ಡೊನೇಷನ್ ಹಾವಳಿ ತಡೆ ಗಟ್ಟುವಂತೆ – ದಲಿತ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ.
ರೋಣ ಜೂ.26

ಗದಗ ಜಿಲ್ಲೆಯ ರೋಣ ತಾಲೂಕಿನ ರೋಣ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದ್ದು ಕೂಡಲೇ ಡೊನೇಷನ್ ಹಾವಳಿ ತಡೆಗಟ್ಟಿ ಬಡ ವಿದ್ಯಾರ್ಥಿಗಳ ಜೀವನದ ಜೊತೆ ಚಲ್ಲಾಟವಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ದ ಕ್ರಮ ಜರುಗಿಸಬೇಕೆಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ದ ಪಟ್ಟಣದ ಸೂಡಿ ಕ್ರಾಸ್ ಬಳಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿಯಿಂದಾಗಿ ಬಡವರು ಕೂಲಿ ಕಾರ್ಮಿಕರು ಅಸಂಘಟಿತ ಕಾರ್ಮಿಕರ ಮಕ್ಕಳು ಗುಣ ಮಟ್ಟದ ಶಿಕ್ಷಣ ಪಡೆದು ಕೊಳ್ಳುವುದು ಮರೀಚಿಕೆ ಯಾಗಿದೆ. ಶೈಕ್ಷಣೀಕ ಕ್ಷೇತ್ರ ಉಳ್ಳವರ ಪಾಲಾಗಿ ವ್ಯಾಪಾರೀಕರಣವಾಗಿ ಮಾರ್ಪಟ್ಟಿದೆ. ದಿನದಿಂದ ದಿನಕ್ಕೆ ಸಾಕಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿ ನಿಂತಿವೆ. ಇದರಿಂದಾಗಿ ಸರ್ಕಾರಿ ಶಾಲೆ ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು. ಕೂಡಲೇ ಸರ್ಕಾರ ಸರ್ಕಾರಿ ಆದೇಶದ ಪ್ರಕಾರ ನಿಯಮಿತ ಸರ್ಕಾರಿ ಶುಲ್ಕವನ್ನು ಪಡೆದು ಕೊಂಡು ವಿದ್ಯಾರ್ಥಿಗಳನ್ನು ದಾಖಲಿಸಿ ಕೊಳ್ಳಬೇಕು ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪ್ರವೇಶಾತಿ ಶುಲ್ಕದ ದರ ಪಟ್ಟಿಯನ್ನು ನೋಟೀಸ್ ಬೋರ್ಡ್ಗೆ ಲಗತ್ತಿಸಬೇಕು.ರಾಜ್ಯದ ವಿವಿಧ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳಾದ ಶೌಚಾಲಯ. ಶುದ್ದವಾದ ಆಹಾರ. ಅಭ್ಯಾಸಕ್ಕೆ ಪೂರಕವಾದ ಸುಸಜ್ಜಿತವಾದ ಕೊಠಡಿಗಳನ್ನು ನಿರ್ಮಿಸಿ ಬಡ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ದೊರೆಯುವಂತೆ ಸರ್ಕಾರ ಕ್ರಮ ಜರುಗಿಸಬೇಕೆಂದು ರೋಣ ತಹಶಿಲ್ದಾರ ಅವರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ವಾಯ್.ಚಲವಾದಿ. ದಲಿತ ಹಿರಿಯ ಮುಖಂಡರು ಎಸ್ ಎಚ್ ಜೋಗನ್ನವರ. ಜಿಲ್ಲಾ ದಲಿತ ಯುವ ಮುಖಂಡ ವಿಜಯಕುಮಾರ ಚಲವಾದಿ. ಡಿಎಸ್ಎಸ್ ಭೀಮವಾದ ತಾಲೂಕಾಧ್ಯಕ್ಷ ಹನಮಂತ ಚಲವಾದಿ. ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಮುಳ್ಳಾಳ. ಶೇಕಪ್ಪ ಮಾದರ. ಆದಿ ಜಾಂಬವ ಯುವ ಬ್ರಿಗೇಡ್ ಬೆಳಗಾವಿ ವಿಭಾಗಿ ಅಧ್ಯಕ್ಷರು. ಮಂಜುನಾಥ ಬುರುಡಿ. ಚಲವಾದಿ ಮಹಾಸಭಾ ರೋಣ ತಾಲೂಕಾ ಉಪಾಧ್ಯಕ್ಷ ಅಶೋಕ ತಾಳದವರ. ದಲಿತ ವಿದ್ಯಾರ್ಥಿ ಪರಿಷತ್ ರೋಣ ತಾಲೂಕಾಧ್ಯಕ್ಷ ರಮೇಶ ನಂದಿ. ಉಪಾಧ್ಯಕ್ಷ ಅಂದಪ್ಪ ಮಾದರ. ಪ್ರಧಾನ ಕಾರ್ಯದರ್ಶಿ ಅಭಿಷೇಕ ಕೊಪ್ಪದ ದಲಿತ ವಿದ್ಯಾರ್ಥಿ ಪರಿಷತ್ ವಿಜಯನಗರ ಜಿಲ್ಲಾಧ್ಯಕ್ಷರಾದ ಹನಮೇಶ ರಾಮ್. ಜೈಭೀಮ್ ಸೇನಾ ರಾಜ್ಯ ಉಪಾಧ್ಯಕ್ಷ ಮೈಲಾರಪ್ಪ ಚಳ್ಳಮರದ. ಜಿಲ್ಲಾ ದಲಿತ ಮುಖಂಡರಾದ ಡಿ.ಜಿ ಕಟ್ಟಿಮನಿ.ಮಂಜುನಾಥ ಬುರಡಿ.ಮೈಲಾರಪ್ಪ ಮಾದರ. ಮರಿಯಪ್ಪ ಮಾದರ ಮಾರುತಿ ಹಾದಿಮನಿ. ಚಂದ್ರಶೇಖರ ಮಾದರ. ವೀರಪ್ಪ ತೆಗ್ಗಿನಮನಿ. ಮಲ್ಲು ಮಾದರ. ಮಂಜುನಾಥ ದೊಡ್ಡಮನಿ. ಮಾಲತೇಶ ಮಾದರ. ಹಣಮಂತ ಮಾದರ. ಬಸವರಾಜ ಕಾಳೆ. ಭೀಮಶಿ ಮಾದರ. ಮಹೇಶ ಕುರುಬನಾಳ. ಫಕ್ಕೀರಪ್ಪ ಮಾದರ. ಚಂದ್ರು ಮಾದರ. ಪ್ರಕಾಶ ಮಾದರ ಯಲ್ಲಪ್ಪ ಹಿರೇಮನಿ ಸಿದ್ದು ದೊಡ್ಡಮನಿ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ:ಅಂದಪ್ಪ.ಮಾದರ.