ವಿಶ್ವಗುರು ಜಗಜ್ಯೋತಿ ಬಸವಣ್ಣನವರ – ಜಯಂತಿ ಆಚರಣೆ.
ಕೊಟ್ಟೂರು ಏ .30

ಸಮಾಜ ಸುಧಾರಕ ಲಿಂಗಾಯತ ಧರ್ಮದ ಸ್ಥಾಪಕ ವಚನ ಚಳುವಳಿಯ ಪಿತಾಮಹ ಸಕಲ ಜೀವಿಯನ್ನು ಅಪ್ಪಿ ಕೊಳ್ಳುವ ಮಹಾ ಮಾನವತವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿ ಕೊಟ್ಟೂರಿನ ಪಟ್ಟಣ ಪಂಚಾಯಿತಿಯಲ್ಲಿ ಆಚರಣೆ ಮಾಡಲಾಯಿತು. 12 ನೇ. ಶತಮಾನದ ಹಿಂದಿನ ಕಾಲಘಟ್ಟ ದಿಂದ ಕೊಳೆತು ನಾರುತ್ತಿದ್ದ ಸಾಮಾಜಿಕ ವ್ಯವಸ್ಥೆಯನ್ನು ಶುದ್ಧೀಕರಣ ಗೊಳಿಸಲು ಹೊಸ ಸಾಮಾಜಿಕ ಕ್ರಾಂತಿಯನ್ನು ಹುಟ್ಟು ಹಾಕಿದ್ದ ಸೂರ್ಯ ಬಸವಣ್ಣ. ಜಾತಿ ಮತ ಪಂಥ ಮೇಲು ಕೀಳು ಎಂಬ ಅಸಮಾನತೆಯ ವಿರುದ್ಧ ಹೋರಾಡಿದಂತಹ ವ್ಯಕ್ತಿ ಬಸವಣ್ಣ. ಇಂತಹ ಮಹಾನ್ ನಾಯಕರು ಹುಟ್ಟಿದ ಭೂಮಿ ನಮ್ಮದು. ಆದರೆ ಇತ್ತೀಚಿನ ಸಮಾಜದಲ್ಲಿ ಕೇವಲ ಬಸವಣ್ಣ ಲಿಂಗಾಯಿತರು ಅಂಬೇಡ್ಕರ್ ಮಾದಿಗರು ಸಂಗೊಳ್ಳಿ ರಾಯಣ್ಣ ಕುರುಬರು ಇದೇ ತರಹ ಅನೇಕ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಒಂದೇ ಜಾತಿಗೆ ಸೀಮಿತವಾಗಿ ಬಿಟ್ಟಿದ್ದೆ. ಆದರೆ ಇವರ ಆದರ್ಶ ಮಾತ್ರ ಮನುಷ್ಯನ ಜೀವಕ್ಕೆ ಅವಶ್ಯಕತೆ ಎಂಬುದನ್ನು ಮರೆತು ಇತ್ತೀಚಿಗೆ ಸ್ನೇಹಿತನೊಬ್ಬ ನಗರದಲ್ಲಿ ಮನೆ ಹುಡುಕಾಡುವಾಗ ಜಾತಿಯ ಕಾರಣದಿಂದ ಮನೆ ಸಿಗದೇ ಅನುಭವಿಸಿದ್ದ ಯಾತನೆಯನ್ನು ಕೇಳುವಾಗ, ಇತ್ತೀಚಿಗೆ ಕೊಪ್ಪಳದ ಗ್ರಾಮದ ಒಂದರಲ್ಲಿ ಬಾಲಕನೊಬ್ಬ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಅಪವಿತ್ರ ವಾಗಿದೆಯಂತೆ ಎಂದು ಸವರ್ಣಿಯರು ಸೇರಿ ಬಾಲಕನ ಪಾಲಕರಿಗೆ ಛೀಮಾರಿ ಹಾಕಿ ದಂಡ ವಿಧಿಸುವಾಗ, ಕಳೆದ ಕೆಲವು ವರ್ಷಗಳ ಹಿಂದೆ ರಾಜಸ್ಥಾನದ ಗ್ರಾಮ ಒಂದು ಶಾಲೆಯಲ್ಲಿ ದಲಿತ ಬಾಲಕನೊಬ್ಬ ನೀರಿನ ಹೂಜಿಯನ್ನು ಮುಟ್ಟಿದ್ದಕ್ಕಾಗಿ ಶಿಕ್ಷಕನೇ ಬಾಲಕನನ್ನು ಥಳಿಸಿ ಕೊಂದದ್ದು ಕೇಳಿದಾಗ ಕರುಳು ಹಿಂಡುತ್ತದೆ.

ಇಂತಹ ಅನೇಕ ಘಟಕಗಳು ಇನ್ನೂ ನಮ್ಮ ಸಮಾಜದಲ್ಲಿ ನಡೆಯುತ್ತಿರುವುದು ಕೆಲ ಮನಸ್ಸುಗಳಿಗೆ ನೋವಾಗುತ್ತದೆ. ಇದಕ್ಕಾಗಿಯೇ 12 ನೇ. ಶತಮಾನದಲ್ಲಿಯೇ ಇಂತಹ ಘಟನೆ ನಡೆಯ ಬಾರದೆಂದು ಎಲ್ಲರೂ ಸಮಾನದಿಂದ ಕಾಣಬೇಕೆಂದು ಅನೇಕ ವಚನಗಳ ಮೂಲಕ ತಿಳಿಸಿ ಸಾರಿದ್ದು ಇಂದಿನ ಜನತೆ ಅರಿತು ಕೊಳ್ಳಬೇಕಾಗಿದೆ ಎಂದು ಬದ್ದಿ ಮರಿಸ್ವಾಮಿ ಡಿಎಸ್ಎಸ್ ಜಿಲ್ಲಾ ಸಂಚಾಲಕರು ತಿಳಿಸಿದರು. ಈ ಸಂದರ್ಭದಲ್ಲಿ ಬದ್ದಿ ರೇಖಾ ರಮೇಶ್ ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಸಿದ್ದೇಶಪ್ಪ ಉಪಾಧ್ಯಕ್ಷರು ಪಟ್ಟಣ ಪಂಚಾಯಿತಿ. ಎ.ನಸರುಲ್ಲಾ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಪಟ್ಟಣ ಪಂಚಾಯತಿಯ ಕೆಲ ಸದಸ್ಯರು ಹಾಗೂ ಮತ್ತಿತರು ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು