ಕಾಲುಬಾಯಿ ರೋಗ ಲಸಿಕಾ ಅಭಿಯಾನ.

ಚಪ್ಪರದಹಳ್ಳಿ ಏಪ್ರಿಲ್.02

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕ ದಿ 01-04-2024 ರಿಂದ 01-04-2024 ರವರೆಗೆ ನಡೆಯಲಿರುವ ಐದನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಪ್ರಯುಕ್ತ ಕೆ.ಅಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಪ್ಪರದಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ರೈತರಿಗೆ ಆರ್ಥಿಕ ಸಂಕಷ್ಟ ಉಂಟು ಮಾಡುವ ಕಾಲುಬಾಯಿ ರೋಗದಿಂದ ರಾಜ್ಯವನ್ನು ಮುಕ್ತ ಮಾಡುವಲ್ಲಿ ಸಹಕರಿಸ ಬೇಕು ಎಂದು ತಿಳಿಸುತ್ತಾ ಕಾಲುಬಾಯಿ ರೋಗವು ಎತ್ತು ಎಮ್ಮೆ ಹೋರಿ ಹಸು ಮತ್ತು ಹಂದಿಗಳಲ್ಲಿ ಆರ್ಥಿಕ ನಷ್ಟ ಉಂಟು ಮಾಡುವ ಮಾರಕ ರೋಗವಾಗಿದೆ. ರೋಗದಿಂದ ಗುಣಮುಖವಾದ ಜಾನುವಾರುಗಳಲ್ಲಿ ಗರ್ಭ ಕಟ್ಟುವಿಕೆಯಲ್ಲಿ ವಿಳಂಬ ಸಾಮರ್ಥ್ಯ ನಷ್ಟ ಮತ್ತು ಹಾಲಿನ ಇಳುವರೆಯಲ್ಲಿ ಇಳಿಮುಖ ವಾಗುವ ಸಾಧ್ಯತೆ ಇರುತ್ತದೆ ಮತ್ತು ರೋಗದಿಂದ ಪೂರ್ಣ ಸುರಕ್ಷತೆಗಾಗಿ ಮೂರು ತಿಂಗಳ ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕುವ ಅಗತ್ಯವಾಗಿರುತ್ತದೆ.

ಈ ಕಾರಣದಿಂದ ರೈತರು ಇದರ ಸದುಪಯೋಗ ಪಡಿಸಿ ಕೊಳ್ಳಬೇಕು ಇದು ಅಭಿಯಾನದ ತರ ನಡೆಯುತ್ತದೆ ಈ ಸಮಯದಲ್ಲಿ ನಮ್ಮ ಇಲಾಖೆಯ ಸಿಬ್ಬಂದಿಗಳು ರೈತರ‌ ಮನೆ ಬಾಗಿಲಿಗೆ ತೆರಳಿ‌ ಉಚಿತವಾಗಿ ಲಸಿಕೆ ಹಾಕುತ್ತಾರೆ ಎಂದು ಡಾ.ಕೊಟ್ರೇಶ.ಕೆ.ವಿ. ಸಹಾಯಕ‌ ನಿರ್ದೇಶಕರು ಪಶು ಆಸ್ಪತ್ರೆ ಕೊಟ್ಟೂರು ಮತ್ತು ಸಿಬ್ಬಂದಿಗಳಾದ ಬಸಯ್ಯ ನಂದಿಹಳ್ಳಿ, ಕೊಟ್ರೇಶ, ಅಂಬರೀಶ್, ಪ್ರೇಮ್ ಕುಮಾರ್, ಆನಂದ ಮತ್ತು ಚಪ್ಪರದಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button