ಸಹಕಾರಿ ಸಂಘಗಳು ಸದೃಢವಾಗಿ ಬೆಳೆಯಲು ಪ್ರತಿಯೊಬ್ಬರ ಸಹಕಾರ ಮುಖ್ಯ – ಶಾಸಕ ಡಾ. ಶ್ರೀನಿವಾಸ್.

ಕೂಡ್ಲಿಗಿ ಫೆ.12

ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರ ಸಂಘಗಳ ಪಾತ್ರಅಮೂಲ್ಯವಾದದ್ದು. ಇಂತಹ ಸಹಕಾರಿ ತತ್ವದ ಮೂಲಕ ಸಂಘ, ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ನಿರತವಾಗಿವೆ ಎಂದು ಶಾಸಕ ಡಾ ಶ್ರೀನಿವಾಸ್ ತಿಳಿಸಿದರು.ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ.ಬೆಂಗಳೂರು ಹಾಗೂ ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್ ನಿ, ಹೊಸಪೇಟೆ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಹೊಸಪೇಟೆ ಹಾಗೂ ಸಹಕಾರ ಇಲಾಖೆ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಕೂಡ್ಲಿಗಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ನೂತನವಾಗಿ ಆಯ್ಕೆಯಾಗಿ ಬಂದ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು. ಹಾಗೂ ನಿರ್ದೇಶಕರಿಗೆ ಒಂದು ದಿನದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಕೂಡ್ಲಿಗಿ ತಾಲೂಕು ಚಿಕ್ಕಜೋಗಿಹಳ್ಳಿ ಕಲ್ಯಾಣ ಮಂಟಪ, ಸಭಾಂಗಣದಲ್ಲಿ. ಶಾಸಕ ಡಾ ಶ್ರೀನಿವಾಸ್ ರವರು ಸಹಕಾರಿ ಪಿತಮಹಾ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರ ಸಂಘಗಳ ಪಾತ್ರ ಅಮೂಲ್ಯವಾದದ್ದು.

ಇಂತಹ ಸಹಕಾರಿ ತತ್ವದ ಮೂಲಕ ಸಂಘ, ಸಂಸ್ಥೆಗಳು ಸಮಾಜ ಮುಖಿ ಕಾರ್ಯಗಳಲ್ಲಿ ನಿರತವಾಗಿವೆ. ಸಹಕಾರಿ ಸಂಘಗಳ ಕಾನೂನಿನ ತಿಳಿವಳಿಕೆ ಮತ್ತು ಮಾಹಿತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ, ಸದಸ್ಯರಿಗೆ ಕಾರ್ಯಾಗಾರ ಆಯೋಜಿಸಲಾಗಿದೆ. ಕಾರ್ಯಾಗಾರದ ಸದುಪಯೋಗ ಪಡೆದು ಕೊಂಡು ಪಾರದರ್ಶಕ ಆಡಳಿತ ನಡೆಸಬೇಕು. ಸದಸ್ಯ ರೈತರಿಗೆ ಸರಕಾರ ನೀಡುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಬೇಕು ಒಂದು ಸಹಕಾರ ಸಂಘ ಅಭಿವೃದ್ಧಿಯಾಗ ಬೇಕಾದರೆ ಅಧ್ಯಕ್ಷರು. ಸದಸ್ಯರ ಸಹಕಾರ ಅಗತ್ಯ. ಅಧ್ಯಕ್ಷರು, ಸಂಘದ ಸದಸ್ಯರ, ನೌಕರರ, ಕಾರ್ಯನಿರ್ವಾಹಕ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಿ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ನಾನಂತೂ. ಯಾವುದೇ ಪಾರ್ಟಿ ಪಕ್ಷ ಅನ್ನೋದೇ. ಪ್ರಾಮಾಣಿಕವಾಗಿ. ರೈತರ ಪರವಾಗಿ ನಿಲ್ಲುತ್ತೇನೆ. ಅತಿ ಶೀಘ್ರದಲ್ಲಿಯೇ. ಕೂಡ್ಲಿಗಿ ತಾಲೂಕಿನಲ್ಲಿ ರೈತರಿಗೋಸ್ಕರವಾಗಿ ರೈತರ ಭವನ. ನಿರ್ಮಾಣ ಮಾಡಿಸುತ್ತೇನೆ ಎಂದರು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ತಿಪ್ಪೇಸ್ವಾಮಿ ಮಾತನಾಡಿ. ನಿತ್ಯವೂ ಬಿರು ಬಿಸಲಿನಲ್ಲಿ ಭೂಮಿಯಲ್ಲಿ ಶ್ರಮಪಟ್ಟು ದುಡಿಯುವ ರೈತರು, ನಿತ್ಯ ಪರಿಶ್ರಮ ಪಡುವ ಕಾಯಕ ಜೀವಿಗಳೇ ನಮಗೆ ನಿಜವಾದ ದೇವರು ಎಂದರು. ನಾಗಮಣಿ ಜಿಂಕಲ್. ಕೆ.ಎಂ.ಎಫ್ ನಿರ್ದೇಶಕರು ಮಾತನಾಡಿ ಸಹಕಾರ ಸಂಘಗಳ ಸದೃಢತೆಯಿಂದ ಗ್ರಾಮೀಣ ಭಾಗದಲ್ಲಿನ ಜನರು ಸ್ವಾವಲಂಬನೆಯ ಜೀವನ ಕಟ್ಟಿ ಕೊಳ್ಳುತ್ತಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಯಶಸ್ವಿನಿ ಯೋಜನೆ ಪ್ರತಿಯೊಬ್ಬರು ಸದುಪಯೋಗ ಪಡಿಸಿ ಕೊಳ್ಳಬೇಕು ಸಹಕಾರ ಸಂಘಗಳ ಬಲವರ್ಧನೆಯಲ್ಲಿ ಕಾರ್ಯ ನಿರ್ವಾಹಕರ ಪಾತ್ರ ಬಹು ಮುಖ್ಯವಾಗಿರುತ್ತದೆ ಎಂದರು.

ಬಾಕ್ಸ್:-

ಕ್ಷೇತ್ರದಲ್ಲಿ ರೈತರಿಗೋಸ್ಕರ ಈ ನನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಗಳನ್ನು ಜಾರಿ ಗೊಳಿಸುವ ನನ್ನ ಮುಖ್ಯ ಗುರಿ. ಕ್ಷೇತ್ರದ ರೈತರ ಗೋಸ್ಕರವಾಗಿ ಸಹಕಾರ ಸಚಿವರ ಜೊತೆ. ನಮ್ಮ ಕೂಡ್ಲಿಗಿ ಕ್ಷೇತ್ರದಲ್ಲಿ ರೈತರ ಭವನ ಮಾತನಾಡಿದ್ದೇನೆ. ಅತಿ ಶೀಘ್ರದಲ್ಲಿ ನಮ್ಮ ಕೂಡ್ಲಿಗಿನಲ್ಲಿ ರೈತರ ಭವನ ಮಾಡುತ್ತೇನೆ.

ಶಾಸಕ ಡಾ. ಶ್ರೀನಿವಾಸ್.

ಈ ಸಂದರ್ಭದಲ್ಲಿ. ಶ್ರೀ ಕೆ.ತಿಪ್ಪೇಸ್ವಾಮಿ, ಅಧ್ಯಕ್ಷರು, ಬಿಡಿಸಿಸಿ ಬ್ಯಾಂಕ್ ನಿ. ಹೊಸಪೇಟೆ ಬೋಸಯ್ಯ. ಅಧ್ಯಕ್ಷರು ಎಪಿಎಂಸಿ ಕೂಡ್ಲಿಗಿ. ನಾಗಮಣಿ ಜಿಂಕಲ್. ಕೆಎಂಎಫ್ ನಿರ್ದೇಶಕರು ಶ್ರೀ ಐ.ದಾರುಕೇಶ್, ಉಪಾಧ್ಯಕ್ಷರು, ಬಿಡಿಸಿಸಿ ಬ್ಯಾಂಕ್ ನಿ. ಹೊಸಪೇಟೆ ಬಿ.ಕೆ ಕೆರೆಕೊಡಪ್ಪ, ಉಪಾಧ್ಯಕ್ಷರು, ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್ ನಿ. ಹೊಸಪೇಟೆ.ಕೆ.ಜಿ ಕುಮಾರ ಗೌಡ, ನಿರ್ದೇಶಕರು ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್ ನಿ. ಹೊಸಪೇಟೆ ಬಿ.ಜಯಪ್ರಕಾಶ್‌, ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳು, ಬಿಡಿಸಿಸಿ ಬ್ಯಾಂಕ್ ನಿ. ಹೊಸಪೇಟೆ ಬಿ.ಎ ಕೇಸರಿಮಠ, ಸಹಕಾರ ಸಂಘಗಳ ಉಪ ನಿಬಂಧಕರು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಜೆ.ಎಸ್ ವಿನಾಯಕ, ಉಪ ನಿರ್ದೇಶಕರು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಶ್ರೀ ಟಿ.ಎಸ್ ರವಿಕುಮಾರ್, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹೊಸಪೇಟೆ ಉಪ ವಿಭಾಗ ಎನ್.ಎಂ ಶಿವಕುಮಾರ್, ಸಂ&ಮೌ ವಿಭಾಗ ಕ.ರಾ.ಸ.ಮ.ಮಂ. ನಿ. ಬೆಂಗಳೂರು ಶ್ರೀ ಎನ್.ಎಂ ಶಿವಕುಮಾರ್, ಸಂ&ಮೌ ವಿಭಾಗ ಕ.ರಾ.ಸ.ಮ.ಮಂ.ನಿ. ಬೆಂಗಳೂರು ಶ್ರೀ ಗಿರಿಧರ್ ಪೂಜಾರಿ, ಹಿರಿಯ ಸಂಪನ್ಮೂಲ ವ್ಯಕ್ತಿಗಳು ಶ್ರೀ ನಾಗರಾಜ, ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳು ಬ.ಜಿ.ಸ.ಯೂ.ನಿ. ಹೊಸಪೇಟೆ ಮತ್ತು ತಾಲೂಕಿನ ಎಲ್ಲಾ ಅಧ್ಯಕ್ಷರು. ವಿ.ಎಸ್.ಎಸ್.ಎನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್. ವೀರೇಶ್.ಕೆ.ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button