ಸಂಭ್ರಮದ ಕಾರ್ತೀಕ ಬಸವೇಶ್ವರ ರಥೋತ್ಸವ.
ಸಿದ್ದಾಪುರ ಡಿಸೆಂಬರ್.31

ಕಾನಾ ಹೊಸಹಳ್ಳಿ ಹೋಬಳಿಯ ಸಮೀಪದ ಸಿದ್ದಾಪುರ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನ ಕಾರ್ತೀಕ ದೀಪೋತ್ಸವ ನಿಮಿತ್ತ ಶುಕ್ರವಾರ ರಾತ್ರಿ ಚಿಕ್ಕ ರಥೋತ್ಸವ ಮತ್ತು ಪಲ್ಲಕ್ಕಿ ಉತ್ಸವ ನಡೆಯಿತು. ಶನಿವಾರ ಬೆಳಗ್ಗೆ 10 ಗಂಟೆಗೆ ಬಸವೇಶ್ವರ ಸ್ವಾಮಿಯ ರಥೋತ್ಸವಕ್ಕೆ ಮುನ್ನ ಸ್ವಾಮಿಯ ಪಟ್ಟದ ಹರಾಜು ಮತ್ತು ಹೂವಿನ ಹಾರಗಳ ಹರಾಜು ನಡೆದವು ನಂತರ ಭಕ್ತಾದಿಗಳು ಸ್ವಾಮಿಯ ರಥವನ್ನು ಮುಂದಕ್ಕೆ ಎಳೆದರು ರಥವು ಮುಂದಕ್ಕೆ ಸಾಗುತ್ತಿದ್ದಂತೆ ಭಕ್ತಾದಿಗಳು ಬಾಳೆಹಣ್ಣು ಉತ್ತುತ್ತಿ ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ವಾದ್ಯ ಮೇಳಗಳಿಂದ ವೀರಗಾಸೆ, ಕರಡಿ ಸಮಾಳ, ನಂದಿ ಕೋಲು ಕುಣಿಸುವ ಮೂಲಕ ಗ್ರಾಮದ ಜನತೆ ಸಡಗರ ಸಂಭ್ರಮದಿಂದ ರಥೋತ್ಸವದಲ್ಲಿ ಪಾಲ್ಗೊಂಡು ಸಡಗರ ಸಂಭ್ರಮದಿಂದ ಸಂತೋಷದಿಂದ ಆಚರಿಸಿದರು.ಇದಕ್ಕೂ ಮೊದಲು ಶುಕ್ರವಾರ ರಾತ್ರಿ ಬಸವೇಶ್ವರ ಸ್ವಾಮಿಯ ದೇವಾಲಯ ಸೇರಿದಂತೆ ಗ್ರಾಮದ ಎಲ್ಲಾ ದೇವಸ್ಥಾನಗಳಲ್ಲಿ ಕಾರ್ತಿಕ ದೀಪವನ್ನು ಬೆಳಗಿಸಿದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ