ಸರ್ವ ಧರ್ಮದವರು ಸೇರಿ ಬಸವ ಜಯಂತಿಯನ್ನು – ಅದ್ಧೂರಿಯಿಂದ ಆಚರಿಸಿದರು.
ಕಲಕೇರಿ ಏ.30

ಕಲಕೇರಿ ಗ್ರಾಮದಲ್ಲಿ ಮೇನ್ ಬಜಾರದಲ್ಲಿ ಊರಿನ ಎಲ್ಲಾ ಸರ್ವ ಧರ್ಮದವರು ಸೇರಿ ಬಸವ ಜಯಂತಿಯನ್ನು ಅದ್ದೂರಿಯಿಂದ ಆಚರಿಸಿದರು. ಗುರುಪಾದಯ್ಯ ಚಿಕ್ಕಮಠ ಬಸವೇಶ್ವರ ಫೋಟೋಗೆ ಪೂಜೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆ.ಎ.ಎಸ್. ಅಧಿಕಾರಿಗಳಾದ ಕನಕರಾಜ್ ವಡ್ಡರ್ ಇವರು ಕಾಯಕವೇ ಕೈಲಾಸ ಎಂಬ ಸಿದ್ಧಾಂತಗಳನ್ನು ನಾವು ಎಲ್ಲರೂ ಜಾತಿ ಧರ್ಮ ಎನ್ನದೆ ಎಲ್ಲರೂ ಒಂದಾಗಿ ಬಸವಣ್ಣನವರು ಹೇಳಿದಂತ ವಚನಗಳನ್ನು ಕೇಳಿ ನಾವೆಲ್ಲರೂ ಒಂದಾಗಿ ಜಯಂತಿಯನ್ನು ಆಚರಣೆ ಮಾಡಿ ಬಸವಣ್ಣನವರು ವಚನಗಳನ್ನು ಪಾಲನೆ ಮಾಡಿ ಆ ಮಾರ್ಗದಲ್ಲಿ ನಾವೆಲ್ಲರೂ ಒಂದಾಗಿ ಇರಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಸೋಮಶೇಖರ್ ಬಡಿಗೇರ್. ಗುರು ಕೌದಿ ಶಿಕ್ಷಕರು. ಸಂಜೀವ ಉತಾಳೆ. ಸದಾಶಿವ ಉತಾಳೆ. ಬಸಪ್ಪ ಬೈಚಬಾಳ. ರಮೇಶ್ ಹೊಸಮನಿ. ಹುಸೇನ್ ವಲ್ಲಿಭಾವಿ. ದೇವು ವಡ್ಡರ್. ಆನಂದ್ ಹೊಸಮನಿ. ಇನ್ನೂ ಹಲವಾರು ಗ್ರಾಮಸ್ಥರು ಸೇರಿ ಬಸವ ಜಯಂತಿಯನ್ನು ಅದ್ದೂರಿಯಿಂದ ಆಚರಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ