ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ನೀಡಿ. ರಾಘವೇಂದ್ರ ಕುಲಕರ್ಣಿ.

ವಿಜಯಪುರ ಮಾರ್ಚ್:-11

ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಅರ್ಜುಣಗಿ ಕೆಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 5 ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಸ್ವರ್ಧಾತ್ಮಕ ಜಗತ್ತಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಲು ಮುಂದಾಗಬೇಕು ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಯಕ್ತಿಕ ಕಾಳಜಿ ವಹಿಸಬೇಕು ಮನೆಯಲ್ಲಿ ಪಾಲಕರೂ ಹಾಗೂ ಶಾಲೆಯಲ್ಲಿ ಶಿಕ್ಷಕರು ಉತ್ತಮ ಸಂಸ್ಕಾರ.ಜ್ಞಾನ ನೀಡಿದರೆ ಒಬ್ಬ ವಿದ್ಯಾರ್ಥಿಯು ದೇಶದ ಉತ್ತಮ ಪ್ರಜೆಯಾಗಲು ಸಾಧ್ಯವಿದೆ ಸರಕಾರಿ ಶಾಲೆಗಳು ದೊಡ್ಡ ಮಟ್ಟದಲ್ಲಿ ಬೆಳೆಸಬೇಕಾದರೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಶ್ರೀ ವೇ ಮೂ ಗುರುಶಾಂತಯ್ಯ ಹಿರೇಮಠ ವಹಿಸಿದರು.ಸಾನಿದ್ಯ ಶ್ರೀ ಶಿವಯ್ಯ ಸ್ವಾಮಿ ವಹಿಸಿಕೊಂಡಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಧ್ಯಾಮನಗೌಡ ಬಿರಾದಾರ ವಹಿಸಿಕೊಂಡಿದ್ದರು.ಕಾರ್ಯಕ್ರಮದ ಉದ್ಘಾಟನೆಯನ್ನು ಗಣೇಶ ಸುಪನೂರ ನೇರವೆರಿಸಿದರು. ಈ ಸಂದರ್ಭದಲ್ಲಿ ಪಂಚಪ್ಪ ಹಂಜಗಿ.ಲಾಲಭಾಷಾ ಚಬನೂರ.ಮಹಾತೇಂಶ ತಾವರಖೇಡ.ನಿಂಗಪ್ಪ ಪೂಜಾರಿ.ಕಾಶಿಮ ಕೊಮಡಿ.ರಾಜೇಸಾಬ ಯತ್ನಾಳ.ಶ್ರೀಶೈಲ ಹಂಚನಾಳ.ಮಹ್ಮದಸಾಬ ಮುಲ್ಲಾ.ಬಾಬುಗೌಡ ಬಿರಾದಾರ.ಭಾಗಪ್ಪ ಪರೀಟ.ಭೀರಪ್ಪ ಕರಗಾರ. ಮಹಾದೇವಪ್ಪ ಪಡಗಾನೂರ. ನಂದಪ್ಪ ಪೂಜಾರಿ. ಜಹಾಂಗಿರ ಮುಲ್ಲಾ.ಶರಣಪ್ಪ ಹೊಸೂರ. ಸಿದ್ರಾಮ ಹೊಸೂರ ಡಾ॥ಸುರೇಶ ಬಿಜಾಪೂರ ಡಾ॥ಲಕ್ಕಪ್ಪ ಪೂಜಾರಿ.ಕುತ್ಭುದ್ದಿನ್ ನಾಗಾವಿ.ರವಿ ಕಾಂಬಳೆ.ಶಿವಯೋಗಿ ಹೊಸಮನಿ.ನಾಮದೇವ ಸೂಪನೂರ.ಹಸನಸಾಬ ಕೊಮಡಿ.ಮಹ್ಮದ ಶೇಖ.ಮೈಹಿಬೂಬ ಮುಲ್ಲಾ.ಮಶ್ಯಾಕ ಮುಲ್ಲಾ.ಪರಮಗೌಡ ಬಿರಾದಾರ. ಆರ್ ಆರ್ ಠಾಕೂರ ಮುಖ್ಯಗುರುಗಳು.ಎ ಆರ್ ಲಾಳಸಂಗಿ ಶಿಕ್ಷಕರು. ಜೆ ಪಿ ಚವಡಿಹಾಳ ಶಿಕ್ಷಕರು. ಈರಣ್ಣ ಜಮಾದಾರ ಶಿಕ್ಷಕರು ಸೇರಿದಂತೆ ಗ್ರಾ ಪಂ ಸದಸ್ಯರು.ಎಸ್ ಡಿ ಎಮ್ ಸಿ ಅಧ್ಯಕ್ಷರು ಸರ್ವ ಸದಸ್ಯರು ಇನ್ನೂ ಅನೇಕರು ಅತಿಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಗಂಗಾಧರ ತಾವರಖೇಡ ಶಿಕ್ಷಕರು ಹಾಗೂ ಭೀಮನಗೌಡ ಬಿರಾದಾರ. ನಿರೂಪಿಸಿ ವಂದಿಸಿದರು.

ಜಿಲ್ಲಾ ವರದಿಗಾರರು : ಬೀ ಎಸ್ ಹೊಸೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button