ಶಿಕ್ಷಕರ ದಿನಾಚರಣೆ ವೇದಿಕೆಯಲ್ಲಿ ರೈತರ ಬರ ಪರಿಹಾರಕ್ಕೆ ಮೊದಲನೇ ವೇತನದ ದೇಣಿಗೆ ನೀಡಿದ ಶಾಸಕ ಡಾ. ಎನ್,ಟಿ, ಶ್ರೀನಿವಾಸ್.
ಕೂಡ್ಲಿಗಿ ಸಪ್ಟೆಂಬರ್.6

ಕ್ಷೇತ್ರದ ಶಾಸಕರಾದ ಡಾಕ್ಟರ್ ಎನ್.ಟಿ.ಶ್ರೀನಿವಾಸ್ ರವರು ತಾಲೂಕಿನ ಶಿಕ್ಷಕರನ್ನು ಶಿಕ್ಷಣ ದಿನಾಚರಣೆಯ ಅಂಗವಾಗಿ ಮಾತನಾಡುತ್ತಾ ಡಾಕ್ಟರ್ ಶ್ರೀನಿವಾಸ್ ರವರು ತಮ್ಮ ಬಾಲ್ಯ ವಿದ್ಯಾರ್ಥಿಯ ಜೀವನದ ಕೂಡ್ಲಿಗಿ ಪಟ್ಟಣದ ಮೇನ್ ಬಾಯ್ಸ್ ಸ್ಕೂಲ್ ಶಾಲೆಯ ಆವರಣದ ಮೈದಾನದಲ್ಲಿ ನಡೆಸುತ್ತಿದ್ದಂತಹ ಗಣೇಶ ಚತುರ್ಥಿ ಹಾಗೂ ಇತರ ಕಾರ್ಯಕ್ರಮಗಳನ್ನು ದಿನಗಳನ್ನು ನೆನಪು ಮಾಡಿಕೊಂಡು ಶಾಸಕರು ಓದುತ್ತಿರುವಂತಹ ಸಂದರ್ಭದಲ್ಲಿ ತಮ್ಮ ಗುರುಗಳನ್ನು ನೆನೆದುಕೊಂಡು ಹಾಗೂ ವಿಶಾಲ ಹೃದಯವಂತಿಕೆಯಿಂದ ಶಿಕ್ಷಣ ಪ್ರೇಮವನ್ನು ಹೊಂದಿರುವ ಶಿಕ್ಷಕರನ್ನು ತುಂಬು ವೇದಿಕೆಯಲ್ಲಿ ಮೊಣಕಾಲೂರಿ ತಲೆಬಾಗಿ ನಮಸ್ಕರಿಸುತ್ತ ಎಲ್ಲಾ ಗುರು ವೃಂದದವರಿಗೂ ಶಿಕ್ಷಕರ ದಿನಾಚರಣೆ ಶುಭಾಶಯಗಳು ತಿಳಿಸಿದರು.
ಶಿಕ್ಷಕರನ್ನು ಗೌರವಿಸುವುದರೊಂದಿಗೆ ಶಾಸಕರು ಕೂಡ್ಲಿಗಿಯ ತಾಲೂಕು ಬರಪೀಡಿತ ಪ್ರದೇಶ ಆಗಿರುವುದರಿಂದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್.ಟಿ ರವರು ತಮ್ಮ ಶಾಸಕರ ಸರ್ಕಾರಿ ತಿಂಗಳ ವೇತನದ ಮೊದಲನೇ ವೇತನವನ್ನು ಐವತ್ತು ಸಾವಿರ ರೂಪಾಯಿ ಹಣದ ಚೆಕ್ಕನ್ನು ಕೂಡ್ಲಿಗಿ ತಾಲೂಕು ಬರಪೀಡಿತ ಪ್ರದೇಶವಾಗಿರುವುದರಿಂದ ರೈತರ ಬರ ಪರಿಹಾರಕ್ಕೆ ನನ್ನ ಮೊದಲನೆಯ ಶಾಸಕರ ವೇತನದ ಹಣವನ್ನು ವಿಶೇಷವಾಗಿ ನೀಡುತ್ತೇನೆಂದು ವೇದಿಕೆ ಮೂಲಕ ಮಾನ್ಯ ತಹಸಿಲ್ದಾರ್ರಾದ ಟಿ. ಜಗದೀಶ್ ರವರಿಗೆ ಚೆಕ್ಕನ್ನು ನೀಡಿದರು.

ಹಾಗೆ ತಾಲೂಕಿನ ಆದ್ಯಂತ ಶಿಕ್ಷಣದಲ್ಲಿ ತಾರತಮ್ಯ ಹಾಗೂ ಜಾತಿ ಬೇದ ಮಾಡದೇ ಉತ್ತಮವಾದ ಗುಣಮಟ್ಟದ ಶಿಕ್ಷಣವನ್ನು ಎಲ್ಲಾ ಶಿಕ್ಷಕರು ಮಕ್ಕಳಿಗೆ ನೀಡುವುದರೊಂದಿಗೆ ನಮ್ಮ ತಾಲೂಕಿನಲ್ಲಿ ಸಹ ಮಕ್ಕಳು ವಿಜ್ಞಾನ ವಿಭಾಗದಲ್ಲೂ ಮುಂದುವರಿದು ಇಸ್ರೋ ಸಂಸ್ಥೆ ಅಂತ ವಿಜ್ಞಾನ ತಂಡಗಳಲ್ಲಿ ನಮ್ಮ ತಾಲೂಕಿನ ವಿದ್ಯಾರ್ಥಿಗಳು ಸಹ ಮುಂದಿನ ದಿನಮಾನಗಳಲ್ಲಿ ಉತ್ತಮವಾದ ಶಿಕ್ಷಣವನ್ನು ಪಡೆದು ವಿಜ್ಞಾನಿಗಳಾಗಲಿ ಎಂದು ತಿಳಿಸಿದರು. ಹಾಗೆ ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯ ವಹಿಸಿಕೊಂಡಿರುವಂತಹ ತಾಲೂಕ್ ಪಂಚಾಯತಿ ಕಾರ್ಯಾ ನಿರ್ವಾಹಕ ಅಧಿಕಾರಿಗಳಾದ ವೈ . ರವಿಕುಮಾರ್ ರವರು ಶಿಕ್ಷಕರ ಕುರಿತು ಮಾತನಾಡಿದರು,

ಹಾಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶಿವರಾಜ್ ಶಿಕ್ಷಕರು ಕುರಿತು ಕೆಲವು ಬೇಡಿಕೆಗಳನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಗಮನಹರಿಸಿ ಸರ್ಕಾರ ದಿಂದ ಕೆಲವು ಸೌಲಭ್ಯಗಳನ್ನು ಮಾಡುವಂತೆ ತಾಲೂಕಿನ ಶಿಕ್ಷಕರ ಪರವಾಗಿ ಬೇಡಿಕೆಗಳ ಮನವಿ ಪ್ರತವನ್ನು ಶಾಸಕರಿಗೆ ನೀಡಿದರು. ಮತ್ತು ಹಿರೇಮಠದ ಪ್ರಶಾಂತ್ ಸಾಗರ್ ಸ್ವಾಮೀಜಿಗಳು ಶಿಕ್ಷಣ ಮತ್ತು ಶಿಕ್ಷಕರ ಮೌಲ್ಯ ದಾರಿತ ಶಿಕ್ಷಣವನ್ನು ಕುರಿತು ಮಾತನಾಡುತ್ತಾ ವೇದಿಕೆಯಯಲ್ಲಿ ಕೂಡ್ಲಿಗಿಯ ಶಾಸಕರಂತಹವರು ರಾಜ್ಯದಲ್ಲಿ ನಾನು ಎಷ್ಟೋ ಕಾರ್ಯಕ್ರಮಗಲ್ಲಿ ಭಾಗವಹಿಸಿದ್ದೆನೇ ಆದರೆ ಇಂಥ ಶಾಸಕರನ್ನು ನೋಡಿಲ್ಲ ಎಂದು ಕರ್ನಾಟಕ ರಾಜ್ಯದ ಯಾವೊಂದು ವಿಧಾನಸಭಾ ಕ್ಷೇತ್ರದ ಚರಿತ್ರೆಯಲ್ಲಿ ಶಿಕ್ಷಕರಿಗೆ ತುಂಬ ವೇದಿಕೆಯಲ್ಲಿ ತಲೆಬಾಗಿದ ನಮಸ್ಕಾರ ಮಾಡಿದ ಶಾಸಕರನ್ನು ನಾನು ಕಂಡಿಲ್ಲಾ , ನಿಮ್ಮ ನಡೆ ಪ್ರತಿಯೊಬ್ಬರಿಗೆ ಆದರ್ಶವಾಗಿರಲಿ ಎಂದು ತಿಳಿಸಿದರು. ವೇದಿಕೆ ಮೇಲೆ ಅಸೀನರಾದಂತಹ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪದ್ಮನಾಭ ಕರ್ಣ,ದೈಹಿಕ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ,ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿ ಎಸ್. ಎಸ್.ಜಗದೀಶ್, ಬಿಸಿಯೂಟ ಇಲಾಖೆ ಸಹಾಯಕ ನಿರ್ದೇಶಕ ಆಂಜನೇಯ, ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಎಸ್.ವಿ. ಸಿದ್ದರಾಧ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ಗೌಡ್ರು ಕೊಟ್ರೇಶ್, ಸಾವಿತ್ರಿ ಬಾ ಪುಲೆ ಶಿಕ್ಷಕರ ಸಂಘದ ಅಧ್ಯಕ್ಷರಾದ ವಸಂತ, ಪಟ್ಟಣ ಪಂಚಾಯತಿ ಸದಸ್ಯರಾದ ಕಾವಲಿ ಶಿವಪ್ಪ ನಾಯಕ, ಮುಖಂಡರಾದ ನಾಗರಿಕಟ್ಟೆ ಸಾವಾಜ್ಜಿ ರಾಜೇಂದ್ರ, ಮಾರೇಶ್ ಮಡಿವಾಳ, ಡಾಣಿ ರಾಘವೇಂದ್ರ, ಜಿ ಓಬಣ್ಣ ಜುಬೋಬನಹಳ್ಳಿ ದಲಿತ ಮುಖಂಡ ಡಿ.ಎಚ್. ದುರ್ಗೇಶ್ ವಕೀಲರು, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಜಿನಾಬೀ, ಶಾಂತಕುಮಾರಿ, ಇಂದಿರಾ, ಗೀತಾ ತಾಲೂಕು ಮಟ್ಟದ ಉತ್ತಮ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರನ್ನು ಶಾಸಕರು ಸನ್ಮಾನಿಸಿದರು,
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ