“ಅಹಂ ಸ್ವಾರ್ಥಂ ಮಾನವೀಯತೆ ನಾಶಂ”…..

ಭೂಮಂಡಲದ ಸಸ್ಯ ಸಂಕುಲ
ಪ್ರಾಣಿ ಪಕ್ಷಿ ಕೆಲವರು ಭಕ್ಷಣೆ ಮಾಡಿ
ಉಳಿದ ಕ್ರಿಮಿಕೀಟಗಳು
ಅವಧಿ ಮುಗಿದ ಔಷಧಗಳು
ಘನತಾಜ್ಯವಾಗಿ ಭೂಮಿಯ
ಫಲವತ್ತೆ ಹೆಚ್ಚಿಸುವವು
ಇವುಕಿಂತಲು ಕೀಳು ನರನು
ಮಾನವನ ಜೀವಿತ ಅವಧಿ ಮುಗಿದ ಮೇಲೆ
ಭೂ ಒಡಲಲಿ ಆಳವಾಗಿ ಹುದಗಿ ಹಾಕಿ
ಅಥವಾ ಸುಟ್ಟ ಹಾಕುವರು
ಮನುಜನು ನಿಜ ಅರ್ಥೈಸಿಕೊಂಡರೂ
ಗರ್ವ ಸ್ವಾರ್ಥ ಬಿಡುವುದಿಲ್ಲ
“ಅಹಂ ಸ್ವಾರ್ಥಂ ಮಾನವೀಯತೆ ನಾಶಂ”
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ..