ಯೋಜನೆಯ ಸದುಪಯೋಗ ಪಡೆದು ಕೊಳ್ಳಿ.

ಇಂಡಿ ಜನೇವರಿ.19

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗಾಗಿ, ಬಡವರಿಗಾಗಿ, ಮಹಿಳೆಯರಿಗಾಗಿ, ಬುಡಕಟ್ಟು ಜನರಿಗಾಗಿ, ನಿರ್ಲಕ್ಷಿತರಿಗೆ, ವಿಕಲಚೇತನರಿಗಾಗಿ ,ದುಡಿಯುವ ಜನತೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳ ಸದುಪಯೋಗ ಮಾಡಿ ಕೊಳ್ಳಬೇಕೆಂದು ಇಂಡಿ ಪಟ್ಟಣದ ಎಸ್ ಬಿ ಐ ವ್ಯವಸ್ಥಾಪಕ ಆರ್.ಜಿ.ರಾಮಸ್ವಾಮಿ ಕರೆ ನೀಡಿದರು. ಪಟ್ಟಣದ ಪುರಸಭೆಯ ಎದುರು ಒಂದು ದೊಡ್ಡ ಪರದೆಯ ಮೇಲೆ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ಪ್ರದರ್ಶನ ಮಾಡಿ ಮಾತನಾಡಿದರು.ಇತ್ತೀಚೆಗೆ ಸರ್ಕಾರಗಳು ಮನೆ ಮನೆಗಳಿಗೆ ಬೆಳೆ ಸಾಲ ಮಂಜೂರು ಮಾಡುತ್ತಿದೆ. ಇದು ರೈತರಿಗೆ ಅತೀ ಉಪಯೋಗವಾಗಿದೆ. ಇದನ್ನು ರೈತರು ಪಡೆದು ಕೊಂಡು ಹೆಚ್ಚಿನ ಉತ್ಪಾದನೆ ಮಾಡಿ ಕೊಳ್ಳಬೇಕು. ಇದರಂತೆ ರೈತರಿಗೆ ಇನ್ನೂ ಅನೇಕ ರೀತಿಯ ಸಾಲಗಳನ್ನು ನೀಡಲು ಮುಂದಾಗಿದೆ. ರೈತರು ಬ್ಯಾಂಕಿಗೆ ಭೇಟಿ ನೀಡಿ ಅವುಗಳ ಮಾಹಿತಿ ಪಡೆದು ಕೊಂಡು ಸದುಪಯೋಗ ಮಾಡಿಕೊಳ್ಳಬೇಕು ಎಂದರು.ನಾವು ಈಗಾಗಲೇ ತಾಲೂಕಿನ 7 ಕಡೆ ಸರಕಾರದ ಯೋಜನೆಗಳ ಬಗ್ಗೆ ಪ್ರಚಾರ ಕಾರ್ಯ ಮಾಡಿದ್ದೇವೆ. ಪಟ್ಟಣದಲ್ಲಿ ಇದು ಮೊದಲನೇ ಸಲ ಪ್ರಚಾರ ಮಾಡುತ್ತಿದ್ದೇವೆ. ಜನ ಸಾಮಾನ್ಯರು ಇದರ ಸದುಪಯೋಗ ಮಾಡಿಕೊಂಡು ಆರ್ಥಿಕ ಬೆಳವಣಿಗೆ ಮಾಡಿ ಕೊಳ್ಳಬೇಕೆಂದು ಮನವಿ ಮಾಡಿ ಕೊಂಡರು.ಈ ಸಂದರ್ಭದಲ್ಲಿ ಎಸ್.ಬಿ. ಐ ಸಿಬ್ಬಂದಿಗಳಾದ ರವಿ ತೇಜಾ, ಪರಶುರಾಮ ತೆನ್ನಿಹಳ್ಳಿ ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಮಾಹಿತಿ ಪುಸ್ತಕಗಳನ್ನು ವಿತರಣೆ ಮಾಡಿದರು.

ಬಾಕ್ಸ್ -ಇಂಡಿ ಪಟ್ಟಣದ ಪುರಸಭೆಯ ಎದುರು ಎಸ್‌.ಬಿ.ಐ ವ್ಯವಸ್ಥಾಪಕ ಆರ್.ಜಿ. ರಾಮಸ್ವಾಮಿ ಮತ್ತು ಸಿಬ್ಬಂದಿ ವರ್ಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ದೊಡ್ಡ ಪರದೆಯ ಮೇಲೆ ಪ್ರಚಾರ ಮಾಡಿ ಸದುಪಯೋಗ ಮಾಡಿ ಕೊಳ್ಳಲು ಮನವಿ ಮಾಡಿದರು.

ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button