ಆಹಾರ ಇಲಾಖೆಯ ಶಿರಸ್ತೇದಾರ ಇವರು – ಮಾಡಿದ್ದೆ ದರ್ಬಾರ್.

ರೋಣ ಜ.04

ಕಾಲಹರಣ ಮಾಡುತ್ತೀರುವ ಶಾಂತಾ ಚವಡಿ, ಸಾರ್ವಜನಿಕರ ಸೇವೆಗೆ ಗಮನ ಹರಿಸುವುದು ಯಾವಾಗ…..?

ತಾಲೂಕ ಆಡಳಿತದ ಆಹಾರ ವಿಭಾಗದ ಶಿರಸ್ತೇದಾರ ಶಾಂತಾ ಚವಡಿ ಇವರು ದಿನ ನಿತ್ಯದ ಸಾರ್ವಜನಿಕ ಸೇವೆಗೆ ಸಮಯಕ್ಕೆ ಸರಿಯಾಗಿ ಜನರ ಸೇವೆಗೆ ಲಭ್ಯ ಇರುವುದಿಲ್ಲ ಹಾಗೂ ಕೇವಲ ಮೊಬೈಲ್ ಹಿಡಿದು ಕೊಂಡು ಕುಳಿತು ಕಾಲಹರಣ ಮಾಡುತ್ತಾರೆ. ಅದೇ ರೀತಿ ಗ್ರಾಮೀಣ ಪ್ರದೇಶದ ಜನರಿಗೆ ಬಹಳ ತೊಂದರೆ ಮಾಡುತ್ತಿದ್ದಾರೆ. ಎಂದು ಸಾರ್ವಜನಿಕರು ಶಿರಸ್ತೇದಾರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಧ್ಯಾಹ್ನ 12 ಗಂಟೆಯಾದರೂ ಕಚೇರಿಯಲ್ಲಿ ಲಭ್ಯವಿರುವುದಿಲ್ಲ ಪಡಿತರ ಚೀಟಿ ಹೆಸರು ಸೇರ್ಪಡೆ ತಿದ್ದುಪಡಿ ಆನ್ಲೈನ್ ಹಾಕಿಸಲು ತಿಂಗಳಾನು ಗಟ್ಟಲೆ ಸರ್ವರ್ ಸಮಸ್ಯೆಯಿಂದ ಜನರು ಕಂಗಾಲು ಆದರೂ ಇನ್ನೊಂದು ಕಡೆ ಶಿರಸ್ತೇದಾರ ಆನ್ಲೈನ್ ಹಾಕಿಸಿದ ಮನವಿ ಪಡೆದು, ಇಂದು ಬಾ ನಾಳೆ ಬಾ ಎಂದು ಸಾರ್ವಜನಿಕರನ್ನು ಅಲೆದಾಡಿಸುವುದು ದೊಡ್ಡ ದುರಂತವಾಗಿದೆ.

ಸಮಯ ಪ್ರಜ್ಞೆ ಇಲ್ಲದ ಆಹಾರ ಶಿರಸ್ತೇದಾರ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಜನರು ಕಚೇರಿಗೆ ಬಂದು ತಾಸು ಘಂಟಲೆ ಕಾಯ್ದು ಬೇಸರವಾಗಿ ಕರೆ ಮಾಡಿದರೆ ಕರೆಗೂ ಸಹ ಉತ್ತರ ನೀಡುವುದಿಲ್ಲ. ಜನರು ಕಚೇರಿ ಸೇವೆ ಪಡೆಯಲು ಬಂದಾಗ ಖಾಲಿ ಕುರ್ಚಿ ಕಂಡು ಕಾಯ್ದು ಸುಸ್ತಾಗಿ ಹೋಗುತ್ತಿದ್ದಾರೆ. ರೋಣ ಆಹಾರ ವಿಭಾಗಕ್ಕೆ ಸಮಯಕ್ಕೆ ಸರಿಯಾಗಿ ಜನರ ಸೇವೆ ಒದಗಿಸಲು ಬೇರೆ ಶಿರಸ್ತೇದಾರ ನೇಮಿಸ ಬೇಕೆಂದು ಸರಕಾರಕ್ಕೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಎಸ್.ವಿ ಸಂಕನಗೌಡ್ರ ರೋಣ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button