“ಸಂಕ್ರಾಂತಿಯ ಆಗಮನ”…..

ಜಗದ ನೋವನ್ನು ಮರೆಸಲು

ಜನರು ನಲಿವನು ಬೆರೆಸಲು

ವಿಜ್ಞಾನದ ಅವತಾರ ತೋರಿಸಲು

ಸುಜ್ಞಾನದ ಝೇoಕಾರ ಮೊಳಗಿಸಲು

ಸೂರ್ಯನು ದಿಕ್ಕನ್ನು ಬದಲಿಸುವ ಹಬ್ಬ

ರೈತರು ಸುಗ್ಗಿಯನ್ನು ಸಂಭ್ರಮಿಸುವ ಹಬ್ಬ

ಆಗಸದಲ್ಲಿ ಗಾಳಿಪಟವನ್ನು ತೇಲಿಬಿಟ್ಟ ಹಬ್ಬ

ಎಳ್ಳು ಬೆಲ್ಲವನ್ನು ದಾನ ಮಾಡುವ ಹಬ್ಬ

ರೈತರು ಫಸಲು ಪಡೆದು ಪೂಜಿಸುವ

ಹೊಸ ಬೆಳೆಯ ತಿನಿಸು ತಿನ್ನುವ

ವರ್ಷದ ಮೊದಲ ಸಂಕ್ರಾಂತಿ ಹಬ್ಬವ

ಸಂಭ್ರಮ ಸಡಗರದಲ್ಲಿ ಎಳ್ಳು ಬೆಲ್ಲ ಹಂಚುವ

ರೈತರ ಮನೆಮನೆಯಲ್ಲೂ ಆಚರಿಸುವ

ಸಂಭ್ರಮದ ಹಬ್ಬ ಸಂಕ್ರಾಂತಿ

ತನು ಮನದಲಿ ಹೊಸ ಚೈತನ್ಯ

ಮೂಡಿಸುವುದು ಸಂಕ್ರಾಂತಿ

ಹೊಸ ಬೆಳೆ ಹೊಸ ಕ್ರಾಂತಿ ಜಗದಲಿ

ಹರಡಿಸುವುದು ಸಂಕ್ರಾಂತಿ

ಸಂತಸದಿ ತೇಲುತ ಬರುತ್ತಿದೆ ಸಂಕ್ರಾಂತಿ

ಕು, ಜ್ಯೋತಿ ಆನಂದ ಚಂದುಕರ

ಬಾಗಲಕೋಟ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button