯಾಸ ಕಾರ್ಯಕ್ರಮದಲ್ಲಿ, ಶಾಲಾ ಗುರು ವೃಂದವರು, ಶಾಲಾ ಮುದ್ದು ಮಕ್ಕಳು ಭಾಗವಹಿಸಿದ್ದರು.