ಮಂತ್ರದಿಂದ ರೋಗ ವಾಸಿಯಾಗದು, ಮಾತ್ರೆಯಿಂದ ರೋಗವಾಸಿ – ಶ್ರೀ ರಾಜಶೇಖರ್ ನರಗೋದಿ.
ಯಂಕಂಚಿ ಡಿಸೆಂಬರ್.28

ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮ ಪಂಚಾಯತದಲ್ಲಿ ನಡೆದ ಕರ್ನಾಟಕ ರಾಜ್ಯ ಏಡ್ಸ್ ಪ್ರವೆನ್ಷನ್ ಸೊಸೈಟಿ ಬೆಂಗಳೂರು ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ ವಿಜಯಪುರ .ಸಾರ್ವಜನಿಕ ಆಸ್ಪತ್ರೆ ಐಸಿಟಿಸಿ ಪ್ರಾಥಮಿಕ ಆರೋಗ್ಯ ಕೇಂದ್ರ ಯಂಕಂಚಿ ಹಾಗೂ ಗ್ರಾಮ ಪಂಚಾಯಿತಿ ಯಂಕಂಚಿ ಇವರಗಳ ಸಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಎಚ್ಐವಿ ಏಡ್ಸ್ ಕುರಿತು ತರಬೇತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮಾತನಾಡಿ ಮಾತನಾಡಿದ ಪ್ರಯೋಗಾಲಯ ತಾಂತ್ರಿಕ ಅಧಿಕಾರಿಗಳು ಆದ ಶ್ರೀ ರಾಜಶೇಖರ್ ನರಗೋದಿ .ಎಚ್ಐವಿ ಏಡ್ಸ್ ಮತ್ತು ಟಿಬಿ. ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಸಾಂಕ್ರಾಮಿಕವಾಗಿ ಹರಡುವ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸಿ ಕೊಳ್ಳುವುದರ ಬಗ್ಗೆ ಮಾತನಾಡಿ ಗ್ರಾಮದಲ್ಲಿ ಒಳ್ಳೆಯ ವಾತಾವರಣ ಜೊತೆಗೆ ಶುದ್ಧವಾದ ಕುಡಿಯುವ ನೀರು ಮತ್ತು ಗ್ರಾಮದ ಎಲ್ಲಾ ಸಾರ್ವಜನಿಕರಿಗೆ ಆರೋಗ್ಯ ದಿಂದ ರೋಗ ಮುಕ್ತ ಗ್ರಾಮವನ್ನು ಮಾಡಲು ಗ್ರಾಮ ಪಂಚಾಯತಿ ಸದಸ್ಯರ ಹಾಗೂ ಆಶಯ ಕಾರ್ಯಕರ್ತರ ಮತ್ತು ಆರೋಗ್ಯ ಇಲಾಖೆಯವರು ಒಂದುಗೂಡಿ ಕೆಲಸ ನಿರ್ವಹಿಸಿದಾಗ ಮಾತ್ರ ಸಾಧ್ಯ ಎಂದು ಹೇಳಿದರು ಇದೇ ಸಮಯದಲ್ಲಿ ಆಪ್ತ ಸಮಾಲೋಚಕರಾದ ಶ್ರೀ ಎಂಪಿ ಸಾಗರ್ ಮಾತನಾಡಿ ಎಚ್ಐವಿ ಏಡ್ಸ್ ಬಗ್ಗೆ ಸಮಗ್ರ ಮಾಹಿತಿ ನೀಡಿದರು ಎಚ್ಐವಿ ಭಾದಿತ ತಾಯಿಂದ ಮಗುವಿಗೆ ಎಚ್ ಐ ವಿ ಬಾರ್ದಂತೆ ನೋಡಿ ಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಮತ್ತು ಎಚ್ಐವಿ act 2017 ರ ಬಗ್ಗೆ ಮಾಹಿತಿ ನೀಡಿದರು ಯಂಕಂಚಿ ಗ್ರಾಮದ pdo ಆದ ಶ್ರೀ ಸಂಜೀವ್ ಕುಮಾರ ದೊಡಮನಿ ಅವರು ಮಾತನಾಡಿ ಇನ್ನು ಕೆಲವು ದಿನಗಳಲ್ಲಿ ಶ್ರೀ ದಾವಲ್ ಮಲಿಕ್ ಜಾತ್ರಾ ಮಹೋತ್ಸವ ಇರುವುದರಿಂದ ಅಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ನೋಡಿ ಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದು ಆಗಿದೆ ಎಂದು ತಿಳಿಸಿದರು ಈ ಸಮಯದಲ್ಲಿ ಯಂಕಂಚಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಬಸವರಾಜ್ ಅಳಗಿ ಮತ್ತು ಶ್ರೀಮತಿ ಲಕ್ಷ್ಮಿ ಆರ್ ಶಂಕನಳ್ಳಿ ಮತ್ತು ಶ್ರೀಮತಿ ಗುರುಬಾಯಿ ಮ ದೊಡಮನಿ ಮತ್ತು ಶ್ರೀಮತಿ ಶೈಲಾ ಶ್ರೀ ತಳಗೇರಿ ಮತ್ತು ಶ್ರೀ ರಮೇಶ್ ಡಿ ತಳಗೇರಿ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಜೆ ಹೊನ್ನಲು ಇವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಅದೇ ರೀತಿ ಅಂಗನವಾಡಿ ಶಿಕ್ಷಕಿಯರಾದ ಶ್ರೀಮತಿ ಕೆಪಿ ಸಜ್ಜನ್ ಮತ್ತು ಆಶಾ ಕಾರ್ಯಕರ್ತೀರಾದ ಶ್ರೀಮತಿ ಎಸ್ ಕೆ ಸುಂಬಡ್ ಮತ್ತು ಶ್ರೀಮತಿ ಎಸ್ ಎಸ್ ಕಾಳೆ ಶ್ರೀಮತಿ ಶ್ರೀಮತಿ ಎಸ್ಆರ್ ಮುಲ್ಲಾ ಶ್ರೀಮತಿ ಎಸ್ ಜಿ. ಕನಸೇ ಮತ್ತು ಗ್ರಾಮೋನ್ ಅಧಿಕಾರಿಯದ ಶ್ರೀ ಬಿ ಎಂ ಪಾಟೀಲ್ .ಇನ್ನಿತರ ಹಾಜರಿದ್ದರು ಮತ್ತು ಅಂಗನವಾಡಿ ಸಹಾಯಕಿಯರು ಹಾಗೂ ಯಂಕಂಚಿ ಗ್ರಾಮದ ಜನರು ಭಾಗಿಯಾಗಿದ್ದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ