ಶ್ರೀ ವಿಠ್ಠಲ ರುಕ್ಮಿಣಿ ದೇವರ 31.ನೇ ವರ್ಷದ ದಿಂಡಿ ಉತ್ಸವ.
ಕೊಟ್ಟೂರು ಡಿಸೆಂಬರ್.10

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ & ಪಟ್ಟಣದ ಶ್ರೀ ವಿಠ್ಠಲ – ರುಕ್ಮಿಣಿ ದೇವರ 31.ನೇ ವರ್ಷದ ದಿಂಡಿ ಉತ್ಸವ ಡಿಸೆಂಬರ್ – 13. ರಿಂದ ಮೂರು 32 ಸಂಭ್ರಮದಲ್ಲಿ ವಿಜೃಂಭಣೆಯಿಂದ ಜರುಗಲಿದ್ದು ಶ್ರೀ ಸ್ವಾಮಿಯ ಸದ್ಭಕ್ತರು ಉತ್ಸವದಲ್ಲಿ ತನು, ಮನಗಳಿಂದ ಪಾಲ್ಗೊಂಡು ಶ್ರೀ ವಿಠ್ಠಲ – ರುಕ್ಮಿಣಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಭಾವಸಾರ ಕ್ಷತ್ರಿಯ ಸಮಾಜದ, ಶ್ರೀ ಪಾಂಡುರಂಗ ರುಕ್ಕಿಣಿ ಟ್ರಸ್ಟ್ ಪ್ರಕಟಣೆಯಲ್ಲಿಕೋರಿದ್ದಾರೆ. ಡಿ-13. ರಂದು ಬುಧವಾರ ಶ್ರೀಗೋಪಾಲ್ ಮಹಾರಾಜರು ಸಾಹೇಬ್ ಬಾಹು ಸಾಹೇಬ್ ವಾಸ್ಕರ ಮಹಾರಾಜ ಪಂಢರಪುರ ಇವರ ದಿವ್ಯ ಕೃಪಾಶಿವಾರ್ದದೊಂದಿಗೆ ಸಂಜೆ ಪೋತಿಸ್ಥಾಪನೆ,ಭಜನೆ ಹಾಗೂ ರಾತ್ರಿ ಕೀರ್ತನೆ ನಂತರ ಅಖಂಡ ವೀಣಾ ಜಾಗರಣೆ ನಡೆಯಲಿವೆ. ಡಿ-14 ರಂದು ಗುರುವಾರ ಬೆಳಿಗ್ಗೆ ಕಾಕಡಾರುತಿ.ಭಜನೆ, ಪಾರಾಯಣ ಮತ್ತು 9-12 ನೇ ಅಧ್ಯಾಯ ಜ್ಞಾನೇಶ್ವರಿ ಪಾರಾಯಣ, ಸಂಜೆ ನಾಮಜಪ, ಪ್ರವಚನಹಾಗೂ ರಾತ್ರಿ ಕೀರ್ತನೆ ಜರುಗಲಿವೆ. 2.15 ಶುಕ್ರವಾರ ಬೆಳಿಗ್ಗೆ ಕಾಕಡಾರತಿ, ಕಾಲಕೀರ್ತನ ನಡೆದ ನಂತರ ಮಧ್ಯಾಹ್ನ ಶ್ರೀ ವಿಠ್ಠಲ – ರುಕ್ಕಿಣಿ ದೇವರ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀದೇವರ ನಾಮ ಸ್ಮರಣೆಯ ಭಜನೆಯೊಂದಿಗೆ ಮತ್ತು ಮಹಿಳೆಯರು ಕಂಚಿನ ಕಳಸದೊಂದಿಗೆ ಪಾಲ್ಗೊಳ್ಳಲಿದ್ದು, ಉತ್ಸವ ನೂರಾರು ಭಕ್ತರ ಸಮೂಹದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ತಿಳಿಸಿರುವರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು