ಮಲ್ಲನಾಯಕನಹಳ್ಳಿಯ ಹುಣಸೆಮರದ ಶ್ರೀ ಚೌಡೇಶ್ವರಿಯ – ರಥೋತ್ಸವ ಜರುಗಿತು.
ಮಲ್ಲನಾಯಕನಹಳ್ಳಿ ಡಿ.20

ಕೊಟ್ಟೂರು ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದಲ್ಲಿ ಹುಣಸೆಮರದ ಶ್ರೀ ಚೌಡೇಶ್ವರಿಯ ರಥೋತ್ಸವವು ನಂದಿ ಧ್ವಜ ಡೊಳ್ಳು ಕುಣಿತ, ಹುರಿಮಿ ಮೇಳದೊಂದಿಗೆ ರಥೋತ್ಸವ ಜರಗಿತು. ನಂತರ ಹುಣಿಸೇಮರದ ಶ್ರೀ ಚೌಡೇಶ್ವರಿ ದೇವಸ್ಥಾನದ ಹತ್ತಿರ ಕಾರ್ತಿಕ ದೀಪೋತ್ಸವ ಆಗಮಿಸಿದ ಸಕಲ ಭಕ್ತರಿಂದ ನೆರವೇರದರ ಮೂಲಕ ಅಮ್ಮನವರಿಗೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ನಡೆಯಿತು.

ಈ ಸಂದರ್ಭದಲ್ಲಿ ಮಾಲಮಠದ ಶ್ರೀ ಸೋಮಶೇಖರ್ ಸ್ವಾಮೀಜಿಗಳು, ಶರಣ್ಯೆ ಶ್ರೀಮತಿ ಎ.ಎಂ ರುದ್ರಮ್ಮ, ಶ್ರೀಮತಿ ಗೌರಮ್ಮ, ದೊಡ್ಡ ರಾಮಣ್ಣ ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರು, ಚಾಲ ಹನುಮಂತಪ್ಪ, ಅಂಜಿನಪ್ಪ ಕೊಟ್ಟೂರು ಹಾಗೂ ಮಲ್ಲನಾಯಕನಹಳ್ಳಿ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಶ್ರೀ ಚೌಡೇಶ್ವರಿಯ ಸಕಲ ಸದ್ಭಕ್ತರು ಸೇರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು