ವಿಶ್ವ ಶ್ರೇಷ್ಠ ವಿವೇಕಾನಂದರು…..

ವಿಶ್ವನಾಥದತ್ತ ಭುವನೇಶ್ವರಿ ದೇವಿಯ

ಉದರದಿ

ಜನ್ಮ ತಾಳಿದರು ನರೇಂದ್ರನಾಗಿ ಪಶ್ಚಿಮ

ಬಂಗಾಳದಿ

ಬೆಳೆದರು ರಾಮಕೃಷ್ಣ ಪರಮಹಂಸರ

ಆಶೀರ್ವಾದದಿ

ಬೆಳಗಿದರು ಕೀರ್ತಿ ಅಧ್ಯಾತ್ಮ ಲೋಕದಿ

ಬರೆದ ಕೃತಿಗಳು ರಾಜಯೋಗ ಕರ್ಮಯೋಗ

ಜೊತೆಗೆ ಭಕ್ತಿಯೋಗ ಜ್ಞಾನಯೋಗ

ವಿವೇಕಾನಂದರಾಗಿ ಬೆಳಗಿದರು ಈ ಜಗ

ಚಿಕಾಗೋದಲ್ಲಿ ಪರಿಚಯಿಸಿದರು ಹಿಂದೂ

ಧರ್ಮದ ಯೋಗ

1893ರ ವಿಶ್ವಧರ್ಮ ಸಮ್ಮೇಳನದಲ್ಲಿ

ಸಹೋದರ ಸಹೋದರಿಯರೇ ಎಂದರು

ಅಮೆರಿಕದಲ್ಲಿ

ರಾಮಕೃಷ್ಣ ಮಿಷನ್ ಸ್ಥಾಪಿಸಿದರು ಕಲ್ಕತ್ತಾದಲ್ಲಿ

ಪ್ರಪಂಚಕ್ಕೆ ಹೆಸರುವಾಸಿಯಾದರು ಚಿಕ್ಕ

ವಯಸ್ಸಿನಲ್ಲಿ

ತಾನು ತನ್ನದು ಎನ್ನುವುದು ಬಿಟ್ಟು

ಜಗದ ಬದಲಾವಣೆಗೆ ಕಾವಿಯ ತೊಟ್ಟು

ಯುವಕರ ಬದುಕಿಗೆ ಸ್ಫೂರ್ತಿದಾಯಕ

ಮಾತುಕೊಟ್ಟು ಆದರ್ಶವಾದರೂ 39 ವರ್ಷಕ್ಕೆ

ಲೋಕ ಬಿಟ್ಟು

ದೇಶ ಸುತ್ತಿದರು ಮಾನವ ಜನ್ಮದ ಉದ್ಧಾರಕ್ಕೆ

ಸಮಾನತೆಯ ಹರಿಕಾರರಾಗಿ ಹೆಸರಾದರು

ವಿಶ್ವಕ್ಕೆ

ಚಿಂತನೆಗಳಿಂದ ಆದರ್ಶವಾದರೂ ಮಾನವ

ಕುಲಕ್ಕೆ

ಮನುಜ ಕುಲವೇ ಬಾಗಿ ನಮಿಸುತಿದೆ ನಿಮ್ಮ

ಪಾದಕ್ಕೆ

ಜನವರಿ 12 ಈ ಮಹಾತ್ಮರ ಜನ್ಮ ದಿನ

ಭಾರತದ ಪಾಲಿಗೆ ರಾಷ್ಟ್ರೀಯ ಯುವದಿನ

ಚಿಂತನೆ,ಸಂದೇಶಗಳಿಂದ ಮಾನವ ಜನ್ಮ

ಪಾವನ

ಎಂದೂ ಮರೆಯದ ಭಾರತದ ದಿವ್ಯ ಚೇತನ

ಇಂದಿಗೂ ಯುವಕರ ಪಾಲಿನ ಯುವರತ್ನ

ದಿವ್ಯ ಸಂದೇಶಗಳಿಂದ ಬದುಕು

ಬದಲಾಯಿಸಿದ ಸೇವಾರತ್ನ

ಸರಳತೆಯ ಬದುಕು ಬಾಳಿ ಬೆಳಕಾದ

ಕಾಯಕರತ್ನ

ಸೂರ್ಯ ಚಂದ್ರರಿರೋವರೆಗೂ ಭಾರತಕ್ಕೆ

ನೀವೇ ಭಾರತ ರತ್ನ

ಶ್ರೀ ಮುತ್ತು.ಯ.ವಡ್ಡರ ( ಶಿಕ್ಷಕರು)

ಬಾಗಲಕೋಟ Mob-9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button