ಬದುಕಲು ಕಲಿಸುವುದೇ ವಿದ್ಯಾರ್ಥಿ ಜೀವನ – ಸಂಗಮೇಶ ಬಬಲೇಶ್ವರ.
ವಿಜಯಪುರ ಮೇ.26

ಶಿಕ್ಷಣ ದಿಂದ ಸಿಗುವ ಜ್ಞಾನಾರ್ಜನೆಯು ಪ್ರತಿಯೊಬ್ಬರ ಆಸ್ತಿ. ವಿದ್ಯಾರ್ಥಿ ಬದುಕೆಂಬುದು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಕ್ರಿಯಾಶೀಲ ಅವಧಿ. ಇದು ಮಕ್ಕಳ ಮೌಲ್ಯಾತ್ಮಕ ವ್ಯಕ್ತಿತ್ವ ರೂಪಿಸುವ ಕಾಲಘಟ್ಟವಾಗಿದೆ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಸೋಮವಾರ ದಂದು ನಗರದ ಕಾಳಿಕಾ ಮಂದಿರದಲ್ಲಿಉನ್ನತಿ ವಿದ್ಯಾ ವರ್ಧಕ ಸಂಘದ ವತಿಯಿಂದ ಉನ್ನತಿ ಕೋಚಿಂಗ್ ಕ್ಲಾಸಿನ ಸಮಾರೋಪ ಹಾಗೂ ನಿರಂತರ ತರಬೇತಿಯ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದ ಜತೆಗೆ ಒಳ್ಳೆಯ ಸಂಸ್ಕಾರ ನೀಡುವುದು ತಂದೆ ತಾಯಿಗಳ ಮುಖ್ಯ ಆದ್ಯತೆ ಯಾಗಬೇಕು ಎಂದು ಹೇಳಿದರು.ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ಮಕ್ಕಳುಶ್ರಮ ವಹಿಸಿ ಅಧ್ಯಯನ ಮಾಡುವ ಪ್ರವೃತ್ತಿಯನ್ನು ರೂಢಿಸಿ ಕೊಳ್ಳುವ ಜೊತೆಗೆ ಸ್ವಾವಲಂಬಿ ಬದುಕಿಗೆ ಅಗತ್ಯವಾದ ಮಾನವೀಯ ಮೌಲ್ಯ ಮತ್ತು ಜೀವನ ಕೌಶಲ್ಯ ಬೆಳೆಸಿ ಕೊಂಡು ದೇಶದ ಉತ್ತಮ ಪ್ರಜೆಗಳಾಗ ಬೇಕು ಎಂದು ಹೇಳಿದರು.

ಶಿಕ್ಷಕ ಸಾಹಿತಿ ಆರ್.ಎಸ್ ಪಟ್ಟಣಶೆಟ್ಟಿ ಮಾತನಾಡಿ, ಮಕ್ಕಳಿಗೆ ಆಚಾರ, ವಿಚಾರ ಕಲಿಸಿ ಉತ್ತಮ ಸಂಸ್ಕಾರ ನೀಡುವ ಜತೆಗೆ ಅಕ್ಷರಾಭ್ಯಾಸ ಮಾಡಲು ಮನೆಯಲ್ಲಿ ಉತ್ತಮ ವಾತಾವರಣ ಕಲ್ಪಿಸಬೇಕು. ಪಾಲಕರ ಪ್ರೀತಿ, ಗುರು ವೃಂದದ ಮಾರ್ಗದರ್ಶನ, ವಿದ್ಯಾರ್ಥಿಗಳ ನಿರಂತರ ಪರಿಶ್ರಮ ದಿಂದ ಖಂಡಿತ ಗುರಿ ತಲುಪಲು ಸಾಧ್ಯ ಎಂದು ಹೇಳಿದರು.ವ್ಯವಸ್ಥಾಪಕ ನಿರ್ದೇಶಕ ಸುನೀಲಕುಮಾರ ಅತನೂರಮಾತನಾಡಿ, ತಾಯಂದಿರು ತಮ್ಮ ಮಕ್ಕಳಿಗೆ ಸಾಮರಸ್ಯ, ಸ್ನೇಹ, ಹೊಂದಾಣಿಕೆ, ಪ್ರಾಮಾಣಿಕತೆಯನ್ನು ಚಿಕ್ಕಂದಿನಿಂದಲೇ ಕಲಿಸಬೇಕು ಎಂದರು.ಉನ್ನತಿ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಸಂಗಣ್ಣ ಅತನೂರ ಅಧ್ಯಕ್ಷತೆ ವಹಿಸಿದ್ದರು. ಇಂಡಿ ಯುವ ಧುರೀಣ ಮಂಜುನಾಥ ಕಾಮಗೊಂಡ ಸರಸ್ವತಿ ಫೋಟೋ ಪೂಜೆ ಸಲ್ಲಿಸಿ ಮಾತನಾಡಿದರು. ಹೆಸ್ಕಾo ನಿವೃತ್ತ ಹಿರಿಯ ಅಭಿಯಂತರರಾದ ಪುರುಷೋತ್ತಮ ಗಲಗಲಿ ಸಸಿಗೆ ನಿರೂಣಿಸಿದರು.ಈರಯ್ಯ ಮಠಪತಿ ಸಾನಿಧ್ಯ ವಹಿಸಿದ್ದರು. ಕೋಚಿಂಗ್ ಕ್ಲಾಸಿಸ್ ಮಾರ್ಗದರ್ಶಕರಾದ ಪ್ರಕಾಶ ಬೇನೂರ, ಶಿಕ್ಷಕ ಷಣ್ಮುಖ ಕಲಶೆಟ್ಟಿ, ಶಿಕ್ಷಣ ಪ್ರೇಮಿಗಳಾದ ರಾಜುಗೌಡ,ಗುರಪ್ಪ ಅವಟಿ, ಸುರೇಶ ಕೌಲಗಿ, ಸಂಸ್ಥಾಪಕ ಕಾರ್ಯದರ್ಶಿ ಮಲ್ಲಿಕಾರ್ಜುನ ಅತನೂರ, ಉಪಾಧ್ಯಕ್ಷ ಮಹೇಶ ಬೇನೂರ, ಓಂಕಾರ ನಾವಿ ಬಸವರಾಜ ಲಾಳಸಂಗಿ ಸೇರಿದಂತೆ ಶಿಕ್ಷಕರು, ಮಕ್ಕಳು, ಪಾಲಕರು, ತಾಯಂದಿರು ಭಾಗವಹಿಸಿದ್ದರು.