ಮಕ್ಕಳು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಕ್ರಿಯಾಶೀಲರಾಗಿ ದೈಹಿಕ ಮತ್ತು ಮಾನಸಿಕ ಸದೃಡರಾಗಿರಿ ಎಂದು ಶಾಸಕರು ಕರೆ ನೀಡಿದರು.

ಗಾನಗಟ್ಟಿ ಆಗಷ್ಟ.11

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಉಜ್ಜಿನಿ ಹೋಬಳಿಯ ಗಾಣಗಟ್ಟೆ  ಗ್ರಾಮದಲ್ಲಿ ಇಂದು ಉಜ್ಜಿನಿ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಕೂಟ -2023-24 ರ ಆಯೋಜನೆಗೊಂಡಿದ್ದ ಕ್ರೀಡಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಕ್ರೀಡಾ  ಜ್ಯೋತಿಯನ್ನು ಬೆಳಗಿಸಿದರು.   ಈ ಸಂದರ್ಭದಲ್ಲಿ ಹಿರಿಯ ಪ್ರಾಥಮಿಕ ಶಾಲೆಯ  ಬೆನಕನಹಳ್ಳಿ, ಹಾಗೂ ಉಜ್ಜಿನಿ, ನಿಂಬಳಗೆರೆ, ಮಂಗಾಪುರ, ಭೈರದೇವರಗುಡ್ಡ, ಗಾಣಗಟ್ಟೆ,  ಗ್ರಾಮಗಳಿಂದ ಕ್ರೀಡೆಯನ್ನು ಹಾಡಲು ಬಂದ ನೂರಾರು ಮಕ್ಕಳನ್ನು ಕ್ರೀಡಾ ಸ್ಪರ್ಧಾಳಗಳನ್ನು ಪರಿಚಯಿಸಿಕೊಂಡು ಶಾಸಕರು ತಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡು ನಾನು  ಬಾಲ್ಯದಲ್ಲಿ ಬಣ್ಣ ಬಣ್ಣದ ಉಡುಪುಗಳನ್ನು ಧರಿಸಿ ನಾನು ಸಹ ಕ್ರೀಡಾ ಪಟುವಾಗಿ  ಭಾಗವಹಿಸಿದ್ದೆನು ಎಂದು ತಿಳಿಸಿದರು ಹಾಗೆ ವಿವಿಧ ಬಗೆಯ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕವಾಗಿ ಸದೃಡರಾಗಿ ಬೆಳೆಯಲು ಅನುಕೂಲವಾಗುತ್ತದೆ.  ಈ ಸಂದರ್ಭದಲ್ಲಿ ಉಜ್ಜಿನಿ ವಲಯ ಮಟ್ಟದ ಶಾಲೆಯ ಶಿಕ್ಷಕರು , ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ನಾನಾ ಗ್ರಾಮಗಳಿಂದ ನೆರೆದಂತ ಮುಖಂಡರು , ಕ್ರೀಡಾ ಸ್ಪರ್ಧೆಗಳನ್ನು ನೋಡಲು ಅಭಿಮಾನಿಗಳು ನೆರೆದಿದ್ದರು.

ಜಿಲ್ಲಾ ವರದಿಗಾರರು: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ 

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button