“ಸ್ನೇಹ ಲೋಕ ನಿರ್ಮಾತೃ ನಿಜ ಮಿತ್ರ”…..

ನಿತ್ಯ ಬಾಳಿನ ಬೆಳಕು
ಗೆಳತನ ಇರದ ಜೀವಿ ಇಲ್ಲ
ಬೇಧ ಭಾವ ಇರದ ಮನ
ಸಹಾಯ ಸೌಹಾರ್ದತೆ ಕುರೂಹು
ಜೀವ ಮಾನದ ಭಾವ ಸುಂದರ
ಅನುದಿನ ಜೋತೆ ಇರುವ ಸುಮನ
ನಿರ್ಭೀತಿಯ ನಿಯಮ ನೀತಿ
ನೋವು ನಿಗಿಸುವ ನಗು
ಕ್ಷಣಾರ್ಧ ಅನಿರೀಕ್ಷಿತ ಅತೀಥಿ
ಸ್ವಚ್ಛ ಮನದ ಮಲ್ಲಿಗೆ ಮಾತು
ವಿಳಂಬ ಇರದ ಮನದ ಸಿರಿ
ಆಗಿಂದಾಗ್ಗೆ ತಯಾರಿ ವೀರ
ಹಾಸ್ಯ ಲಾಸ್ಯದ ಶ್ರೀಮಂತ
ನಿತ್ಯ ಅನುಭವ ನಗೆ ಹನಿ
ತನು ಮನ ಆನಂದ ಚೇತನ
ಸುಂದರ ಲೋಕದ ಕಿರೀಟ ಪ್ರಾಯ
ಪರಸರ ಸ್ನೇಹಿ ಆರೋಗ್ಯ ಸ್ನೇಹಿ
ಜನ ಸ್ನೇಹಿ ಜಗವ ಮರೆಯದ
ಸ್ನೇಹವೇ ಬಾಳಿನ ಹರುಷ
ಮರೆಯದ ಜೀವನ ಸೌಹಾರ್ದತೆ
ಸ್ನೇಹಲೋಕ ನಿರ್ಮಾತೃ ನಿಜ ಮಿತ್ರ.
-ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟೆ