ದಲಿತರ ಭೂಮಿ ಉಳಿಸಿ ಪ್ರವಾಸೋದ್ಯಮ ಇಲಾಖೆ ಮಂಜೂರಾತಿ ಪ್ರಸ್ತಾವನೆ – ರದ್ದು ಮಾಡಲು ಮನವಿ.
ತರೀಕೆರೆ ಜ.13

ದಲಿತರ ಅಭಿವೃದ್ಧಿಗಾಗಿ ಕಾಯ್ದಿರಿಸಿದ ನರಸಿಂಹರಾಜಪುರದ ರಾವೂರು ಗ್ರಾಮದ ಸರ್ವೆ ನಂಬರ್ 157, 158 ಮತ್ತು 159 ರಲ್ಲಿ ಹಿಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ಅಭಿವೃದ್ಧಿಗಾಗಿ ಮಾನ್ಯ ಜಿಲ್ಲಾಧಿಕಾರಿಗಳು 2010 – 11 ರಲ್ಲಿ ಜಮೀನು ಮಂಜೂರಾತಿಗಾಗಿ ಸರ್ವೆ ಕಾರ್ಯ ಮಾಡಿ ನಕಾಶೆ ತಯಾರಿಸಿ ಕಾಯ್ದಿರಿಸಿದ್ದ ಜಮೀನಿನಲ್ಲಿ ಪ್ರವಾಸೋದ್ಯಮ ಇಲಾಖೆ ರೆಸಾರ್ಟು ಮಾಡುವ ಉದ್ದೇಶಕ್ಕೆ ಪ್ರಸ್ತಾವನೆಯನ್ನು ತಹಶೀಲ್ದಾರರು ನೀಡಿದ್ದು ಇಲ್ಲಿ ಏನಾದರೂ ರೇಸಾರ್ಟು ಮಾಡಿದ್ದಲ್ಲಿ ಮೋಜು ಮಸ್ತಿ ಹೆಚ್ಚಾಗಿ ಕಾಡಿ ಪ್ರಾಣಿಗಳು ಆಹುತಿ ಯಾಗುವುದು ಖಂಡಿತ ಆದ್ದರಿಂದ ಪ್ರವಾಸೋದ್ಯಮ ಇಲಾಖೆಗೆ ಮಂಜೂರಿ ಮಾಡಲು ಪ್ರಸ್ತಾವನೆ ಕಳಿಸಿರುವುದನ್ನು ರದ್ದು ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿ ಮನವಿ ಪತ್ರವನ್ನು ತರೀಕೆರೆ ಉಪ ವಿಭಾಗ ಅಧಿಕಾರಿಗಳ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುತ್ತಾರೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್, ಜಿಲ್ಲಾ ಸಂಘಟನಾ ಸಂಚಾಲಕರಾದ ಎನ್ ಆರ್ ಪುರದ ರಾಜೇಶ್, ಅಬ್ದುಲ್ ರೆಹಮಾನ್, ತಾಲೂಕು ಸಂಘಟನಾ ಸಂಚಾಲಕರಾದ ಎಸ್ ರಾಜು ಮುಂತಾದವರು ಮನವಿ ಪತ್ರ ನೀಡಿದರು. ಮನವಿಯನ್ನ ಸ್ವೀಕರಿಸಿದ ಉಪ ವಿಭಾಗ ಅಧಿಕಾರಿ ಡಾ, ಕೆ.ಜೆ ಕಾಂತರಾಜ್ ರವರು ಮಾತನಾಡಿ ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ .ಚಿಕ್ಕಮಗಳೂರು