ವಿಶ್ವ ಶ್ರೇಷ್ಠ ವಿವೇಕಾನಂದರು…..

ವಿಶ್ವನಾಥದತ್ತ ಭುವನೇಶ್ವರಿ ದೇವಿಯ
ಉದರದಿ
ಜನ್ಮ ತಾಳಿದರು ನರೇಂದ್ರನಾಗಿ ಪಶ್ಚಿಮ
ಬಂಗಾಳದಿ
ಬೆಳೆದರು ರಾಮಕೃಷ್ಣ ಪರಮಹಂಸರ
ಆಶೀರ್ವಾದದಿ
ಬೆಳಗಿದರು ಕೀರ್ತಿ ಅಧ್ಯಾತ್ಮ ಲೋಕದಿ
ಬರೆದ ಕೃತಿಗಳು ರಾಜಯೋಗ ಕರ್ಮಯೋಗ
ಜೊತೆಗೆ ಭಕ್ತಿಯೋಗ ಜ್ಞಾನಯೋಗ
ವಿವೇಕಾನಂದರಾಗಿ ಬೆಳಗಿದರು ಈ ಜಗ
ಚಿಕಾಗೋದಲ್ಲಿ ಪರಿಚಯಿಸಿದರು ಹಿಂದೂ
ಧರ್ಮದ ಯೋಗ
1893ರ ವಿಶ್ವಧರ್ಮ ಸಮ್ಮೇಳನದಲ್ಲಿ
ಸಹೋದರ ಸಹೋದರಿಯರೇ ಎಂದರು
ಅಮೆರಿಕದಲ್ಲಿ
ರಾಮಕೃಷ್ಣ ಮಿಷನ್ ಸ್ಥಾಪಿಸಿದರು ಕಲ್ಕತ್ತಾದಲ್ಲಿ
ಪ್ರಪಂಚಕ್ಕೆ ಹೆಸರುವಾಸಿಯಾದರು ಚಿಕ್ಕ
ವಯಸ್ಸಿನಲ್ಲಿ
ತಾನು ತನ್ನದು ಎನ್ನುವುದು ಬಿಟ್ಟು
ಜಗದ ಬದಲಾವಣೆಗೆ ಕಾವಿಯ ತೊಟ್ಟು
ಯುವಕರ ಬದುಕಿಗೆ ಸ್ಫೂರ್ತಿದಾಯಕ
ಮಾತುಕೊಟ್ಟು ಆದರ್ಶವಾದರೂ 39 ವರ್ಷಕ್ಕೆ
ಲೋಕ ಬಿಟ್ಟು
ದೇಶ ಸುತ್ತಿದರು ಮಾನವ ಜನ್ಮದ ಉದ್ಧಾರಕ್ಕೆ
ಸಮಾನತೆಯ ಹರಿಕಾರರಾಗಿ ಹೆಸರಾದರು
ವಿಶ್ವಕ್ಕೆ
ಚಿಂತನೆಗಳಿಂದ ಆದರ್ಶವಾದರೂ ಮಾನವ
ಕುಲಕ್ಕೆ
ಮನುಜ ಕುಲವೇ ಬಾಗಿ ನಮಿಸುತಿದೆ ನಿಮ್ಮ
ಪಾದಕ್ಕೆ
ಜನವರಿ 12 ಈ ಮಹಾತ್ಮರ ಜನ್ಮ ದಿನ
ಭಾರತದ ಪಾಲಿಗೆ ರಾಷ್ಟ್ರೀಯ ಯುವದಿನ
ಚಿಂತನೆ,ಸಂದೇಶಗಳಿಂದ ಮಾನವ ಜನ್ಮ
ಪಾವನ
ಎಂದೂ ಮರೆಯದ ಭಾರತದ ದಿವ್ಯ ಚೇತನ
ಇಂದಿಗೂ ಯುವಕರ ಪಾಲಿನ ಯುವರತ್ನ
ದಿವ್ಯ ಸಂದೇಶಗಳಿಂದ ಬದುಕು
ಬದಲಾಯಿಸಿದ ಸೇವಾರತ್ನ
ಸರಳತೆಯ ಬದುಕು ಬಾಳಿ ಬೆಳಕಾದ
ಕಾಯಕರತ್ನ
ಸೂರ್ಯ ಚಂದ್ರರಿರೋವರೆಗೂ ಭಾರತಕ್ಕೆ
ನೀವೇ ಭಾರತ ರತ್ನ
ಶ್ರೀ ಮುತ್ತು.ಯ.ವಡ್ಡರ ( ಶಿಕ್ಷಕರು)
ಬಾಗಲಕೋಟ Mob-9845568484