ವಿಶ್ವ ಕಂಡ ಶ್ರೇಷ್ಠ ವ್ಯಕ್ತಿ ಡಾ, ಬಿ.ಆರ್ ಅಂಬೇಡ್ಕರ್ – ಮುಖ್ಯಾಧಿಕಾರಿ ಖಾಜಾ.ಮೈನುದ್ದೀನ್ ಅಭಿಮತ.
ಮರಿಯಮ್ಮನಹಳ್ಳಿ ಡಿ.07





ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಈ ದೇಶದಲ್ಲಿ ಹುಟ್ಟಿ ಬೆಳೆದ ಡಾ, ಬಿ.ಆರ್ ಅಂಬೇಡ್ಕರ್ ಅವರು ವಿಶ್ವ ಕಂಡ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ ಎಂದು ಅಭಿಮತ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಅವರ ಜೀವನದ ಚರಿತ್ರೆಗಳನ್ನು ಓದಿಕೊಂಡು ಅವರ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕೆಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಖಾಜಾ ಮೈನುದ್ದೀನ್ ನೆರೆದಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಡಾ, ಬಿ.ಆರ್ ಅಂಬೇಡ್ಕರ್ ಅವರ 68. ನೇ ವರ್ಷದ ಪುಣ್ಯ ಸ್ಮರಣೆಯ, ಪರಿ ನಿರ್ವಾಣ ದಿನದ ಅಂಗವಾಗಿ ಪಟ್ಟಣದ ಒಂದನೇ ವಾರ್ಡಿನ ಅಂಬೇಡ್ಕರ್ ಕಾಲೋನಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂಬೇಡ್ಕರ್ ಅವರು ಅವರ ಜೀವನದುದ್ದಕ್ಕೂ ಬಹುತೇಕ ಕಷ್ಟಗಳನ್ನೇ ಅನುಭವಿಸಿ ಕೊಂಡು ಈ ದೇಶಕ್ಕೆ ಮಹತ್ತರವಾದ ಸಂವಿಧಾನವನ್ನು ಕೊಟ್ಟಿದ್ದಾರೆ. ಅವರು ಅವಿಭಕ್ತ ಕುಟುಂಬದಲ್ಲಿ ಜನಿಸಿದವರು. ಅವರ ತಂದೆ ತಾಯಿಗೆ ಹದಿನಾಲ್ಕನೆಯ ಕೊನೆಯ ಮಗನಾಗಿ ಜನಿಸಿದವರು. ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ ಇಡೀ ದೇಶ ಅಲ್ಲದೆ ಇಡೀ ವಿಶ್ವಕ್ಕೆ ಮಾದರಿ ಯಾಗಿರುವಂತಹ ಸರ್ವ ಶ್ರೇಷ್ಟವಾಗಿರುವ ಸಂವಿಧಾನವನ್ನು ರಚನೆ ಮಾಡಿರುವಂತಹ ಕೀರ್ತಿ ಅವರಿಗೆ ಸಲ್ಲುತ್ತದೆ. ಬಾಲ್ಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಅವರಿಗೆ ಕುಡಿಯಲು ನೀರು ಕೊಡಲು ಸಹ ಇಂದು ಮುಂದು ನೋಡ್ತಾ ಇದ್ದಂತಹ ಪರಿಸ್ಥಿತಿಯನ್ನು ಹೆದರಿಸಿ ಮೆಟ್ಟಿ ನಿಂತು ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಅವರ ಸಾವಿನ ಪೂರ್ವದಲ್ಲಿ ಹಿಂದೂ ಧರ್ಮದಲ್ಲಿನ ಅಸಮಾನತೆಯನ್ನು ಕಂಡು ಬೌದ್ಧ ಧರ್ಮ ಸ್ವೀಕಾರ ಮಾಡುತ್ತಾರೆ. ಬೌದ್ಧ ಧರ್ಮದಲ್ಲಿ ಮರಣದ ನಂತರ ಸ್ಮರಣಾರ್ಥವಾಗಿ ಪರಿನಿಬ್ಬಾನ ಮತ್ತು ಸಂಸ್ಕೃತದಲ್ಲಿ ಪರಿ ನಿರ್ವಾಣ ದಿನ ಎಂದು ಆಚರಿಸುತ್ತಾರೆ. 06.12.1956 ರಂದು ಅಂಬೇಡ್ಕರ್ ಅವರು ಮಹಾರಾಷ್ಟ್ರದಲ್ಲಿ ದೇಹ ತ್ಯಾಗ ಮಾಡಿರು. ಹಾಗಾಗಿ ಸ್ಮರಣಾರ್ಥವಾಗಿ ಪರಿ ನಿರ್ವಾಣ ದಿನವನ್ನಾಗಿ ಆಚರಣೆ ಗೊಂಡಿತು. ಅಂಬೇಡ್ಕರ್ ಅವರು ತೋರಿಸಿದ ಮಾರ್ಗವನ್ನು ಅಳವಡಿಸಿ ಕೊಂಡು ನಾವು ನಡೆದರೆ ಈ ದಿನದ ಸ್ಮರಣಾರ್ಥಕ್ಕೆ ಒಂದು ಅರ್ಥ ಸಿಗುತ್ತದೆ ಎಂದು ಹೇಳಿದರು.ಪಟ್ಟಣ ಪಂಚಾಯಿತಿ ಅಧ್ಯಕ್ಷ ಆದಿಮನಿ ಹುಸೇನ್ ಭಾಷ ಮಾತನಾಡಿ ಇಂದು ಅಂಬೇಡ್ಕರ್ ಅವರನ್ನು ಕಳೆದು ಕೊಂಡ ದಿನ. ಅವರನ್ನು ಕಳೆದು ಕೊಂಡು ಇಲ್ಲಿಗೆ 68 ವರ್ಷಗಳಾಗಿವೆ. ಇಲ್ಲಿಯವರೆಗೂ ಅಂತಹ ವ್ಯಕ್ತಿ ನಮಗೆ ಇನ್ನೂ ಸಿಕ್ಕಿಲ್ಲ. ಇಂದು ಅವರು ಕೊಟ್ಟಿರುವಂತ ಅವಕಾಶಗಳನ್ನು, ತತ್ವ ಸಿದ್ಧಾಂತಗಳನ್ನು ನಾವು ತಿಳಿದು ಕೊಂಡು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಇಂದು ಪ್ರತಿಯೊಬ್ಬರೂ ನಾವು ಈ ಸ್ಥಾನದಲ್ಲಿ ಇರಬೇಕಾದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆಯಾಗಿದೆ. ದೇಶದಲ್ಲಿ ಎಸ್ಸಿ/ಎಸ್ಟಿ, ಓಬಿಸಿ, ಮೈನಾರಿಟಿ, ಮತ್ತು ಇತರೆ ಶೋಷಿತ ವರ್ಗದ ಸಮುದಾಯಗಳಿಗೆ ಅನುಕೂಲಕ್ಕೆ ತಕ್ಕಂತೆ ಮೀಸಲಾತಿಯನ್ನು ನೀಡಿರುವಂತಹ ಮಹಾನ್ ವ್ಯಕ್ತಿ ಅವರು. ಅವರ ಜಯಂತಿಗಳನ್ನಾಗಲಿ, ಸ್ಮರಣಾರ್ಥ ದಿನಗಳನ್ನಾಗಲಿ ಮಾಡುವುದು ಕೇವಲ ತೋರಿಕೆಗೆ ಅಲ್ಲ ಅವರ ವಿಚಾರಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು. ಬಾಬಾ ಸಾಹೇಬರ ತತ್ವ ಆದರ್ಶಗಳನ್ನು ಜೀವನದಲ್ಲಿ ಕೇವಲ ಒಂದೇ ಒಂದು ಪರ್ಸೆಂಟ್ ಅಳವಡಿಸಿ ಕೊಂಡರೆ ಸಾಕು ಇಡೀ ಜೀವನವೇ ಬದಲಾಗುತ್ತದೆ. ಮುಂದಿನ ಪೀಳಿಗೆಗೂ ಅವರ ತತ್ವ ಆದರ್ಶಗಳನ್ನು ತಿಳಿಸಿ ಜೀವನದಲ್ಲಿ ಅಳವಡಿಸಿ ಕೊಳ್ಳಲು ತಿಳಿಸಬೇಕು ಎಂದರು. ಬಿಸರಳ್ಳಿ ಹುಲುಗಪ್ಪ, ಹೆಚ್. ನಾಗಪ್ಪ, ಎಂ.ವಿರೂಪಾಕ್ಷಿ ಈ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ವಾರ್ಡಿನ ಪಟ್ಟಣ ಪಂಚಾಯಿತಿ ಸದಸ್ಯರಾದ ಎಲ್.ವಸಂತಕುಮಾರ್, ಎಲ್. ಪರಶುರಾಮ, ಪಟ್ಟಣ ಪಂಚಾಯತಿ ಇಂಜಿನಿಯರ್ ಹನುಮಂತಪ್ಪ ಮುಖಂಡರಾದ ರೋಗಾಣಿ ಮಂಜುನಾಥ, ಮರಡಿ ಬಸವರಾಜ, ರುದ್ರ ನಾಯ್ಕ್, ಪಟ್ಟಣ ಪೊಲೀಸ್ ಠಾಣೆಯ ಎ.ಎಸ್.ಐ ವಿರುಪಾಕ್ಷಪ್ಪ, ವಾರ್ಡಿನ ಮುಖಂಡರಾದ ಎಲ್. ನಾಗರಾಜ, ದೊಡ್ಡ ಬರಮಪ್ಪ, ಎಲ್. ಮಂಜುನಾಥ, ಲಕ್ಕಿಮರದ ಮಂಜುನಾಥ, ಹಲಗಿ ನಾಗರಾಜ, ಮಾಳಗಿ ಸ್ವಾಮಿ,ಮರಿ ಸೋಮಪ್ಪ, ಕೃಷ್ಣಪ್ಪ, ಹನುಮಂತಪ್ಪ, ದೂಪದಹಳ್ಳಿ ನಾಗಪ್ಪ, ಎಂ.ಮಂಜುನಾಥ, ಎಂ ದುರುಗಪ್ಪ, ಸೋಮನಾಥ, ಉಮೇಶ, ಬಸವರಾಜ, ಮಾಂತೇಶ, ರವಿಕಿರಣ, ರಾಘವೇಂದ್ರ ಮತ್ತು ಶಾಲಾ ಮಕ್ಕಳು ಇತರರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ