ಸೇವಾದಳವು ಮಕ್ಕಳಲ್ಲಿ ಯುವಕರಲ್ಲಿ ಶಿಸ್ತು ದೇಶ ಭಕ್ತಿ ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದ – ಬಿ.ಇ.ಓ ವಸಂತ ರಾಥೋಡ್.
ಬಸವನ ಬಾಗೇವಾಡಿ ಜೂ.28

ಇಂದು ದಿನಾಂಕ 27.06.2025 ರಂದು ಮುಂಜಾನೆ 10:30. ಗಂಟೆಗೆ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಭಾರತ ಸೇವಾದಳ ಕಾರ್ಯಾಲಯದಲ್ಲಿ ಬಸವನ ಬಾಗೇವಾಡಿ ತಾಲೂಕಿನ 2025-26 ಸಾಲಿನ ಭಾರತ ಸೇವಾದಳದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕ ಶಿಕ್ಷಕರಿಗಾಗಿ ಒಂದು ದಿನದ ಪುನರಚೇತನ ಕಾರ್ಯಗಾರವನ್ನು ಸೇವಾದಳದ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.ಭಾರತ ಸೇವಾದಳದ ತಾಲೂಕ ಅಧ್ಯಕ್ಷರಾದ ಎಸ್.ಆಯ್ ಗಚ್ಚಿನವರ ಅತಿಥಿಗಳಾದ ಶ್ರೀ ಶಿವನಗೌಡರು ಬಿರಾದಾರ್. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವಸಂತ್ ರಾಥೋಡ್ ಅವರು ಹಿರಿಯರಾದ ಶ್ರೀ ಎಫ್.ಡಿ ಮೇಟಿ ಮರ್ತೂರ ವಕೀಲರು ಕಾರ್ಯಕರ್ತರು ಕೂಡಿ ಕೊಂಡು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆರ್.ಜಿ ಅಳ್ಳಗಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತ ಸೇವಾದಳದ ಕಾರ್ಯಕರ್ತರು ಜೂನ್ ತಿಂಗಳಿಂದ ಮಾರ್ಚ್ ವರೆಗೆ ಕಾರ್ಯಕ್ರಮದ ಪಟ್ಟಿಯನ್ನು ವಿತರಿಸಿದರು. ಸೇವಾದಳವು ಮಕ್ಕಳಲ್ಲಿ ಯುವಕರಲ್ಲಿ ಶಿಸ್ತು ದೇಶ ಭಕ್ತಿ ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವಸಂತ ರಾಥೋಡ್ ಅವರು ವರ್ಷವಿಡಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವುದನ್ನು ನೋಡಿ ನಮಗೆ ಸಂತೋಷವಾಗಿದೆ ಎಂದು ಹೇಳಿದರು. ಇದೇ ಸಮಯದಲ್ಲಿ ಅಶೋಕ ಗುಡದಿನ್ನಿ. ನಾಗಪ್ಪ ಕ್ವಾಟಿ ಶ್ರೀಮತಿ ಸಾವಿತ್ರಿ ಕಲ್ಯಾಣ ಶೆಟ್ಟಿ ಶ್ರೀ ಜಿ.ಎ ನಾಗರಾಳ ಬಿ.ಎಸ್ ಅವಟಿ. ನಾಗೇಶ್ ಡೋಣೂರ ಅವರು ಎ.ಐ ಮಠಪತಿ ಅವರು ಶಿವಾನಂದ ಮಡಿಕೇಶ್ವರ ಬಿ.ವಿ ಚಕ್ರಮನಿ ಕೊಟ್ರೇಶ ಹೆಗಡ್ಯಾಳ ಮತ್ತು ಬಸವನ ಬಾಗೇವಾಡಿ ತಾಲೂಕಿನ ಭಾರತ ಸೇವಾ ದಳದ ಘಟಕಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ