ರೈತರ ಹಿತಕಾಯುವ ಜೆಡಿಎಸ್ ಅಭ್ಯರ್ಥಿ ಬಿ.ಡಿ.ಪಾಟೀಲರಿಗೆ ವ್ಯಾಪಕ ಬೆಂಬಲ.

ತಡವಾಗಿ. ಏ.28

ತಾಂಬಾ.ಸಂಗೋಗಿ ಹಾಗೂ ತಡವಲಗಾ ಗ್ರಾಮದ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಭಾಗವಹಿಸಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶಿವಯೋಗಪ್ಪ ನೇದಲಗಿ ಯವರು ಮಾತನಾಡುತ್ತಾ ನೆನೆಗುದಿಗೆ ಬಿದ್ದಿರುವ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಸಂಕಲ್ಪ ಮಾಡಿದ್ದಾರೆ.ಹಾಗೂ ಬಿ ಡಿ ಪಾಟೀಲರು ಶಾಸಕರಾದರೆ ಜನಸಾಮಾನ್ಯರೆ ಶಾಸಕರಾದ್ದಂತೆ ಎಂದು ಮಾತನಾಡಿದರು.ಮಾಜಿ ಶಾಸಕರಾದ ಶ್ರೀರವಿಕಾಂತ ಪಾಟೀಲ ಮಾತನಾಡುತ್ತಾ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ಆಶಯದಂತೆ ಜನಸಾಮಾನ್ಯಕೂಡಾ ಶಾಸಕರಾಗಿ ಜನಸೇವೆ ಮಾಡಬೇಕು ಎಂದು ಮಾತನಾಡಿದರು, ಅಭ್ಯರ್ಥಿ ಬಿ ಡಿ ಪಾಟೀಲರು ಮಾತನಾಡುತ್ತಾ ನಾನು 2018ರಲ್ಲಿ ಪರಾಭವಗೊಂಡ ಮನೆಯಲ್ಲಿ ಕೂಡಲಿಲ್ಲ ರೈತರ, ವಿದ್ಯಾರ್ಥಿಗಳ, ಕಾರ್ಮಿಕರ, ಪರವಾದ ಹೋರಾಟಗಳನ್ನು, ಹಾಗೂ ಮತಕ್ಷೇತ್ರದ ಪ್ರತಿಮನೆ ಮನೆಗೆ ಬೆಟ್ಟಿ ನೀಡಿ ಬಡವರ ಸಮಸ್ಯೆಗಳನ್ನು ಅರಿತಿದ್ದೇನೆ.ಈ ಚುನಾವಣೆಯಲ್ಲಿ ಒಬ್ಬ ಹೋರಾಟಗಾರಾರನ ದುಡಿಮೆಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಮನವಿ ಮಾಡಿದರು.

ವೇದಿಕೆ ಮಾಜಿ ವಿಧಾನ ಪರಿಷತ್ ಸದಸ್ಯ ಬಿ ಜಿ ಪಾಟೀಲ ಹಲಸಂಗಿ, ತೌಫಿಕ್ ಪೈಲ್ವಾನ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುನಂದಾ ವಾಲಿಕಾರ, ಮೇಲೆ, ಚಿದಾನಂದ ಹಿರೇಮಠ, ಮುತ್ತಪ್ಪ ಪೋತೆ, ಅಕ್ತರ್ ಪಟೇಲ್, ಮಲ್ಲಪ್ಪ ಶಿರಶ್ಯಾಡ,ರಾಮು ರಾಠೋಡ, ಶ್ರೀಶೈಲಗೌಡ ಪಾಟೀಲ ನಾಗೇಶ ತಳಕೇರಿ, ಅಯೂಬ್ ನಾಟೀಕರ,ಸಿದ್ದು ಡಂಗಾ, ಸದ್ದಾಂ ಅರಬ್, ಸಿದ್ದಪ್ಪ ಗುನ್ನಾಪೂರ, ರಮೇಶ್ ರಾಠೋಡ,ಪೀರಪ್ಪ ಹೂಟಗಾರ, ವಿಜು ಭೋಸಲೆ,ಸಂತೋಷ ಕೆಂಭಾವಿ, ರಾಜು ಮುಲ್ಲಾ, ನಿಯಾಝ್ ಅಗರಖೇಡ, ಶಿವಾನಂದ ಅಂಗಡಿ,ನಾಗಪ್ಪ ಮಕಣಿ,ರವಿ ಮಸಳಿ,ಅನೀಲ ರೇಬಿನಾಳ,ಶಕೀಲ ಬಳಮ್,ಡಾ ಪದ್ಮರಾಜ ಪೂಜಾರಿ,ಮಲ್ಲು ಹೂನವಾಡ, ರಾಜು ಕ್ಷೇತ್ರಿ, ವಿಜಯಕುಮಾರ್ ಲೋಕುರ,ಅಶೋಕ ಹೂಸಮನಿ,ಶಟ್ಟಪ್ಪ ಮಾಸ್ತರ, ಮಹಿಬೂಬ ಬೇವನೂರ, ನಾರಾಯಣ ವಾಲಿಕಾರ, ದುಂಡು ಬಿರಾದಾರ, ಜಾಕೀರ್ ಗಣಿಮಾರ,ರವಿ ಶಿಂದೆ ಮುಂತಾದ ನಾಯಕರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು : ಬೀ.ಎಸ್.ಹೊಸೂರ್.ವಿಜಯಪುರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button