ರೈತರ ಬರ ಪರಿಹಾರಕ್ಕೆ ಎಫ್.ಐ.ಡಿ (FID) ಕಡ್ಡಾಯ.
ಕೊಟ್ಟೂರು ನವೆಂಬರ್.4

2023-24 ನೇ ಸಾಲಿನಲ್ಲಿ ಕೊಟ್ಟೂರು ತಾಲೂಕು ಬರ ಪೀಡಿತ ಎಂದು ಘೋಷಣೆಯಾಗಿರುವ ಹಿನ್ನೆಲೆ ಸರ್ಕಾರದಿಂದ ಪರಿಹಾರದ ಹಣ ಪಡೆಯಲು ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಎಫ್.ಐ.ಡಿ ಮಾಡಿಸಿ ಕೊಳ್ಳಬೇಕು, ಒಬ್ಬ ರೈತನಿಗೆ 05 ಸರ್ವೇ ನಂಬರ್ ಇದ್ದು 01 ಸರ್ವೇ ನಂಬರ್ ಮಾತ್ರ ಎಫ್.ಐ.ಡಿ ಗೆ ನಮೂದು ಮಾಡಿಸಿದ್ದಲ್ಲಿ ಎಲ್ಲಾ ಸರ್ವೇ ನಂಬರ್ಗಳನ್ನು ಎಫ್.ಐ.ಡಿ ಗೆ ಲಿಂಕ್ ಮಾಡಿಸ ಬೇಕು ಹಾಗೂ ಜಂಟಿ ಖಾತೆದಾರರು ಇದ್ದಲ್ಲಿ ಪ್ರತಿಯೊಬ್ಬ ಖಾತೆದಾರರು ಪ್ರತ್ಯೇಕವಾಗಿ ಎಫ್.ಐ.ಡಿ ಮಾಡಿಸಿ ಕೊಳ್ಳಬೇಕು. ಇಲ್ಲವಾದಲ್ಲಿ ಬರ ಪರಿಹಾರದ ಹಣ ರೈತರ ಖಾತೆಗೆ ಜಮಾ ಯಾಗುವುದಿಲ್ಲ.ಎಫ್.ಐ.ಡಿ ಮಾಡಿಸಿ ಕೊಳ್ಳಲು ಬೇಕಾದ ದಾಖಲಾತಿಗಳು ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ಆಧಾರ್ ಕಾರ್ಡು ಜೆರಾಕ್ಸ್ ಮತ್ತು ಪಹಣಿಗಳು. ಈಗಾಗಲೇ ಎಫ್.ಐ.ಡಿ ಮಾಡಿಸಿ ಕೊಂಡ ರೈತರು ಮತ್ತೊಮ್ಮೆ ಎಫ್.ಐ.ಡಿ ಮಾಡಿಸಿ ಕೊಳ್ಳವುದು ಅವಶ್ಯಕತೆ ಇರುವುದಿಲ್ಲ ಎಂದು ತಹಶೀಲ್ದಾರರು. ಕೊಟ್ಟೂರು ರವರು ಮಾಹಿತಿ ನೀಡಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ, ರೇಷ್ಮೆ ಇಲಾಖೆ ಅಥವಾ ಕಂದಾಯ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.ಸಹಾಯಕ ಕೃಷಿ ನಿರ್ದೇಶಕರು ಪತ್ರಿಕೆಗೆ ತಿಳಿಸಿದ್ದಾರೆ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು