ಯಾರೂ ಪರಕೀಯರಲ್ಲ, ಎಲ್ಲರೂ ನಮ್ಮವರೇ – ಮಾತಾಜೀ ತ್ಯಾಗಮಯೀ ಅಭಿಪ್ರಾಯ.
ಚಳ್ಳಕೆರೆ ಡಿ.24

ಶ್ರೀಮಾತೆ ಶಾರದಾದೇವಿಯವರು ತಿಳಿಸಿದಂತೆ ಯಾರೂ ಪರಕೀಯರಲ್ಲ ಎಲ್ಲರೂ ನಮ್ಮವರೇ ಎಂಬ ಸಂದೇಶ ನಮ್ಮ ನಿತ್ಯ ಬದುಕಿಗೆ ಪ್ರಸ್ತುತ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.

ತ್ಯಾಗರಾಜ ನಗರದ ಶ್ರೀದತ್ತ ಮಂದಿರದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ “ಶ್ರೀಮಾತೆ ಶಾರದಾದೇವಿ”ಯವರ 173ನೇ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಆಧುನಿಕ ಬದುಕಿಗೆ ಶ್ರೀಮಾತೆ ಶಾರದಾದೇವಿಯವರ ಜೀವನ-ಸಂದೇಶಗಳ ಪ್ರಸ್ತುತತೆ” ಎಂಬ ವಿಷಯವಾಗಿ ಪ್ರವಚನ ನೀಡಿದರು.

ನಮಗೆ ಮನಃ ಶಾಂತಿ ಬೇಕಿದ್ದರೆ ಪರದೋಷ ನೋಡ ಬಾರದು, ನಮ್ಮ ದೋಷಗಳನ್ನು ನಾವೇ ನೋಡಿ ಕೊಳ್ಳಬೇಕು. ಯಾವಾಗಲೂ ಕಾರ್ಯನಿರತರಾಗಿರ ಬೇಕು, ಇದರಿಂದ ನಮ್ಮ ಮನಸ್ಸಿನಲ್ಲಿ ದೂರಾಲೋಚನೆಗಳು ಸುಳಿಯುವುದಿಲ್ಲ, ಆದ್ದರಿಂದ ಶಾರದಾಮಾತೆಯವರ ಜೀವನ ಮತ್ತು ಅವರು ನೀಡಿರುವ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು ಅವುಗಳ ಸಮರ್ಪಕ ಅನುಷ್ಠಾನದಿಂದ ಸಾರ್ಥಕ ಜೀವನ ನಮ್ಮದಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಸುಮಾ ಪ್ರಕಾಶ್ ಮತ್ತು ಸಂಗಡಿಗರಿಂದ ಸಾಮೂಹಿಕ ಶ್ರೀಸೌಂದರ್ಯ ಲಹರಿ ಪಾರಾಯಣ, ನವಲಗುಂದದ ಶ್ರೀಶಾರದೇಶ್ವರಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅನನ್ಯಮಯೀ ಅವರಿಂದ ಶ್ರೀಶಾರದಾ ಗಾನ ಲಹರಿ ಗಾನ-ಪ್ರವಚನ ಕಾರ್ಯಕ್ರಮ, ದಿವ್ಯತ್ರಯರಿಗೆ ಮಂಗಳಾರತಿ ಹಾಗೂ ಅನ್ನಪ್ರಸಾದ ವಿನಿಯೋಗ ನಡೆಯಿತು.
ಸತ್ಸಂಗದ ನಿರೂಪಣೆಯನ್ನು ಯತೀಶ್ ಎಂ ಸಿದ್ದಾಪುರ ಮಾಡಿದರೆ ಸ್ವಾಗತ-ಪರಿಚಯವನ್ನು ಶ್ರೀಮತಿ ಎಂ ಗೀತಾ ನಾಗರಾಜ್ ಮಾಡಿದರು,ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅವರು ವಂದನಾರ್ಪಣೆಯನ್ನು ನಡೆಸಿ ಕೊಟ್ಟರು.
ಜಯಂತ್ಯುತ್ಸವ ಸತ್ಸಂಗ ಕಾರ್ಯಕ್ರಮದಲ್ಲಿ ಡಾ, ಬಾಲಾಜೀ ವೆಂಕಟೇಶ್, ನಾಗಶಯನ ಗೌತಮ್, ಸುಬ್ರಹ್ಮಣ್ಯ ಶಾಸ್ತ್ರಿ, ಶ್ರೀನಾಥ್, ಮಂಜುನಾಥ್, ಗೀತಾ ಪ್ರಕಾಶ್, ಜಾನಕಿ, ಶ್ರೀನಿವಾಸ್, ರಂಗಮ್ಮ, ಪಂಕಜ, ಸರಸ್ವತಿ, ನಾಗರಾಜ್, ಗೀತಾ ವೆಂಕಟೇಶರೆಡ್ಡಿ, ವೆಂಕಟಲಕ್ಷ್ಮೀ, ಭಾರತಿ, ಸಂತೋಷ್, ಋತಿಕ್, ಮಾನ್ಯ,ಕವಿತಮ್ಮ, ವೀಣಾ, ರಶ್ಮಿ ಪಂಡಿತಾರಾಧ್ಯ, ಗೀತಾ, ಪ್ರಮೀಳಾ,ಮಂಜುಳಾ, ವಿಶಾಲಾಕ್ಷಿ, ಗಿರಿಜಾ, ಗಂಗಾಂಬಿಕೆ, ಸುಬ್ಬಣ್ಣ, ಅನುಸೂಯ ರಾಘವೇಂದ್ರ, ಕಾವೇರಿ, ಸಂಗೀತ, ರಶ್ಮಿ, ತಿಪ್ಪಮ್ಮ, ಜಯಮ್ಮ, ಲೀಲಾವತಿ, ನಾಗರತ್ನಮ್ಮ, ಶಾರದಾಮ್ಮ, ವೀರಮ್ಮ, ಶಿಲ್ಪ, ಶೋಭಾ, ರೂಪ ಸೇರಿದಂತೆ 350 ಕ್ಕೂ ಹೆಚ್ಚು ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

