76 ನೇ. ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಡಾ, ಬಾಬ ಸಾಹೇಬ ಅಂಬೇಡ್ಕರ್ ಅವರ ಭಾವ ಚಿತ್ರವನ್ನು ಇಡಲಾರದೆ ಅವಮಾನ ಮಾಡಿದ – ಮಲ್ಲಿಕಾರ್ಜುನ ಹುರಿಕಡ್ಲೆ ಇವರ ವಿರುದ್ಧ ಸ್ವಯಂ ಪ್ರೇರಿತ ಪೊಲೀಸ್ ಪ್ರಕರಣ ದಾಖಲಿಸಿ ಶಿಕ್ಷೆಗೆ ಒಳಪಡಿಸಿರಿ.
ಬಾಗಲಕೋಟೆ ಜ.29

ಹುನುಗುಂದ ತಾಲೂಕಿನ ಇದ್ದಲಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದ ಕಚೇರಿಯ ಮುಂದೆ ಅಧಿಕಾರಿಯ ಮಲ್ಲಿಕಾರ್ಜುನ ಹುರಿಕಡ್ಲೆ ದಿನಾಂಕ 26 /1/ 2025 ರಂದು 76 ನೇ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವ ಚಿತ್ರವನ್ನು ಇಡಲಾರದೆ ಮಹಾತ್ಮ ಗಾಂಧೀಜಿ ಭಾವ ಚಿತ್ರವನ್ನು ಇಟ್ಟು ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಮಾಡಲಾಗಿದ್ದು ದುರಂತವಾಗಿದ್ದು. ಆದರೆ ಭಾರತ ದೇಶಕ್ಕೆ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ಬರೆದಿದ್ದರಿಂದ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ದೇಶಕ್ಕೆ ಕೊಡುಗೆ ಅಪಾರವಾಗಿದ್ದರಿಂದ ಈ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಸರಕಾರದ ಕಛೇರಿಯಲ್ಲಿ ಮಾಡುವಂತವರು ಕಾರ್ಯಕ್ರಮದಲ್ಲಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವ ಚಿತ್ರವನ್ನು ಇಟ್ಟು ಪೂಜಿಸಿ ಗೌರವಿಸಿ 76 ನೇ. ಗಣರಾಜ್ಯೋತ್ಸವ ಕಾರ್ಯಕ್ರಮಗಳನ್ನು ಮಾಡಬೇಕೆಂದು ಸರ್ಕಾರದ ಆದೇಶದ ಸುತ್ತೋಲೆಯನ್ನು ಹೊರಡಿಸಿದರು.

ಸಹ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವ ಚಿತ್ರವನ್ನು ಇದ್ದಲಿಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅವಿವೇಕಿ ಪ್ರಜ್ಞೆ ಇಲ್ಲದಂತ ಹಾಗೂ ಉದ್ದೇಶ ಮತ್ತು ದುರುದ್ದೇಶದಿಂದ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವ ಚಿತ್ರವನ್ನು ಇಡಬಾರದೆಂದು ಮನುವಾದಿ ಅಧಿಕಾರಿಯ ಮಲ್ಲಿಕಾರ್ಜುನ ಹುರಿಕಡ್ಲಿ ಇಡದೇ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದರಿಂದ ಕೂಡಲೇ ಆ ಕಾರ್ಯಕ್ರಮ ಮಾಡಿದಂತ ಅಧಿಕಾರಿಯಾದ ಮಲ್ಲಿಕಾರ್ಜುನ ಇವರನ್ನು ಕೂಡಲೆ ಅಮಾನತ್ ಗೊಳಿಸಿ ಹಾಗೂ ಇವರ ಮೇಲೆ ಸ್ವಯಂ ಪ್ರೇರಿತವಾಗಿ ಜಿಲ್ಲಾಡಳಿತ ಕುರುಬ ಸಂಘದ ಮೇಲೆ ಪ್ರಕರಣ ದಾಖಲಿಸ ಬೇಕು ಎಂದು ಆದೇಶಿಸಿ ಅವಮಾನ ಮಾಡಿದ್ದಂತ ಆವರಿಗೆ ಶಿಕ್ಷೆಗೆ ಒಳಪಡಿಸ ಬೇಕೆಂದು ಈ ಮೂಲಕ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜ್ಯ ಸಮಿತಿಯು ಪತ್ರಿಕಾ ಮಾಧ್ಯಮಕ್ಕೆ ಕೋರುತ್ತೀರುವ ಕೆ.ಶಂಕರ್ ನಂದಿಹಾಳ ರಾಜ್ಯ ಕಾರ್ಯದರ್ಶಿ, ಮಂಜುನಾಥ್ ಹಳ್ಳೂರು ಜಿಲ್ಲಾಧ್ಯಕ್ಷರು ಬಾಗಲಕೋಟೆ.