ಆಟೋ ಚಾಲಕರ ಹಾಗೂ ಮಾಲಕರ ಸಂಘದಿಂದ ಸಾಮೂಹಿಕ ವಿವಾಹ, ಗಣ್ಯರು ಬಾಗಿ ಹುಬ್ಬಳ್ಳಿ.
ಹುಬ್ಬಳ್ಳಿ ಏಪ್ರಿಲ್.26

ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘ ಮತ್ತು ಹುಬ್ಬಳ್ಳಿ ಆಟೋ ರಿಕ್ಷಾ ಮಾಲೀಕರ ಹಾಗು ಚಾಲಕರ ಸಂಘ ಹುಬ್ಬಳ್ಳಿಯ ಮಧುರ ಕಾಲೋನಿಯ ದೇವಿ ಬನ್ನಿ ಮಹಾಕಾಳಿ ಆಟೋ ರಿಕ್ಷಾ ಸಂಘ ಮತ್ತು ನಿಲ್ದಾಣದ ಅಧ್ಯಕ್ಷರು ಮಹೇಶ್ ಮಾಳಗಿ ಅವರ ಅಧ್ಯಕ್ಷತೆಯಲ್ಲಿ ಇಂದು ಉಚಿತ ಸಾಮೂಹಿಕ ಮದುವೆಯನ್ನು ಮಾಡಲಾಯಿತು. ನೆರೆ ವರೆಯ ಭಕ್ತಾದಿಗಳು ಮತ್ತು ಹುಬ್ಬಳ್ಳಿಯ ಅನೇಕ ಉದ್ಯಮಿದಾರರ ಸಹಾಯ ಸಹಕಾರ ದಿಂದ ಬಡ ಕಾರ್ಮಿಕರ ಮಕ್ಕಳಿಗೆ ರೈತ ಮಕ್ಕಳಿಗೆ ಮತ್ತು ಆಟೋ ರಿಕ್ಷಾ ಮಕ್ಕಳಿಗೆ ಉಚಿತ ಸಾಮೂಹಿಕ ಮದುವೆ ಶುಭ ಕಾರ್ಯಕ್ರಮವನ್ನು ಇಲ್ಲಿಯ ದೇವಿ ಬನ್ನಿ ಮಹಾಕಾಳಿ ಆಟೋ ರಿಕ್ಷಾ ಸ್ಥಾನದಲ್ಲಿ ನೆರವೇರಿಸಲಾಯಿತು.

ಈ ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಶ್ರೀ ಶ್ರೀ ಬಸವ ಲಿಂಗ ಮಹಾಸ್ವಾಮಿಗಳು ದಾವುದ್ ಅಲಿ ಶೇಕ್ ಮತ್ತು ಉತ್ತರ ಕರ್ನಾಟಕದ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಶೇಖರಯ್ಯ ಮಠಪತಿ ಯವರು ಮತ್ತು ಆಟೋರಿಕ್ಷಾದ ನೂರಾರು ಪದಾಧಿಕಾರಿಗಳು ಉಪಸ್ಥಿತಿಯಲ್ಲಿ ಸಾಮೂಹಿಕ ವಿವಾಹ ನಡೆಯಲಾಯಿತು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ.ಶರ್ಮಾ ಬೆಳಗಾವಿ.