ಪಟ್ಟಣದ ಹಾಗೂ ಗ್ರಾಮಾಂತರ ಪ್ರದೇಶದ ಎಲ್ಲಾ ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ಊಟ ಮತ್ತು ಟಿಫನ್ ಸಿಗುವಂತ ಸರ್ಕಾರದ ಇಂದಿರಾ ಕ್ಯಾಂಟೀನ್ – ಉದ್ಘಾಟನೆ ಮಾಡಿದ ಶಾಸಕರು.
ಮೊಳಕಾಲ್ಮುರು ಜೂ.27

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಎನ್.ವೈ ಗೋಪಾಲಕೃಷ್ಣ ರವರು ಮೊಳಕಾಲ್ಮೂರು ಪಟ್ಟಣದಲ್ಲಿ ನೂತನ ಇಂದಿರಾ ಕ್ಯಾಂಟೀನ್ 26 6 2025 ರಂದು ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿದರು. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಇಂದಿನ ಕ್ಯಾಂಟೀನ್ ಓಪನ್ ಆಗಬೇಕಾಗಿತ್ತು . ಆದರೆ ಈಗ ಸ್ಥಳೀಯ ಶಾಸಕರಾಗಿರುವುದರಿಂದ ಸರ್ಕಾರದಿಂದ ಬೆಂಬಿಡದೆ ಯೋಜನೆ ರೂಪಿಸಿ ಕಾರ್ಮಿಕರಿಗೆ ಬಡ ಜನರಿಗೆ ಎಲ್ಲಾ ವರ್ಗದ ಸಾರ್ವಜನಿಕರಿಗೆ ಕೇವಲ ಹತ್ತು ರೂಪಾಯಿ ಟಿಫನ್ ಮತ್ತು ಊಟ ದೊರೆಯುತ್ತದೆ. ಇದರಿಂದ ಕ್ಷೇತ್ರದ ಎಲ್ಲಾ ನಾಗರಿಕರಿಗೆ ಅನುಕೂಲವಾಗುತ್ತದೆ ಎಂದು ಎನ್.ವೈ ಗೋಪಾಲ್ ಕೃಷ್ಣ ಶಾಸಕರು ಇಂದಿರಾ ಕ್ಯಾಂಟೀನ್ ಉಪಯೋಗ ಎಂದು ರೂಪಿಸಿದ್ದಾರೆ. ಈಗ ಸುಮಾರು ಮೊಳಕಾಲ್ಮೂರು ಕ್ಷೇತ್ರಕ್ಕೆ 350 ಕೋಟಿ ಅನುದಾನ ತಂದು ಕಾಮಗಾರಿಗಳು ನಡೆಯುತ್ತಿದ್ದಾವೆ ಸರ್ಕಾರದಲ್ಲಿ ಅನುದಾನ ಇಲ್ಲ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದಾರೆ ಆದರೆ ಶಾಸಕರು ಅನುದಾನದ ಮೇಲೆ ಅನುದಾನ ತಂದು ಸರ್ಕಾರದಿಂದ ಮಂಜೂರು ಮಾಡಿಸಿದ್ದಾರೆ.

ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳು ಶಿಕ್ಷಣಕ್ಕೆ ಬೇಕಾಗುವ ಕೊಠಡಿಗಳು ರಸ್ತೆಗಳು ಚೆಕ್ ಡ್ಯಾಮ್ ಗಳು ಕೆರೆ ಕಟ್ಟೆಗಳು ಚರಂಡಿ ಬೀದಿ ದೀಪ ಕುಡಿಯುವ ನೀರು ರೈತರಿಗೆ ಬೇಕಾಗುವಂತಹ ಬೀಜ ಗೊಬ್ಬರಗಳು ಕೃಷಿ ಯಂತ್ರೋಪ ಕರಣಗಳು ಸರ್ಕಾರದಿಂದ ಮಂಜೂರು ಮಾಡಿಸಿ ರೈತರಿಗೆ ಅನುಕೂಲ ಮಾಡಿ ಕೊಟ್ಟಂತಹ ಶಾಸಕರು ಹಿಂದೆ ಮೊಳಕಾಲ್ಮೂರು ಅಳಾಳ ಬಡಿತೀತ್ತು ಕ್ಷೇತ್ರದ ಶಾಸಕರಾಗಿ ರಾಯದುರ್ಗ ದಿಂದ ಹಾನಗಲ್ ಮಾರ್ಗವಾಗಿ ಹೋಗುವ ಅರ್ಧಂ ಬರ್ಧ ರಸ್ತೆಯನ್ನು ಎಡಗಡೆ ಬಲಗಡೆ ಜೆಸಿಪಿ ಯಿಂದ ಹೊಡೆದು ಕೇವಲ ಮೂರು ತಿಂಗಳಲ್ಲಿ ಪಟ್ಟಣದ ಎನ್.ಎಚ್ ಐವೆ ರಸ್ತೆಯನ್ನು ಮಾಡಿಸಿದಂತ ಶಾಸಕರು ಈಗ ಮೊಳಕಾಲ್ಮೂರು ಪಟ್ಟಣ. ನೋಡಿದರೆ ತಳ ತಳ ನಿಗನಿಗೆ ಹೊಳೆಯುತ್ತದೆ ರಸ್ತೆ ಇದ್ದರೆ ಇಂಥ ಶಾಸಕರು ಇರಬೇಕು ಎಂದು ನಿಜವಾದಂತ ಮತದಾರರು ಶಾಸಕರ ಮೇಲೆ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಜೊತೆಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಕಾಂಗ್ರೆಸ್ ಪಕ್ಷದ ಮುಖಂಡರು ಪ್ರಮುಖರುಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು