ಒಕ್ಕೂಟ ಹಬ್ಬದ 75.ನೇ ಗಣರಾಜ್ಯೋತ್ಸವ ಆಚರಣೆ.
ಬಳ್ಳಾರಿ ಜನೇವರಿ.26

ಸ.ಮಾ.ಹಿ.ಪ್ರಾ.ಶಾಲೆ ಡಿಎಆರ್ ಪೊಲೀಸ್ ಲೈನ್ ಬಳ್ಳಾರಿಯಲ್ಲಿ ಒಕ್ಕೂಟ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾದ ಶ್ರೀ ಮೆಹಬೂಬ್ ಬಾಷ ಸಮಾಜ ಸೇವಕರು ಬಳ್ಳಾರಿ, ಶ್ರೀ ಮಾರುತಿ ಕಾರ್ಯದರ್ಶಿ ನಿನಾ ಸಂಸ್ಥೆಯವರು ನೇರವೇರಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಶ್ರೀಮತಿ ಸುನೀತಾ ಎಂ ಮುಖ್ಯ ಗುರುಗಳು ಸ.ಮಾ.ಹಿ.ಪ್ರಾ.ಶಾಲೆ., ಎ.ಆರ್.ಪಿ.ಲೈನ್ ಬಳ್ಳಾರಿ ರವರು ಮಾತಾಡಿ ಗಣರಾಜ್ಯೋತ್ಸವ ದಿನವನ್ನು ಒಕ್ಕೂಟ ಹಬ್ಬವಾಗಿ ಶಾಲೆಯಲ್ಲಿ ಆಯೋಜನೆ ಮಾಡಿರುವುದು ಖುಷಿಯ ವಿಚಾರ, ಈ ಒಕ್ಕೂಟ ವ್ಯವಸ್ಥೆಯಲ್ಲಿ ನಾವೆಲ್ಲರೂ ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ಸ್ಮರಿಸುತ್ತಾ ತಪ್ಪದೇ ಎಲ್ಲರೂ ಸಂವಿಧಾನವನ್ನು ಗೌರವಿಸಬೇಕು ನೀತಿ ನಿಯಮಗಳನ್ನು ತಪ್ಪದೇ ಪಾಲನೆ ಮಾಡಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾದ ಶ್ರೀ ಮೆಹಬೂಬ್ ಭಾಷ ರವರು ಮಾತಾಡಿ 75.ನೇ ಒಕ್ಕೂಟ ದಿನವಾದ ಇಂದು ನಾವೆಲ್ಲರೂ ದೇಶಕ್ಕಾಗಿ ದುಡಿದ ಮಡಿದ ಮಹನೀಯರ ಜೀವನವನ್ನು ಆದರ್ಶವಾಗಿ ಇಟ್ಟುಕೊಂಡು ಸಾಗಬೇಕಿದೆ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ಎಲ್ಲರೂ ತೊಡಿಗಿಸಿ ಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀಮತಿ ಲೀನಾ ಶ್ರೀ ಎರ್ರಿಸ್ವಾಮಿ ಶ್ರೀ ವಿಜಯ್ ಹಾಗೂ ಸಂಸ್ಥೆಯ ಅಧ್ಯಕ್ಷರಾದ ವಿನಯ್ ಕುಮರ್ ಎಂ.ಎಸ್ ಕಾರ್ಯ ನಿರ್ವಾಹಕರಾದ ಸಂದೀಪ್, ಯೇಸುಪ್ರಭು, ಬಾಲಸುಬ್ರಹ್ಮಣ್ಯ, ಅನಿಲ್, ಪಂಪಾಪತಿ, ವೀರೇಶ್, ಮಾರುತಿ, ಗೋಪಾಲ್, ನಿಜಲಿಂಗ, ಸುರೇಶ್ ಪಾಲ್ಗೊಂಡಿದ್ದರು ಪ್ರಾರ್ಥನೆಯನ್ನು ಕು.ಮನಸ್ವಿನಿ. ವಂದನಾರ್ಪಣೆಯನ್ನು ಶಿಕ್ಷಕರಾದ ಶ್ರೀ ವಿಜಯ್ ನಡೆಸಿ ಕೊಟ್ಟರು ಹಾಗೂ ಶಾಲೆಯ ಮಕ್ಕಳಿಂದ ಹಾಡು ನೃತ್ಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ಜಿಲ್ಲಾ ವರದಿಗಾರರು:ಎಂ.ಎಂ.ಶರ್ಮಾ.ಬೆಳಗಾವಿ