ಗ್ರಾ.ಪಂ ಕಛೇರಿಯಲ್ಲಿ ಉಪಾಧ್ಯಕ್ಷ ಸೌಮ್ಯ ದರ್ಪ – ಚಪ್ಪಲು ಹಾಕಿ ಕಛೇರಿ ಒಳಗೆ ಹೋಗಿದ್ದ ಪತ್ರಕರ್ತೆಗೆ ಹಲ್ಲೆಗೆ ಯತ್ನ..!

ಕೋಣಿ ಜೂ.18

ಗ್ರಾಮ ಪಂಚಾಯತ್ ಕಛೇರಿ ಒಳಗೆ ಚಪ್ಪಲು ಧರಿಸಿ ಹೋಗಿದ್ದ ಪತ್ರಕರ್ತೆಗೆ ಪಂಚಾಯತ್ ಉಪಾಧ್ಯಕ್ಷ ಹಾಗೂ ಸದಸ್ಯರು ಸೇರಿ ಹಲ್ಲೆಗೆ ಮುಂದಾದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಣಿ ಗ್ರಾಮ ಪಂಚಾಯತ್ ನಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಪತ್ರಕರ್ತೆಯೋರ್ವರು ಎಸ್ಸಿ/ಎಸ್ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಕಾರ್ಯಕ್ರಮದ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಂದಿಗೆ ಮಾತನಾಡಲು ಹೋಗಿದ್ದ ಸಂದರ್ಭದಲ್ಲಿ ಅಲ್ಲಿದ್ದ ಕಾಂಗ್ರೆಸ್ ಜನ ಪ್ರತಿನಿಧಿಗಳು ಕ್ಷುಲ್ಲಕ ಕಾರಣಕ್ಕೆ ಚಪ್ಪಲು ಹಾಕಿ ಒಳಗೆ ಬಂದಿದ್ದೀರಿ ಅಂತಾ ತಗಾದೆ ತೆಗೆದು ಜಗಳ ಪ್ರಾರಂಭಿಸಿದರು. ಅದಕ್ಕೆ ಪತ್ರಕರ್ತೆ ಒಳಗಡೆ ಅಧಿಕಾರಿಗಳು ಚಪ್ಪಲಿ ಧರಿಸಿದನ್ನು ಪ್ರಶ್ನಿಸಿದರು. ಅಧಿಕಾರಿಗಳು ಕಚೇರಿ ಒಳಗೆ ಚಪ್ಪಲು ಧರಿಸಬಹುದು ಆದರೆ ಸಾರ್ವಜನಿಕರಿಗೆ ಕಚೇರಿ ಒಳಗೆ ಚಪ್ಪಲು ಧರಿಸಲು ನಿರ್ಬಂಧಿಸಲಾಗಿದೆ ಎಂದು ಗ್ರಾಮ ಪಂಚಾಯತ್, ಉಪಾಧ್ಯಕ್ಷೆ ಸೌಮ್ಯ ದರ್ಪ ಮೆರೆದರು.

ನಂತರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿವಾಕರ್ ಶೆಟ್ಟಿ ಎಂಬಾತನು ಪಂಚಾಯತ್ ಒಳಗಡೆ ಬೊಬ್ಬೆ ಹಾಕಿ ಗಟ್ಟಿಯಾಗಿ ಕಚೇರಿಯ ಒಳಗಡೆ ಮನಬಂದಂತೆ ಮಾನಸಿಕ ಸ್ಥಿಮಿತ ಕಳೆದು ಕೊಂಡವರ ಹಾಗೆ ಎಲ್ಲಾರು ಭಯ ಬೀಳುವ ಹಾಗೆ ಕೂಗಾಡಿ ಕೊಂಡು ಕಛೇರಿಯ ಸಿಬ್ಬಂದಿಗಳಿಗೂ ಹಾಗೂ ಬರುವ ಸಾರ್ವಜನಿಕರಿಗೆ ಕೆಲಸ ಮಾಡಿಕೊಳ್ಳಲು ತೊಂದರೆ ಮಾಡುವ ಹಾಗೆ ನಡೆದುಕೊಂಡಿದ್ದು ಅಲ್ಲದೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅಶೋಕ್ ಬಂಡಾರಿ ಈತ ಪತ್ರಕರ್ತರನ್ನು ತಡೆದು ಕೈಯಿಂದ ತಳ್ಳಿರುತ್ತಾನೆ. ನಂತರ ಪತ್ರಕರ್ತೆ ಅಭಿವೃದ್ಧಿ ಅಧಿಕಾರಿ ಅವರನ್ನು ಭೇಟಿಯಾಗಿ ಚೇಂಬರ್ ನಲ್ಲಿ ಕುಳಿತು ಕೊಂಡಿರುವಾಗ ಕಾಂಟ್ರಾಕ್ಟ್ರ್ ಗುಣಾಕರ್ ಶೆಟ್ಟಿ ಎಂಬಾತನು ಏಕಾಏಕಿಯಾಗಿ ಜೇಂಬರ್ ಒಳಗೆ ನುಗ್ಗಿ ನಾನು ಎಂಎಲ್ಎ ಕಿರಣ್ ಕೊಡ್ಗಿ ಅವರಿಗೆ ಮಾತನಾಡುತ್ತೇನೆ ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ ಎಂದು ದರ್ಪ ಮೆರೆದಿರುತ್ತಾನೆ ಈ ದರ್ಪ ಮೆರೆಯುವ ಗುಣಕರ್ ಶೆಟ್ಟಿ ಮಾಡೋದೆಲ್ಲ ಕಳಪೆ ಕಾಮಗಾರಿ ಅಕ್ರಮ ಮರಳು ಸಾಗಾಟ ಮಾಡುದೇ ಈತನ ಕಾಯಕ ಮಳೆಗಾಲ ಮುಗಿದರೆ ಅಕ್ರಮ ಗಣಿಗಾರಿಕೆ ಮಾಡುವ ಗುಣಕರನಿಗೆ ಭಾಗಾಕಾರದ ಲೆಕ್ಕ ಸಿಗಬಹುದು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಆದರೆ ಪತ್ರಕರ್ತೆ ಅವರ ಯಾವ ವಿಚಾರಕ್ಕೂ ತಲೆ ಕೆಡಿಸಿಕೊಳ್ಳದೆ ಅಭಿವೃದ್ಧಿ ಅಧಿಕಾರಿಯವರ ಜೊತೆ ಮಾತನಾಡಿ ಬಂದಿರುತ್ತಾರೆ. ಕ್ಷುಲ್ಲಕ ಕಾರಣಕ್ಕೆ ಕೆಲವು ಹೊತ್ತು ಗೊಂದಲ ಉಂಟಾಗಿಯಿತು. ಕೋಣಿ ಗ್ರಾಮ ಪಂಚಾಯಿತಿನಲ್ಲಿ ಕಾಂಗ್ರೆಸ್ ಜನ ಪ್ರತಿನಿಧಿಗಳು ದಿನ ಬೆಳಗಾದರೆ ಪಂಚಾಯಿತಿನಲ್ಲೇ ಕಾಲ ಕಳೆದು ಬರುವ ಸಾರ್ವಜನಿಕರಿಗೆ ತೊಂದರೆ ಮಾಡುವುದು ಇವರ ಕೆಲಸ ಅಲ್ಲದೆ ಪಂಚಾಯಿತಿನಲ್ಲಿ ಚಪ್ಪಲಿ ಕಾಯುವುದೇ ಇವರ ಕೆಲಸ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಾದ ಸೌಮ್ಯ ಮತ್ತು ಅಶೋಕ್ ಭಂಡಾರಿ ಗ್ರಾಮ ಪಂಚಾಯಿತಿಯಲ್ಲಿ ಇವರಿಬ್ಬರದ್ದೇ ಕಾರ್ಬಾರ್..! ಮೋಜು ಮಸ್ತಿ..! ಮಾಡಿಕೊಂಡು ದಿನ ಬೆಳಗಾದರೆ ಪಂಚಾಯತ್ ನಲ್ಲಿ ಸಾರ್ವಜನಿಕರಿಗೆ ತೊಂದರೆ ಮಾಡುವುದರ ಜೊತೆಗೆ ಸಾರ್ವಜನಿಕರ ಕೆಲಸ ಮಾಡುವ ಸಿಬ್ಬಂದಿಗಳಿಗೂ ಕೂಡ ತೊಂದರೆಯಾಗಿದೆ ಇದನ್ನು ಹೇಳಿ ಕೊಳ್ಳಲಾಗದೆ ಆ ಕಿರಿಕಿರಿಯನ್ನು ಅನುಭವಿಸಿ ಕೊಂಡು ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನುವ ಮಾಹಿತಿಗಳು ಕೇಳಿ ಬಂದಿದೆ.ಈ ರೀತಿ ಮೋಜು..! ಮಸ್ತಿ…! ಗಮನ ಇವರು ತಮ್ಮ ತಮ್ಮ ಸ್ವಂತ ಮನೆಗಳಲ್ಲಿ ಅಥವಾ ತಮ್ಮ ತಮ್ಮ ಸ್ವಂತ ಕಛೇರಿಗಳಲ್ಲಿ ಇಟ್ಟು ಕೊಳ್ಳಬಾರದು ಆದರೆ ಇವರು ಸಾರ್ವಜನಿಕ ಕಛೇರಿಯಾದ ಗ್ರಾಮ ಪಂಚಾಯಿತಿಯಲ್ಲಿ ಈ ರೀತಿ ನಡೆದು ಕೊಂಡು ಕಛೇರಿಗೆ ಬರುವ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಪತ್ರಕರ್ತರೊಂದಿಗೆ ಈ ರೀತಿಯಾಗಿ ವರ್ತಿಸುತ್ತಿರುವ ಜನ ಪ್ರತಿನಿಧಿಗಳು ಜನ ಸಾಮಾನ್ಯರೊಂದಿಗೆ ಯಾವ ರೀತಿ ವರ್ತಿಸಬಹುದೆಂಬ ಅನುಮಾನ ಮೂಡಿದೆ. ಪತ್ರಕರ್ತರು ಈ ವಿಚಾರ ಮುಖ್ಯ ಕಾರ್ಯ ನಿರ್ವಾಣಾಧಿಕಾರಿ ಉಡುಪಿ ಇವರ ಗಮನಕ್ಕೆ ತಂದಿದ್ದು ಯಾವುದೇ ಸ್ಪಂದನೆ ಇಲ್ಲದೆ ನನಗೆ ಯಾವುದೇ ಸಂಬಂಧ ಇಲ್ಲ ಎನ್ನುವ ರೀತಿ ನಡೆದು ಕೊಂಡಿರುವುದಂತೂ ಭಾರಿ ಬೇಸರ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ಆಗದೆ ಬಿಲ್ ಆಗಿರುವ ಹಗರಣಗಳು, ಕಳಪೆ ಕಾಮಗಾರಿಗಳು ಕುಡಿಯುವ ನೀರಿನ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳಿದ್ದು ಕಾರ್ಯ ನಿರ್ವಾಹಣಾಧಿಕಾರಿ ಜಿಲ್ಲೆಯ ಗ್ರಾಮ ಪಂಚಾಯತ್ ಗೆ ಭೇಟಿ ಕೊಡದೆ ಸಮಸ್ಯೆಗಳನ್ನು ಆಲಿಸದೆ ಬೆಚ್ಚಗೆ ಒಳಗೆ ಕುಳಿತು ಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ತುಂಬಾ ಬೇಸರ ಮೂಡಿಸಿದ್ದು ಇಂತಹ ಅಧಿಕಾರಿಗಳನ್ನು ರಾಜ್ಯ ಸರಕಾರ ಕೂಡಲೇ ಅಮಾನತ್ ಮಾಡಬೇಕು ಅಥವಾ ವರ್ಗಾವಣೆ ಮಾಡಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಅಲ್ಲದೆ ಪಂಚಾಯತ್ ಜನ ಪ್ರತಿನಿಧಿಗಳು ಪತ್ರಕರ್ತೆಯ ಮೇಲೆ ಹಲ್ಲೆಗೆ ಯತ್ನಿಸಿದ ಬಗ್ಗೆ ಕುಂದಾಪುರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button