16 ನೇ ವಾರ್ಡಿನಲ್ಲಿ ಗಣೇಶ್ ಹಬ್ಬದ ಪ್ರಯುಕ್ತ ರಂಗೋಲಿ ಸ್ಪರ್ಧೆ – ಕೆ. ಈಶಪ್ಪ.

ಕೂಡ್ಲಿಗಿ ಸಪ್ಟೆಂಬರ್.20

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ 16ನೇ ವಾರ್ಡಿನಲ್ಲಿ ರಾಜೀವ್ ಗಾಂಧಿ ನಗರದ 9ನೇ ವರ್ಷದ ಪ್ರಯುಕ್ತವಾಗಿ ಶ್ರೀ ವಿನಾಯಕ ಸೇವಾ ಸಮಿತಿಯಿಂದ ಬೀಚೀ ರಂಗ ಮಂದಿರದಲ್ಲಿ ಶ್ರೀ ಗಣೇಶ್ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿದ್ದು ಈ ವಾರ್ಡಿನ ಪಟ್ಟಣ ಪಂಚಾಯ್ತಿಯ ಸದಸ್ಯರಾದ ಕೆ. ಈಶಪ್ಪ ಸಹ ವಿನಾಯಕ ಸೇವಾ ಸಮಿತಿಯರಿಗೆ ಸಹಾಯ ಹಸ್ತ ಮಾಡುತ್ತ ಬಂದಿರುತ್ತಾರೆ. ಎಂದು ಯುವಕರು ತಿಳಿಸಿರುತ್ತಾರೆ, ಇಲ್ಲಿ ಪ್ರತಿ ವರ್ಷ ಪ್ರತ್ಯೇಕವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದು ಈ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ಮಹಿಳಾ ಮಣಿಗಳು ಭಾಗವಹಿಸಿದ್ದು ವಿವಿಧ ಬಗೆಯ ರಂಗೋಲಿ ಚಿತ್ರಗಳು ಬಿಡಿಸಿ ಉತ್ತಮವಾಗಿ ರಂಗೋಲಿ ಹಾಕಿದ ಮಹಿಳೆರಿಗೆ ಬಹುಮಾನ ನೀಡುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಈ ಸ್ಪರ್ಧೆಯಾ ಪ್ರಾಯೋಜಕರು ಸಹ ಕೆ. ಈಶಪ್ಪ ಅವರ ಧರ್ಮ ಪತ್ನಿಯಾದ ಕೆ. ಗೌರಮ್ಮ ರವರು ರಂಗೋಲಿ ಚಿತ್ರಗಳನ್ನು ವೀಕ್ಷಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಪರ್ಧಾಳುಗಳನ್ನು ಆಯ್ಕೆ ಮಾಡಿ ಬಹುಮಾನ ವಿತರಣೆ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ನೂರಾರು ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿದ್ದರು ತುಂಬಾ ಸಂತೋಷದಿಂದ ಭಾಗವಹಿಸಿ ಬಣ್ಣಬಣ್ಣದ ರಂಗೋಲಿ ಹಾಕಿ ಖುಷಿ ಪಟ್ಟರು .ಹಾಗೂ ರಂಗೋಲಿ ಸ್ಪರ್ಧೆಯನ್ನು ಬೀಚೀ ರಂಗಮಂದಿರ ಮುಂಭಾಗದಲ್ಲಿ ಏರ್ಪಡಿಸಲಾಗಿತ್ತು. ವೀಕ್ಷಣೆ ಮಾಡಲು ಸ್ಥಳೀಯರು ಮಹಿಳೆಯರು ಹಾಗೂ ಯುವಕರು ನೆರೆದ್ದಿದ್ದರು.

ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button