“ಅತಿಥಿ ಶಿಕ್ಷಕರ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಶಾಲೆ ತೋರೆಯೋಣ ಅಭಿಯಾನ”.
ವಿಜಯಪುರ ಆಗಷ್ಟ.22
ವಿಜಯಪುರ ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳ ಈಡೇರಿಕೆಗಾಗಿ ಆಗಸ್ಟ್ 23 ಹಾಗೂ 24 ರಂದು ಸಾಂಕೇತಿಕವಾಗಿ ಎರಡು ದಿನಗಳ ಕಾಲ ಅತಿಥಿ ಶಿಕ್ಷಕರು ಬೋಧನಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ “ಶಾಲೆ ತೊರೆಯುವ ಅಭಿಯಾನ” ಹಮ್ಮಿಕೊಳ್ಳಲಾಗಿದೆ ಎಂದು ಅತಿಥಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ದಾನಪ್ಪ ಕಲಕೇರಿ ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿದವರು ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರು ಕಳೆದ 10-11 ವರ್ಷಗಳಿಂದ ಕಡಿಮೆ ವೇತನ ಸೇವಾ ಭದ್ರತೆ, ಕೃಪಾಂಕವೂ ಸೇರಿದಂತೆ ಇನ್ನು ಯಾವುದೇ ರೀತಿಯ ಸೌಲಭ್ಯಗಳಿಲ್ಲದೆ ಪ್ರಾಮಾಣಿಕತೆಯಿಂದ ಶೈಕ್ಷಣಿಕ ಬದುಕನ್ನು ಕಟ್ಟಿಕೊಡುವಲ್ಲಿ ಕಾರ್ಯನಿರತರಾಗಿದ್ದೇವೆ. ಸರ್ಕಾರದ ಹಂತದಲ್ಲಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರತಿಯೊಂದು ಅಧಿಕಾರ ವರ್ಗಕ್ಕೂ ಸಾಕಷ್ಟು ಬಾರಿ ಹಾಗೂ ಇದೇ ವರ್ಷದ ಮಾರ್ಚ್ ಹಾಗೂ ಜುಲೈ ತಿಂಗಳಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಕೈಗೊಂಡು ಪ್ರತಿಭಟನಾ ನಿರತ ಜಾಗಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಬಂದು ನಮ್ಮ ಅಹವಾಲು ಸ್ವೀಕರಿಸಿ ನಮ್ಮ ಬೇಡಿಕೆಗಳ ಈಡೇರಿಕೆಯ ಬಗ್ಗೆ ಸೂಕ್ತ ಭರವಸೆ ನೀಡಿದ್ದು ಇರುತ್ತದೆ.

ಹಾಗೂ ಶಿಕ್ಷಣ ಇಲಾಖೆಯ ಸಚಿವ ಶ್ರೀ ಮಧು ಬಂಗಾರಪ್ಪರವರ ಸಮ್ಮುಖದಲ್ಲಿ ಅತಿಥಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಸಭೆಯನ್ನು ಮಾಡಿದ್ದು ಸಚಿವರು ಕೂಡ ಸೂಕ್ತ ಭರವಸೆಯನ್ನು ನೀಡಿದರೂ ಸಹ ಈವರೆಗೆ ಯಾವುದೇ ಒಂದೇ ಒಂದು ಬೇಡಿಕೆ ಈಡೇರಿಸಿಲ್ಲ ಎಷ್ಟೆಲ್ಲಾ ಬೆಳವಣಿಗೆಗಳು ಗತಿಸಿದರು ಕೂಡ ಯಾವ ಒಂದು ಅತಿಥಿ ಶಿಕ್ಷಕರ ಬೇಡಿಕೆಗಳು ಈಡೇರಿಲ್ಲ ಕುರಿತಂತೆ ಸರ್ಕಾರದಿಂದ ಆದೇಶಗಳು ಬಾರದ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ಹಾಗೂ ಸಾಂಕೇತಿಕವಾಗಿ ರಾಜ್ಯದ ಎಲ್ಲಾ ಅತಿಥಿ ಶಿಕ್ಷಕರು ಶಾಲೆ ತೊರೆಯೊಣ ಅಭಿಯಾನದಲ್ಲಿ ಭಾಗವಹಿಸಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಡಿ,ಎಮ್, ಕಲಕೇರಿ, ಜಿಲ್ಲಾ ಕಾರ್ಯದರ್ಶಿ ಗಳಾದ ಬಿ.ಎಸ್.ಹೊಸೂರ.ಎಸ್ ಎಮ್ ಬಿರಾದಾರ,ರಾಜು ಕರ್ನಾಳ, ಬಿ ಸಿ ಬೀರನೂರ, ಅಶ್ವಿನಿ ಕುರ್ತಳ್ಳಿ, ಸುಜಾತಾ ಕೆರೂಟಗಿ, ಶೋಭಾ ಬಿರಾದಾರ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಶಿವಪ್ಪ.ಬಿ.ಹರಿಜನ.ಇಂಡಿ