ಶ್ವೇತ ಪತ್ರ ಹೊರಡಿಸುವಂತೆ ಸರಕಾರಕ್ಕೆ ಸವಾಲ್ – ಹಾಕಿದ ನಿಖಿಲ್ ಕುಮಾರಸ್ವಾಮಿ.

ಮಾನ್ವಿ ಜೂ.27

ಜೆ.ಡಿ.ಎಸ್ ಪಕ್ಷದಿಂದ ವಿನೂತನವಾಗಿ ಜನರೊಂದಿಗೆ ಜನತಾದಳ, ಸಶಕ್ತ ಜನತಾದಳ, ಸಮೃದ್ಧ ಕರ್ನಾಟಕ ಹೆಸರಿನಲ್ಲಿ ರಾಜ್ಯಾದ್ಯಾಂತ ಜೆ.ಡಿ.ಎಸ್ ಪಕ್ಷದ ಬಲ ವರ್ಧನೆಗಾಗಿ ಹಾಗೂ ಸಂಘಟನೆಗಾಗಿ ಪ್ರವಾಸ ಕೈಗೊಂಡಿದ್ದೇನೆ ಎಂದು ಜೆ.ಡಿ.ಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ಜರುಗಿದ ಜೆ.ಡಿ.ಎಸ್ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ.

ಕಲ್ಯಾಣ ಕರ್ನಾಟಕಕ್ಕೆ 13 ಸಾವಿರ ಕೋಟಿ ನೀಡಿರುವುದಾಗಿ ಮುಖ್ಯ ಮಂತ್ರಿಗಳು ಹೇಳುತ್ತಾರೆ ಆದರೆ. ಈ ಭಾಗದಲ್ಲಿ ಸಂಚಾರ ಮಾಡುತ್ತಿರುವ ನನಗ ಎಲ್ಲಿಯೂ ಕೂಡ ಹೊಸ ಆಸ್ಪತ್ರೆಗಳು ಕಾಣುತ್ತಿಲ್ಲ. ಆಸ್ಪತ್ರೆಗಳಲ್ಲಿ ವೈದ್ಯರೆ ಇಲ್ಲಾ. ಸರಿಯಾದ ರಸ್ತೆಗಳೇ ಇಲ್ಲಾ ಎಂದು ಲೇವಡಿ ಮಾಡಿದರು.

ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಇಡಬೇಕಾದ ಅನುದಾನವನ್ನು ಬಳ್ಳಾರಿ, ರಾಯಚೂರು ಮತ್ತು ತೆಲಂಗಾಣದಲ್ಲಿ ನಡೆದ ಚುನಾವಣೆಗೆ ಹಣವನ್ನು ದುರ್ಬಳಕೆ ಮಾಡಿ ಕೊಳ್ಳಲಾಗಿದೆ. ಇದು ಎಂಥ ನ್ಯಾಯ ಜನರೇ ಕಾಂಗ್ರೆಸ್ ಸರಕಾರದ ದುರಾಡಳಿತ ನೋಡಿ ಎಂದು ಕಿಡಿ ಕಾರಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button