ಸಮಾಜ ಸೇವೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಲಿ – ಜಿ.ಜಿ ಮಾಗನೂರ.

ಬೇವೂರ ಏ.12

ಗಾಂಧೀಜಿಯವರು ಗ್ರಾಮಗಳ ಉದ್ಧಾರದ ಕನಸು ಕಂಡಿದ್ದರು. ದೇಶದ ಆತ್ಮ ಸದೃಢ ಗ್ರಾಮಗಳಾಗಿವೆ. ಸಹಕಾರಕ್ಕೆ ಪ್ರತಿಯಾಗಿ ಹಳ್ಳಿಗಳ ಜನತೆಯ ಸೇವೆಯನ್ನು ಮಾಡಬೆಕೆಂದು ಬೇವೂರಿನ ಆದರ್ಶ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಜಿ.ಜಿ ಮಾಗನೂರ ವಕೀಲರು ಹೇಳಿದರು. ಚಿಟಗಿನ ಕೊಪ್ಪ ದತ್ತು ಗ್ರಾಮದಲ್ಲಿ ಜರುಗಿದ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ವಿದ್ಯಾರ್ಥಿ ದೆಸೆಯಿಂದಲೆ ಸಮಾಜ ಸೇವೆಯತ್ತ ಎಲ್ಲರೂ ಆಸಕ್ತಿ ವಹಿಸ ಬೆಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾಗಿಯಾದ ಶ್ರೀ ಪುಂಡಪ್ಪ ಕಡೂರ ಯುವ ಶಕ್ತಿಯ ಇಚ್ಛಾಶಕ್ತಿ ಗ್ರಾಮೀಣ ಭಾಗದಲ್ಲಿ ಪ್ರಗತಿ ಕಾರ್ಯಕ್ಕೆ ಸ್ಪೂರ್ತಿ ಯಾಗಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿಬಿರದ ಅಧ್ಯಕ್ಷರು ಪ್ರಾಚಾರ್ಯರಾದ ಡಾ, ಜ.ಗು ಭೈರಮಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಸ್ವಾಸ್ಥ್ಯ ಸಮಾಜಕ್ಕಾಗಿ ಕೈಜೋಡಿಸ ಬೇಕು. ಎನ್.ಎಸ್.ಎಸ್ ಸೇವೆ ಶಿಬಿರಾರ್ಥಿಗಳಿಗೆ ಜೀವನಾನುಭವ ಕಲಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾಗಿಯಾದ ಎನ್.ಬಿ ಪಾಟೀಲ ಮಾತನಾಡಿದರು. ರೇವಣ ಸಿದ್ದೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಉಮೇಶ ಎಚ್.ಮೇಟಿ ಸಸಿಗೆ ನೀರೆರದು ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯರಾದ ವಾಯ್.ಎಚ್ ಬೆನಕನವಾರಿ, ಶ್ರೀಕರದೇಸಾಯಿ, ಯೋಜನಾಧಿಕಾರಿ ಜಿ.ಎಸ್.ಗೌಡರ, ಪ್ರಭಾರಿ ಮುಖ್ಯಗುರುಗಳಾದ ಸುನೀಲ್ ಪಾಟೀಲ್ ಸೇರಿದಂತೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಸದಸ್ಯರು ,ಎಸ್.ಡಿ.ಎಂ.ಸಿಯ ಅಧ್ಯಕ್ಷರು ಸದಸ್ಯರು ಭಾಗಿಯಾಗಿದ್ದರು.ಬೇವೂರಿನ ಪಿ.ಎಸ್.ಎಸ್. ಕಾಲೇಜಿನ ಹಿರಿಯ ಉಪನ್ಯಾಸಕರಾದ ಶ್ರೀ ಬಿ.ಬಿ.ಬೇವೂರ ವಚನ ಪ್ರಾಥ೯ನೆ ನೆರವೇರಿಸಿದರು. ಶಿಬಿರಾರ್ಥಿ ವಿದ್ಯಾರ್ಥಿನಿಯರು ಸ್ವಾಗತ ಗೀತೆ ಹಾಡಿದರು. ಅರ್ಥಶಾಸ್ತ್ರ ಉಪನ್ಯಾಸಕ ಎಸ್.ಎಸ್ ಆದಾಪೂರ ಎನ್.ಎಸ್.ಎಸ್.ಗೀತೆ ಹಾಡಿದರು. ಡಿ.ವಾಯ್ ಬುಡ್ಡಿಯವರ, ಎನ್.ಬಿ ಬೆಣ್ಣೂರ ಮಾಲಾರ್ಪಣೆ ಕಾರ್ಯಕ್ರಮ ನೆರವೇರಿಸಿ ಕೊಟ್ಟರು. ಕನ್ನಡ ಉಪನ್ಯಾಸಕ ಡಾ, ಸಂಗಮೇಶ ಹಂಚಿನಾಳ ನಿರೂಪಿಸಿದರು. ಎ.ಎಮ್ ಗೊರಚಿಕ್ಕನವರ ವಂದಿಸಿದರು. ಮಹಾವಿದ್ಯಾಲಯದ 50 ಜನ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ : ಅಮರೇಶ ಮ.ಗೊರಚಿಕ್ಕನವರ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button