ಜಕ್ಕಲಿ ಎಸ್.ಎ.ಜೆ.ಡಿ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ – ಗುರು ವಂದನೆ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮ.
ಜಕ್ಕಲಿ ಜೂ.15

ಗದಗ ಜಿಲ್ಲೆ ರೋಣ ತಾಲೂಕು ನರೇಗಲ್ ಸಮೀಪದ ಜಕ್ಕಲಿ ಗ್ರಾಮದಲ್ಲಿ ಜೂ.14 ರಂದು ಶನಿವಾರ ಅಂದಾನಪ್ಪ ಜ್ಞಾನಪ್ಪ ದೊಡ್ಡಮೇಟಿ ಹೈಸ್ಕೂಲ್ ನ 1998-99 ನೇ. ಸಾಲಿನ ವಿದ್ಯಾರ್ಥಿಗಳಿಂದ ಗುರು ವಂದನಾ ಹಾಗೂ ಸ್ನೇಹ ಸಮ್ಮೀಲನ ಸಮಾರಂಭ ಅತಿ ವಿಜೃಂಭಣೆಯಿಂದ ಆಚರಣೆ ಮಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಯರಾದ ಬಿ.ಆರ್ ಗದಗಿನ ವಹಿಸಿ ಕೊಂಡಿದ್ದರು. ಕಾರ್ಯಕ್ರಮವನ್ನು ಶಿಕ್ಷಣ ಪ್ರೇಮಿ ರವೀಂದ್ರ ದೊಡ್ಡಮೇಟಿ ಉಧ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನರೇಗಲ್ ಪೋಲಿಸ್ ಠಾಣೆಯ ಪಿ.ಎಸ್.ಐ ಶ್ರೀಮತಿ ಐಶ್ವರ್ಯ ವಿಶ್ವನಾಥ ನಾಗರಾಳ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನಿತರಾಗಿ ನಿವೃತ್ತ ಪ್ರೌಢ ಶಾಲೆಯ ಶಿಕ್ಷಕರು ಹಾಗೂ ಆಕಾಶವಾಣಿ ಕಲಾವಿದರಾದ ಸಿ.ಎಂ ವಡಗೇರಿ, ನಿವೃತ್ತ ಶಿಕ್ಷಕ ಟಿ.ಟಿ ದಾಸರ, ಡಿ.ಬಿ ತಳವಾರ, ವೀರಣ್ಣ ಮೆಣಸಿನಕಾಯಿ, ಸಿ.ವಿ ಗುತ್ತೆಪ್ಪನವರ್, ಎ.ಟಿ ಗುಳಗಣ್ಣವರ್, ಎಮ್.ವಾಯ್ ಹಳೇಮನಿ, ಎಸ್.ಆರ್ ಬಾಗಲಿ, ಎಸ್.ಬಿ ಬಳಗೇರ, ಎಸ್.ಟಿ ಕಳಸಾಪೂರ, ವಾಯ್.ಕೆ ಗುಡದೂರ, ದ್ವೀತಿಯ ದರ್ಜೆ ಸಹಾಯಕರಾದ ಎನ್.ಬಿ ಹಿರೇಮನಿ, ಡಿ ದರ್ಜೆ ನೌಕರರಾದ ಅಯ್ಯಪ್ಪ ತಿಲಗರ, ನಿವೃತ್ತ ಡಿ ದರ್ಜೆ ನೌಕರರಾದ ಎಚ್.ವಾಯ್ ಮಣ್ಣೋಡ್ಡರ ಈ ಎಲ್ಲಾ ಮಹನೀಯರಿಗೆ 1998 – 99 ನೇ. ಸಾಲಿನ ವಿದ್ಯಾರ್ಥಿಗಳಿಂದ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ಪ್ರೌಢ ಶಾಲೆಯ ಶಿಕ್ಷಕರಾದ ಈಶ್ವರ ಕುರಿ ನಡೆಸಿ ಕೊಟ್ಟರು ಎಂದು 98 – 99 ನೇ. ಸಾಲಿನ ವಿದ್ಯಾರ್ಥಿ ಬಳಗದವರು ಶಿಕ್ಷಕರನ್ನು ಅತೀ ವಿಜೃಂಭಣೆಯಿಂದ ಸ್ವಾಗತ ಮಾಡಿ ಕೊಳ್ಳುವದರೊಂದಿಗೆ ಆ ಎಲ್ಲಾ ಶಿಕ್ಷಕರನ್ನು ಸನ್ಮಾನ ಮಾಡುವುದರೊಂದಿಗೆ ಗುರು ಶಿಷ್ಯ ಬಳಗಕ್ಕೆ ಪಾತ್ರರಾದರು.ಇದೆ ಸಂದರ್ಭದಲ್ಲಿ ಪ್ರಮೋದ್ ಯಾವಗಲ್. ಶ್ರೀನಿವಾಸ್ ಹುಲ್ಲೂರು. ನಜೀರ್ ಗಡಾದ್ ಗಡಾದ್. ಬಸವರಾಜ ಶಿವಶಂಪುರ. ಶರಣಪ್ಪ ರಂಗನ್ನವರ. ರಾಜು ಮುಗಳಿ. ಇನ್ನೂ ಅನೇಕ 1998 – 99 ನೇ. ಸಾಲಿನ ವಿದ್ಯಾರ್ಥಿನಿಯರು ಸೇರಿದಂತೆ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ