BREAKING NEWS : ಜಾತಿ ಆಧಾರದಲ್ಲಿ ಕಾಂಗ್ರೆಸ್ ನಲ್ಲಿ ಸಿಎಂ ಆಯ್ಕೆ ನಡೆಯಲ್ಲ , ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್.

ಬಾಗಲಕೋಟೆ :

ಜಾತಿ ಆಧಾರದಲ್ಲಿ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡಲ್ಲ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿ ಗ್ರಾಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಜಾತಿಯಾಧರದಲ್ಲಿ ಸಿಎಂ ಆಯ್ಕೆ ಮಾಡಲ್ಲ. ಆ ಕಾಲಕ್ಕೆ ಯಾರು ಸಮರ್ಥರಿದ್ದಾರೋ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ದಲಿತ ಸಿಎಂ ಆಗಬೇಕೆಂದು ಸಮುದಾಯದವರು ಅಭಿಲಾಷೆ ಪಡುತ್ತಾರೆ. ಅವರುಆಸೆ ಪಡುವುದು ಸಹಜ, ಅದನ್ನು ತಡೆಯಲುಸಾಧ್ಯವಿಲ್ಲ. ದುರ್ದೈವ ಅಂದ್ರೆ ಈಗ ಜಾತಿ ಆಧಾರದಮೇಲೆ ರಾಜಕೀಯ ನಿಂತಿದೆ ಎಂದು ಹೇಳಿದ್ದಾರೆ.

 

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button