ಮೊಳಕಾಲ್ಮುರು ತಾಲೂಕಿನಲ್ಲಿ ಅದ್ದೂರಿಯಾಗಿ ವಾಲ್ಮೀಕಿ ಜಯಂತಿ ಆಚರಿಸಿದ ಶಾಸಕರು.

ಮೊಳಕಾಲ್ಮುರು ಅಕ್ಟೋಬರ್.29

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಮೆರವಣಿಗೆ ಮುಖಾಂತರ ವಾಹನದಲ್ಲಿ ವಾಲ್ಮೀಕಿ ಋಷಿ ಭಾವ ಚಿತ್ರವನ್ನು ಇಟ್ಟು ತಮಟೆ ವಾದ್ಯಗಳಿಂದ ಡಿಜಿ ಮುಖಾಂತರ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡಿದರು ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಆವರಣದಲ್ಲಿ ವಾಲ್ಮೀಕಿ ಋಷಿ ಭಾವ ಚಿತ್ರಕ್ಕೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಭಾವ ಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿದರು.

ಮತ್ತು ನಮಸ್ಕಾರ ಮಾಡಿ ಆಶೀರ್ವಾದ ಪಡೆದರು ಮತ್ತು ಶ್ರೀ ವಿಜಯ ಮಾಂತೇಶ್ವರ ಬಸವಲಿಂಗ ಸ್ವಾಮಿಗಳು ಭಾಗವಹಿಸಿ ದೀಪ ಬೆಳಗಿಸಿದರು ಮೊಳಕಾಲ್ಮೂರು ತಾಲೂಕು ವಾಲ್ಮೀಕಿ ಅಧ್ಯಕ್ಷರಾದ ಜಗಲೂರಯ್ಯ ಹಾನಗಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೂರಯ್ಯ ಪೊಲೀಸ್ ಇಲಾಖೆ ಯಾದ ವಸಂತ ಅಸೂದಿ ಸಿಪಿಐ ಮೊಳಕಾಲ್ಮೂರು ತಹಶೀಲ್ದಾರರ ರೂಪ ಮೇಡಂ ಜಿಲ್ಲಾ ಪಂಚಾಯತಿ ಇಲಾಖೆ ನಾಗನಗೌಡ ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಹರೀಶ್ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಲತಿ ಸಂಗೀತ ಮಾಷ್ಟ್ರು ಕೆ ಓ ಶಿವಣ್ಣ ತುಮಕೂಲರಹಳ್ಳಿ ಪಟ್ಟಣ ಪಂಚಾಯತಿ ಅಧಿಕಾರಿಯದ ಮಂಜುನಾಥ್ ಸುಭಾನ್ ಸಾಬ್ ಖಾದರ್ ರಾಯಪುರ ಪಟೇಲ್ ಪಾಪ ನಾಯಕ್ ಸೋಲೇನಳ್ಳಿ ಮಾರನಾಯಕ ಮೊಳಕಾಲ್ಮೂರು ಪಟ್ಟಣದ ಬಡಬಯ್ಯ ಅಬ್ದುಲ್ ಸಾಹೇಬ್ ಕಲೀಮುಲ್ಲಾ ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಪ್ರಕಾಶ್ ಇನ್ನು ಮುಂತಾದ ಪ್ರಮುಖರು ಭಾಗವಹಿಸಿ ಮಾನ್ಯ ಶಾಸಕರು ಸಭೆ ಉದ್ದೇಶಿಸಿ ಮಾತನಾಡಿದರು.

ವಾಲ್ಮೀಕಿ ರಾಮಾಯಣ ಎಂಬುದು ಪ್ರಪಂಚಕ್ಕೆ ಕವನ ರೂಪದಲ್ಲಿ ನವಿಲು ಗೆರೆಯ ಕಡ್ಡಿಯಿಂದ ತಪಸ್ಸು ಕುಳಿತು ಬರೆದಂತ ವಾಲ್ಮೀಕಿ ಮಹಾಋಷಿ ಇದೇ ನಿಜವಾದ ಗ್ರಂಥ ಎಂದು ಹೇಳಲಾಗುತ್ತದೆ ವಾಲ್ಮೀಕಿ ಸಮುದಾಯದಲ್ಲಿ ಮ್ಯಾಸ ನಾಯಕ ಊರನಾಯಕ ಎಂಬ ಭೇದ ಭಾವ ಇರ ಬಾರದೆಂದು ನಾವೆಲ್ಲರೂ ಒಂದೇ ಕುಟುಂಬದ ಅಣ್ಣ ತಮ್ಮಂದಿರು ಇದ್ದಾಗೆ ಮತ್ತು ಎಲ್ಲಾ ಸಮುದಾಯದವರು ಜಾತಿ ಭೇದವ ಮರೆತು ನಾವೆಲ್ಲ ಒಂದೇ ಎಂಬ ನಂಬಿಕೆ ಮೇಲೆ ನಡೆಯಬೇಕು.

ಮತ್ತು ಮೊಳಕಾಲ್ಮೂರು ಕ್ಷೇತ್ರಕ್ಕೆ ಚಳ್ಳಕೆರೆ ತಾಲೂಕಿನ ಎರಡು ಹೋಬಳಿ ಸಹ ಮೊಳಕಾಲ್ಮೂರು ಕ್ಷೇತ್ರಕ್ಕೆ ಸೇರುವ ರೈತರಿಗೆ ನೀರಾವರಿ ಕೆರೆಗಳಿಗೆ ನೀರು ತುಂಬಿಸುವ ಮಾನ್ಯ ಮುಖ್ಯಮಂತ್ರಿಗಳ ಹತ್ತಿರ ನಾನು ಮಾತಾಡಿದ್ದೇನೆ ಯೋಜನೆಯನ್ನು ಖಂಡಿತವಾಗಿ ರೂಪಿಸುತ್ತೇನೆ ಎಂದು ಮಾನ್ಯ ಶಾಸಕರು ಹೇಳಿದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button