ನಾಯಕತ್ವ ಬೆಳೆಸುವಲ್ಲಿ ಎನ್.ಎಸ್.ಎಸ್ ಸಹಕಾರಿ – ಮಹಾದೇವಪ್ಪ.
ಚಿಮ್ಲಾಪುರ್ ಜ.29

2024 25 ನೇ. ಸಾಲಿನ ಅವಧಿಯಲ್ಲಿ ಶ್ರೀಮತಿ ಆರ್ ಸುಭದ್ರಮ್ಮ ವಿಠೋಬ ಶೆಟ್ಟಿ ಪದವಿ ಪೂರ್ವ ಕಾಲೇಜು ಮಾನ್ವಿ ವತಿಯಿಂದ ದಿನಾಂಕ 28.01.2025 ರಿಂದ 3. 2.2025 ರವರೆಗೆ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಗೋವಿಂದೊಡ್ಡಿ ಚಿಮ್ಲಾಪುರ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದು ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿರುವ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಮಹಾದೇವಪ್ಪ ಅದೇ ರೀತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಯರಾದ ಶ್ರೀಮತಿ ರಾಚಮ್ಮ ಮೇಡಂ ಅದೇ ರೀತಿ ಅತಿಥಿಗಳಾದ ಶಾಲೆಯ ಸಹ ಶಿಕ್ಷಕಿಯರಾದ ಕುಮಾರಿ ಶೃತಿ ಮೇಡಂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಗಾಂಧಿ ಕಾಲೇಜು ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಶ್ರೀ ರಾಮಲಿಂಗಪ್ಪ ಸರ್ ಈ ಕಾರ್ಯಕ್ರಮ ಉಪಸ್ಥಿತಿಯನ್ನು ಕಾಲೇಜಿನ ಪ್ರಾಚಾರ್ಯರಾದ ಈರಣ್ಣ ಮರಲಟ್ಟಿ ಹಾಗೂ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀ ಚನ್ನಬಸವ ಬ್ಯಾಗ್ ವಾಟ ನೇತೃತ್ವದಲ್ಲಿ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ಕಾರ್ಯಕ್ರಮ ನೆರವೇರಿತು.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋವಿಂದೊಡ್ಡಿ ಚಿಮ್ಲಾಪುರ್ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಹಾದೇವಪ್ಪ ನವರು ನಾಯಕತ್ವಕ್ಕೆ ಎನ್ಎಸ್ಎಸ್ ಕಾರ್ಯಕ್ರಮವು ಒಳ್ಳೆಯ ಪ್ರಭಾವ ಬೀರುವುದಾಗಿದೆ ಅಲ್ಲದೆ ಎನ್ಎಸ್ಎಸ್ ಯಿಂದ ಹಲವಾರು ರೀತಿಯ ಕೌಶಲ್ಯಗಳನ್ನು ಕಲಿಯಲು ಸೂಕ್ತವಾದ ವೇದಿಕೆಯಾಗಿದೆ ಎಂದು ತಿಳಿಸಿದರು. ಧ್ವಜಾರೋಹಣ ನೆರವೇರಿಸಿದ ರಾಚಮ್ಮ ಮುಖ್ಯೋಪಾಧ್ಯಾಯರು ಎನ್.ಎಸ್.ಎಸ್ ವಿದ್ಯಾರ್ಥಿ ಎಂತಹ ಕಠಿಣ ಸಂದರ್ಭದಲ್ಲಿ ಗೆಲ್ಲುವ ಶಕ್ತಿಯನ್ನು ಚಾಕ ಚಕ್ಯತೆಯನ್ನು ಹೊಂದುತ್ತಾನೆ ಎನ್ನುವುದನ್ನು ತಿಳಿಸಿದರು. ಕಾರ್ಯಕ್ರಮದ ಉದ್ಘಾಟಕರಾದ ರಾಮಲಿಂಗಪ್ಪ ರವರು ವಿದ್ಯಾರ್ಥಿಗಳು ಶಿಬಿರಾರ್ಥಿಗಳು ಊರಿನ ಮಕ್ಕಳು ಯುವಕರು ಏನು ಮಾಡಬೇಕು ಏನು ಮಾಡಬಾರದು ಎನ್ನುವ ನಿಟ್ಟಿನಲ್ಲಿ ವಿಷಯವನ್ನು ಮನದಟ್ಟು ಮಾಡಿಸಿದರು ಹಾಗೂ ಶಾಲೆಯ ಶಿಕ್ಷಕಿಯಾದ ಕುಮಾರಿ ಶ್ರುತಿ ಅವರು ಮಾತನಾಡಿ ಮಕ್ಕಳು ಶ್ರಮ ವಹಿಸಿ ಕೆಲಸ ಮಾಡಬೇಕು ದೈಹಿಕ ಮಾನಸಿಕ ಶಕ್ತಿ ಪಡೆಯಬೇಕು ಅಲ್ಲದೆ ಊರು ಮತ್ತು ಕೇರಿ ಸುಂದರವಾಗಿಟ್ಟು ಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮವನ್ನು ಯುವರಾಜ್ ನಿರೂಪಿಸಿದರೆ ಪ್ರಾರ್ಥನೆಯನ್ನು ವಿದ್ಯಾಶ್ರೀ ಸ್ವಾಗತವನ್ನು ನರಸಮ್ಮ ವಂದನೆಯನ್ನು ಶಿವಾನಂದ ನೆರವೇರಿಸಿದರು. ಶಿಬಿರದಲ್ಲಿ ಮಂಜುನಾಥ್ ದೇವೇಂದ್ರ ಕುಮಾರ್ ಬಸಯ್ಯಸ್ವಾಮಿ ಬಸವರಾಜ್ ಜಾಲವಾಡಿಗೆ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿಮಾನ್ವಿ