“ಸಂಕ್ರಾಂತಿ ಹಬ್ಬ ಸರ್ವರ ತನು ಮನದ ಹೊಸಬೆಳಕು”…..

ಸಂಕ್ರಾಂತಿ ಸರ್ವರ ಹರುಷದ ಕಾಂತಿ
ವರುಷದ ಪ್ರಥಮ ಹುರುಪು
ಮಕರ ಸಂಕ್ರಾತಿ ಜೀವನದ
ತಮ ಕಳೆದು ಸೌರಮಾನ ಬಾಳ ಬೆಳಕಿನಡೆಗೆ
ಭೂದೇವಿಯ ನಾಡನುಡಿ ನೆಲ ಜಲ
ಅನ್ನದಾತರ ಸಂತೋಷದ ಹಬ್ಬ
ಕೌಟುಂಬಿಕ ಜೀವನ ನೆಮ್ಮದಿ
ಸಮೃದ್ಧಿಯ ಬಂಧನ
ದುಷ್ಟರ ಸಂಹಾರ ಶಿಷ್ಟರ ರಕ್ಷಣೆಯ ದ್ಯೋತಕ
ದೇಹ ಮಲೀನದ ಸ್ವಚ್ಛತೆಗೆ ನದಿ ಸ್ನಾನ
ಚಿತ್ತ ಶುದ್ಧತೆಗೆ ಆದ್ಯಾತ್ಮಿಕತೆಯ ಜ್ಞಾನ
ಬಾಳ ಪಯಣದ ನಕರಾತ್ಮಕ ಕಳೆ
ಸಕರಾತ್ಮಕ ಹೊಳೆ ಏಕತೆಗೆ
ಎಳ್ಳು ಬೆಲ್ಲ ಹಬ್ಬದ ಸವಿಯ
ವಿನಿಮಯ ಸುಗ್ಗಿಯ ಹಿಗ್ಗು
ಗಾಳಿ ಪಟ ಬಾನಲಿ ತೇಲಿ ಸ್ನೇಹ
ಸೌಹಾರ್ದತೆಯ ಮೆರಗು
ಮನೆ ಮನಗಳಲಿ ದೀಪಗಳ ಬೆಳಕು
ಕಬ್ಬಿನ ಸಿಹಿ ಹಣ್ಣುಗಳ ಸವಿ
ಖುಷಿ ಸೋಬಗಿನ ಸಮಾಜಮುಖಿ
ಭಾವ ಬೆಸುಗೆ
ಸೂರ್ಯದೇವನ ಸ್ಮರಣೆ ಆರೋಗ್ಯಸಿರಿ
ಸಮೃದ್ಧಿಯ ಸಂಕೇತ
ಸಂಕ್ರಾಂತಿ ಹಬ್ಬ ಸರ್ವರ
ತನು ಮನದ ಹೊಸಬೆಳಕು
ಎಳ್ಳು ಬೆಲ್ಲ ತಿಂದು ಕಬ್ಬು
ಬಾಳೆ ಸವಿಯುತ ಚೆನ್ನುಡಿ
ಕಹಿ ಮರೆತು ಸದಾ ಸವಿ ಧನಿಕತೆ
ಮಕರ ಸಂಕ್ರಾಂತಿಯ ಹಬ್ಬ
ಬಾಳ ದಾರಿಯಲಿ ಸಾಮರಸ್ಯ
ಸಂತಸ ಹೂವುಗಳು ಅರಳಲಿ

-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ